ಹುಬ್ಬಳ್ಳಿಯಿಂದ ಮಂಗಳೂರಿಗೆ 1.14 ಕೋಟಿ ಹಣ ಸಾಗಿಸುತ್ತಿದ್ದ ವ್ಯಕ್ತಿಯ ಸೆರೆ ; ಹವಾಲಾ ಜಾಲ ಶಂಕೆ 

23-01-23 01:07 pm       HK News Desk   ಕರ್ನಾಟಕ

ಯಾವುದೇ ದಾಖಲೆಯಿಲ್ಲದೆ ಮಂಗಳೂರಿಗೆ ಸಾಗಿಸುತ್ತಿದ್ದ 1.14 ಕೋಟಿ ರೂಪಾಯಿಗಳನ್ನು ವಶಕ್ಕೆ ಪಡೆದ ಹುಬ್ಬಳ್ಳಿ ಉಪನಗರ ಠಾಣಾ ಪೊಲೀಸರು ಒಬ್ಬನನ್ನು ಅರೆಸ್ಟ್ ಮಾಡಿದ್ದಾರೆ. 

ಹುಬ್ಬಳ್ಳಿ, ಜ.23: ಯಾವುದೇ ದಾಖಲೆಯಿಲ್ಲದೆ ಮಂಗಳೂರಿಗೆ ಸಾಗಿಸುತ್ತಿದ್ದ 1.14 ಕೋಟಿ ರೂಪಾಯಿಗಳನ್ನು ವಶಕ್ಕೆ ಪಡೆದ ಹುಬ್ಬಳ್ಳಿ ಉಪನಗರ ಠಾಣಾ ಪೊಲೀಸರು ಒಬ್ಬನನ್ನು ಅರೆಸ್ಟ್ ಮಾಡಿದ್ದಾರೆ. 

ಹುಬ್ಬಳ್ಳಿ ಕೇಶವಾಪುರದ ರಿತಿಕ್ ಬಸವ (23) ಬಂಧಿತ ಆರೋಪಿ. ಶನಿವಾರ ರಾತ್ರಿ ಹುಬ್ಬಳ್ಳಿ ಹಳೆ ಬಸ್ ನಿಲ್ದಾಣದಿಂದ ಬ್ಯಾಗ್ ಹಿಡಿದು ಮಂಗಳೂರಿಗೆ ಹೊರಟಿದ್ದ. ಪೊಲೀಸರು ಬ್ಯಾಗ್ ತಪಾಸಣೆ ನಡೆಸಿದಾಗ, ಹಣದ ಕಂತೆ ಪತ್ತೆಯಾಗಿದೆ. ಬ್ಯಾಗ್ ನಲ್ಲಿ ಯಾವುದೇ ದಾಖಲೆಗಳು ಇಲ್ಲದೆ ಭಾರೀ ಪ್ರಮಾಣದ ಹಣವನ್ನು ಇಟ್ಟುಕೊಂಡಿದ್ದಕ್ಕೆ ಪೊಲೀಸರು ವಶಕ್ಕೆ ಪಡೆದಿದ್ದಾರೆ. 

ವಿಚಾರಣೆ ವೇಳೆ ದಾಖಲೆ ಇಲ್ಲದೆ  ಹಣ ಸಾಗಣೆ ಮಾಡುತ್ತಿರುವುದನ್ನು ಒಪ್ಪಿಕೊಂಡಿದ್ದಾನೆ. ಹಣ ಕೊಟ್ಟವರು ಯಾರು, ಎಲ್ಲಿಗೆ ಕಳಿಸಬೇಕಿತ್ತು ಎಂಬೆಲ್ಲ ಮಾಹಿತಿಯನ್ನು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಮುಂಬೈ, ಹುಬ್ಬಳ್ಳಿಯಿಂದ ಮಂಗಳೂರಿಗೆ ಹವಾಲಾ ಹಣದ ನೆಟ್ವರ್ಕ್ ಇದ್ದು ಅದೇ ಜಾಲದ ಹಣ ಆಗಿರುವ ಶಂಕೆಯಿದೆ. ಪೊಲೀಸರು ಹವಾಲಾ ಹಣದ ಬಗ್ಗೆ ಮಾಹಿತಿ ಬಿಟ್ಟು ಕೊಟ್ಟಿಲ್ಲ.

Hubballi 23 year old arrested for carrying 1 crore cash without documents to Mangalore at Bus stand. Police suspect Hawala. The police are yet to ascertain to whom the money was to be reached in Mangalore.