ಬ್ರೇಕಿಂಗ್ ನ್ಯೂಸ್
01-12-20 01:57 pm Headline Karnataka News Network ಕರ್ನಾಟಕ
ಬೆಂಗಳೂರು, ಡಿ.1: ನಮ್ಮಿಂದ ಸಹಾಯ ಪಡೆದು, ಸರಕಾರ ರಚಿಸಿಕೊಂಡು ಅಧಿಕಾರ ಅನುಭವಿಸುತ್ತಿರುವ ಮಂದಿ ನನ್ನ ಕಷ್ಟಕಾಲದಲ್ಲಿ ಸಹಾಯಕ್ಕೆ ಬರಲಿಲ್ಲ ಎಂದು ವಿಧಾನ ಪರಿಷತ್ ಸದಸ್ಯ ಎಚ್. ವಿಶ್ವನಾಥ್ ಕಿಡಿಕಾರಿದ್ದಾರೆ.
ಈ ಬಗ್ಗೆ ಮಾಧ್ಯಮದ ಪ್ರಶ್ನೆಗೆ ಉತ್ತರಿಸಿದ ವಿಶ್ವನಾಥ್, ನಾನೇನು ಸಚಿವ ಸ್ಥಾನಕ್ಕೆ ಕಾಯುತ್ತಿರುವ ಮನುಷ್ಯ ಅಲ್ಲ. ರಾಜಕಾರಣವನ್ನು ವ್ಯವಹಾರದ ರೂಪದಲ್ಲಿ ತೆಗೆದುಕೊಂಡವನೂ ನಾನಲ್ಲ. ಸಾಂಸ್ಕೃತಿಕ ಹೋರಾಟದ ಪ್ರತೀಕವಾಗಿ ರಾಜಕೀಯ ಮಾಡುತ್ತಾ ಬಂದವನು. ಸಚಿವನಾಗಿ, ಶಾಸಕನಾಗಿ ನನ್ನ ಕಾರ್ಯ ವೈಖರಿ ಜನರಿಗೆ ಗೊತ್ತಿದೆ. ಆದರೆ ನನ್ನ ಕಷ್ಟಕಾಲದಲ್ಲಿ ಎಲ್ಲರೂ ಕೈಬಿಟ್ಟರು ಎಂದು ಅಸಮಾಧಾನ ವ್ಯಕ್ತಪಡಿಸಿದರು.
ವಿಧಾನ ಪರಿಷತ್ ಚುನಾವಣೆಗೆ ಕೋರ್ ಕಮಿಟಿ ಮೊದಲ ಪಟ್ಟಿ ಕಳುಹಿಸಿದ್ದಾಗ ನನ್ನ ಹೆಸರಿತ್ತು. ಆದರೆ, ಆಬಳಿಕ ಪಟ್ಟಿಯಲ್ಲಿ ಹೆಸರು ಮಾಯವಾಗಿತ್ತು. ಇದು ಹೇಗಾಯ್ತು ಎನ್ನುವುದು ನನಗೆ ತಿಳಿದಿಲ್ಲ. ನನ್ನ ಹೆಸರನ್ನು ಯಾಕಾಗಿ ಪಟ್ಟಿಯಿಂದ ತೆಗೆಸಿದರು ಎನ್ನುವುದೂ ತಿಳಿದಿಲ್ಲ ಎಂದು ಪರೋಕ್ಷವಾಗಿ ಸಂಘ ಪರಿವಾರದ ವಿರುದ್ಧ ಅಸಮಾಧಾನ ತೋಡಿಕೊಂಡರು. ಹೈಕೋರ್ಟ್ ತೀರ್ಪು ಸಚಿವ ಸ್ಥಾನಕ್ಕೆ ಮಾತ್ರ ಸೀಮಿತ. ಪರಿಷತ್ ಸದಸ್ಯತ್ವ ಸ್ಥಾನಕ್ಕೆ ತೊಂದರೆಯಿಲ್ಲ.
ಈ ಬಗ್ಗೆ ಸುಪ್ರೀಂ ಕೋರ್ಟಿಗೆ ಮೇಲ್ಮನವಿ ಸಲ್ಲಿಸುತ್ತೇನೆ ಎಂದ ಅವರು, ಹಾಗೆ ನೋಡಿದರೆ ಆರಂಭದಲ್ಲಿ ಸಂಘ ಪರಿವಾರದ ಬೆಂಬಲ ಸಿಕ್ಕಿತ್ತು. ಈಗ ಕಷ್ಟಕಾಲದಲ್ಲಿ ಮಾತ್ರ ನೆರವು ಸಿಗಲಿಲ್ಲ. ಅಡ್ವೊಕೇಟ್ ಜನರಲ್ ಕೂಡ ಅನಾದರ ತೋರಿದರು ಎಂದು ಹೇಳಿಕೊಂಡರು.
ಈ ಬಗ್ಗೆ ಯಡಿಯೂರಪ್ಪ ಅವರೊಡನೆ ಮಾತುಕತೆ ನಡೆಸುತ್ತೇನೆ. ನನ್ನ ಜೊತೆಗೆ ಬಿಜೆಪಿಗೆ ಬಂದವರೆಲ್ಲ ನನ್ನ ಜೊತೆಗಿದ್ದಾರೆ. ರಮೇಶ್ ಜಾರಕಿಹೊಳಿ, ಆರ್.ಅಶೋಕ್, ಎಸ್.ಟಿ. ಸೋಮಶೇಖರ್ ಸೇರಿ ಹಲವರು ಫೋನ್ ಮಾಡಿ ವಿಚಾರಿಸಿದ್ದಾರೆ ಎಂದು ವಿಶ್ವನಾಥ್ ಹೇಳಿದರು.
15-09-25 08:53 pm
Bangalore Correspondent
Actor Upendra, Wife Priyanka, Cyber Fraud, Ha...
15-09-25 04:45 pm
Pratap Simha, Banu Mushtaq: ಬಾನು ಮುಷ್ತಾಕ್ ದಸರ...
15-09-25 03:39 pm
Bommai, SIT, Dharmasthala, Bommai: ನಿರೀಕ್ಷೆಗೆ...
14-09-25 05:18 pm
ವಾಹನ ಸವಾರರಿಗೆ ಶೇ.50 ರಿಯಾಯಿತಿ ಆಫರ್ ಎಫೆಕ್ಟ್ ...
13-09-25 10:38 pm
15-09-25 04:57 pm
HK News Desk
ನಾನು ಶಿವಭಕ್ತ ; ನಿಂದನೆಯ ವಿಷವನ್ನು ಕುಡಿದು ಜೀರ್ಣಿ...
14-09-25 10:49 pm
ಪ್ರಧಾನಿ ಮೋದಿ ಅಸ್ಸಾಂನಲ್ಲಿ ಇರುವಾಗಲೇ 5.8ರ ತೀವ್ರತ...
14-09-25 07:31 pm
ಮಿಜೋರಾಂ ರಾಜ್ಯದಲ್ಲಿ ಮೊದಲ ರೈಲು ಮಾರ್ಗ ಪ್ರಧಾನಿ ಮೋ...
13-09-25 03:25 pm
ವಾಷಿಂಗ್ ಮೆಷಿನ್ ವಿಷಯದಲ್ಲಿ ವಾಗ್ವಾದ ; ಅಮೆರಿಕದಲ...
12-09-25 11:33 am
15-09-25 08:28 pm
Mangalore Correspondent
Mangalore Accident, Saudi, Ullal: ಸೌದಿ ಅರೇಬಿಯ...
15-09-25 02:08 pm
ಬಂಗ್ಲೆಗುಡ್ಡೆ ಕಾಡಿನಲ್ಲಿ ಸ್ಥಳ ಶೋಧಕ್ಕೆ ಎಸ್ಐಟಿ ಸಿ...
15-09-25 01:58 pm
Mangalore, Ullal News, Boat: ಕೈಕೊಟ್ಟ ಇಂಜಿನ್ ;...
15-09-25 11:27 am
Vittal Gowda, Mangalore, Dharmasthala: ವಿಠಲ ಗ...
14-09-25 10:55 pm
15-09-25 10:47 pm
Bangalore Correspondent
Udupi, Surat Murder, Arrest: ವೃದ್ಧ ದಂಪತಿಯನ್ನು...
14-09-25 06:01 pm
Mangalore Fake Aadhar, RTC Scam, Police: ಆರೋಪ...
13-09-25 11:36 am
ಅಪ್ರಾಪ್ತ ಬಾಲಕಿಯನ್ನು ಅತ್ಯಾಚಾರಗೈದು ಹತ್ಯೆ ; ಬೆಳಗ...
12-09-25 11:07 pm
Ullal Police, Mangalore, Gold Robbery: ತೊಕ್ಕೊ...
12-09-25 10:48 pm