ಅಪಘಾತ ; ಹೊರನಾಡು ದೇವಸ್ಥಾನಕ್ಕೆ ತೆರಳಿ ಹಿಂತಿರುಗುತ್ತಿದ್ದ ಇಂಜಿನಿಯರಿಂಗ್ ವಿದ್ಯಾರ್ಥಿ ಸಾವು 

02-02-23 10:24 pm       HK News Desk   ಕರ್ನಾಟಕ

ಹೊರನಾಡು ದೇವಸ್ಥಾನಕ್ಕೆ ತೆರಳಿ ಬೈಕಿನಲ್ಲಿ ಹಿಂತಿರುಗುತ್ತಿದ್ದ ಇಂಜಿನಿಯರಿಂಗ್ ವಿದ್ಯಾರ್ಥಿ ಕಾರ್ಕಳ ತಾಲೂಕಿನ ಮಾಳ ಗೇಟ್ ಬಳಿ ಟ್ಯಾಂಕರ್ ಡಿಕ್ಕಿಯಾಗಿ ಸಾವು ಕಂಡಿದ್ದಾರೆ. 

ಕಾರ್ಕಳ, ಫೆ.2 : ಹೊರನಾಡು ದೇವಸ್ಥಾನಕ್ಕೆ ತೆರಳಿ ಬೈಕಿನಲ್ಲಿ ಹಿಂತಿರುಗುತ್ತಿದ್ದ ಇಂಜಿನಿಯರಿಂಗ್ ವಿದ್ಯಾರ್ಥಿ ಕಾರ್ಕಳ ತಾಲೂಕಿನ ಮಾಳ ಗೇಟ್ ಬಳಿ ಟ್ಯಾಂಕರ್ ಡಿಕ್ಕಿಯಾಗಿ ಸಾವು ಕಂಡಿದ್ದಾರೆ. 

ಮಂಗಳೂರಿನ ಕರಾವಳಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ವಿದ್ಯಾರ್ಥಿಯಾಗಿದ್ದ ಆಂಧ್ರಪ್ರದೇಶ ಮೂಲದ ವಿದ್ಯಾರ್ಥಿ ವೈಭವ್ (21) ಮೃತ ಯುವಕ. ಈತ ತನ್ನ ಸ್ನೇಹಿತೆ ಕೋಲಾರ ಮೂಲದ ವಿದ್ಯಾರ್ಥಿನಿ ಜೊತೆಗೆ ಬೈಕಿನಲ್ಲಿ ಹೊರನಾಡು ದೇವಸ್ಥಾನಕ್ಕೆ ತೆರಳಿದ್ದರು.‌ 

ಸಂಜೆ ವೇಳೆಗೆ ಹಿಂತಿರುಗುತ್ತಿದ್ದಾಗ ಬೈಕಿನ ಮೇಲೆ ಟ್ಯಾಂಕರ್ ಹರಿದಿದೆ. ಇದರಿಂದ ಸವಾರ ರಸ್ತೆಗೆ ಅಪ್ಪಳಿಸಿ ಸ್ಥಳದಲ್ಲೇ ಸಾವು ಕಂಡಿದ್ದಾರೆ. ವಿದ್ಯಾರ್ಥಿನಿಯನ್ನು ಕಾರ್ಕಳ ಸರಕಾರಿ ಆಸ್ಪತ್ರೆಗೆ ದಾಖಲಿಸಿದ್ದು ಅಪಾಯದಿಂದ ಪಾರಾಗಿದ್ದಾರೆ.

A medical student was killed and another seriously injured after the bike they were travelling in collided with a tanker.  The accident happened here on the Bajagoli – Mala highway. The duo were riding on a bike when the accident happened. The deceased student has been identified as Vaibha, a native of Maharashtra state.