ಬ್ರೇಕಿಂಗ್ ನ್ಯೂಸ್
11-12-20 02:37 pm Headline Karnataka News Network ಕರ್ನಾಟಕ
ಮಂಗಳೂರು, ಡಿ.11: ಬಹು ನಿರೀಕ್ಷಿತ ಮಂಗಳೂರು - ಮೈಸೂರು ವಿಮಾನ ಯಾನ ಸೇವೆಗೆ ಕೊನೆಗೂ ಚಾಲನೆ ಸಿಕ್ಕಿದೆ. ಇಂದು ಬೆಳಗ್ಗೆ 11.30ಕ್ಕೆ ಮೈಸೂರಿನಲ್ಲಿ ಹೊರಟ ಅಲಯನ್ಸ್ ಏರ್ ವಿಮಾನ 12.30ಕ್ಕೆ ಮಂಗಳೂರಿಗೆ ತಲುಪಿದೆ. ಮೊದಲ ಪ್ರಯಾಣದಲ್ಲಿ 25 ಮಂದಿ ಮೈಸೂರಿನಿಂದ ಮಂಗಳೂರಿಗೆ ಆಗಮಿಸಿದ್ದಾರೆ.
ಮಂಗಳೂರು ನಿಲ್ದಾಣದಲ್ಲಿ ವಿಮಾನ ಲ್ಯಾಂಡ್ ಆಗುತ್ತಿದ್ದಂತೆ ನಿಲ್ದಾಣ ಪ್ರಾಧಿಕಾರದ ವತಿಯಿಂದ ಸ್ವಾಗತಿಸಲಾಯ್ತು. ವಿಮಾನಕ್ಕೆ ನೀರು ಚಿಮುಕಿಸಿ ಸ್ವಾಗತ ನೀಡಲಾಯ್ತು. ವಿಮಾನ ನಿಲ್ದಾಣದ ನಿರ್ದೇಶಕ ವಿವಿ ರಾವ್ ಸೇರಿದಂತೆ ಅದಾನಿ ಕಂಪನಿಯ ಅಧಿಕಾರಿಗಳು ಈ ಸಂದರ್ಭ ಉಪಸ್ಥಿತರಿದ್ದರು.
ಉಭಯ ನಗರಗಳ ನಡುವೆ ಇದೇ ಮೊದಲ ಬಾರಿಗೆ ವಿಮಾನ ಸಂಚಾರ ಆರಂಭಗೊಂಡಿದೆ. ಅಲಯನ್ಸ್ ವಿಮಾನವೇ ಮಂಗಳೂರಿಗೆ ಬಂದು ಮರಳಿ 12.55ಕ್ಕೆ ಮೈಸೂರಿಗೆ ತೆರಳುತ್ತದೆ. ಬುಧವಾರ, ಶುಕ್ರವಾರ, ಶನಿವಾರ ಮತ್ತು ಭಾನುವಾರಗಳಂದು ಈ ವಿಮಾನ ಸಂಚಾರ ನಡೆಸಲಿದೆ. ಪ್ರತಿ ದಿನವೂ ವಿಮಾನ ಸಂಚಾರದ ಸಮಯ ಇದೇ ಆಗಿರುತ್ತದೆ. ಮಂಗಳೂರಿನಿಂದ ಮೈಸೂರಿಗೆ ನಿರ್ಗಮಿಸಿದ ವಿಮಾನದಲ್ಲಿ 31 ಮಂದಿ ಪ್ರಯಾಣಿಕರು ಇದ್ದರು. ದಿನವಹಿ ಪ್ರಯಾಣಿಕರ ಸಂಖ್ಯೆ ನೋಡಿಕೊಂಡು ಸಂಚಾರ ಹೆಚ್ಚಿಸುವ ಇರಾದೆ ಅಧಿಕಾರಗಳದ್ದಿದೆ.

ಮೈಸೂರು ಸಾಂಸ್ಕೃತಿಕ ನಗರಿಯಾಗಿದ್ದು, ವೀಕೆಂಡ್ ಗಳಲ್ಲಿ ಮಂಗಳೂರಿನ ಜನ ಅತ್ತ ಪ್ರಯಾಣಿಸುತ್ತಾರೆ. ಅಲ್ಲದೆ, ಮಂಗಳೂರಿಗೆ ಆಗಮಿಸುವ ಪ್ರವಾಸಿಗರು ಮೈಸೂರಿನಿಂದ ತುರ್ತಾಗಿ ಬರಲು ಈ ವಿಮಾನಗಳನ್ನು ಅನುಸರಿಸಲಿದ್ದಾರೆ. ಮೈಸೂರಿನಲ್ಲಿ ಮೊದಲ ವಿಮಾನಕ್ಕೆ ಅಲ್ಲಿನ ಸಂಸದ ಪ್ರತಾಪಸಿಂಹ ಚಾಲನೆ ನೀಡಿದರು. ಮಂಗಳೂರು- ಮೈಸೂರು ವಿಮಾನ ಸಂಚಾರಕ್ಕಾಗಿ ಹೆಚ್ಚು ಒತ್ತಡ ಹೇರಿ ಕೆಲಸ ಮಾಡಿದವರು ಪ್ರತಾಪಸಿಂಹ. ಪ್ರತಾಪಸಿಂಹ ಒತ್ತಾಸೆಯಿಂದಾಗಿ ಖಾಸಗಿ ವಿಮಾನ ಕಂಪನಿ ಈಗ ಉಭಯ ನಗರಗಳ ನಡುವೆ ಸಂಚಾರ ಆರಂಭಿಸಿದೆ.
The most awaited flight services Mysore to Mangalore has now begun.
24-08-26 03:16 pm
HK News Staffer
ಕರ್ನಾಟಕದಲ್ಲಿ ‘ಅನಲಾಗ್ ಪನ್ನೀರ್’ಗೆ ಒಂದು ವರ್ಷ ನಿಷ...
22-08-26 10:15 pm
ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ನಾಪತ್ತೆ ; ಏ...
22-08-26 03:01 pm
500 ಕೆಪಿಎಸ್ ಶಾಲೆಗಳ ಸಮಗ್ರ ಅಭಿವೃದ್ಧಿಗೆ ₹2500 ಕೋ...
22-08-26 11:10 am
ದೇಶದ ರಾಜಕೀಯದಲ್ಲಿ ಬಹುದೊಡ್ಡ ಬಿರುಗಾಳಿ; ವಿರುದ್ಧ ಧ...
21-08-26 03:42 pm
24-08-26 04:55 pm
HK News Staffer
ಪಾಲ್ಘಾಟ್ ರೈಲ್ವೇ ವಿಭಾಗದಿಂದ ಮಂಗಳೂರು ಹೊರಕ್ಕೆ ; ವ...
22-08-26 08:37 pm
ದೇಹದಲ್ಲಿಡೀ ಉರಿ ಉರಿ! ಕೆರೆಯಲ್ಲೇ ವಾಸ, ಅಲ್ಲೇ ಆಹಾ...
20-08-26 10:55 am
ತಮಿಳುನಾಡು ಮಹಿಳಾ ಸರ್ಕಾರಿ ನೌಕರರಿಗೆ ಸರ್ಕಾರದ ಬಂಪರ...
19-08-26 02:13 pm
ಲಷ್ಕರ್ ಸ್ಥಾಪಕ ಹಫೀಜ್ ಸಯೀದ್ 10,000 ಯುವಕರನ್ನು ಕಾ...
19-08-26 01:06 pm
24-08-26 06:25 pm
HK News Staffer
ಈದ್ ಮಿಲಾದ್ ; ಬೆಳಗ್ಗೆ ಕೋಟೆಪುರದಿಂದ ಉಳ್ಳಾಲ ದರ್ಗಾ...
24-08-26 04:14 pm
ಅಡಿಕೆ ಎಲೆ ಚುಕ್ಕಿ ರೋಗ ನಿಯಂತ್ರಣಕ್ಕೆ ಸಿಪಿಸಿಆರ್ ಐ...
24-08-26 04:11 pm
ಎಂಆರ್ ಪಿಎಲ್ ನಲ್ಲಿ 26 ಇಂಜಿನಿಯರಿಂಗ್ ಹುದ್ದೆಗಳ ಭರ...
24-08-26 01:13 pm
ಹಲ್ಲೆಗೀಡಾದವರ ಮೇಲೆ ಕೊಲೆಯತ್ನ ಕೇಸು ಹಾಕಿದ್ದಾರೆ, ಹ...
23-08-26 06:17 pm
24-08-26 09:06 pm
HK News Staffer
ಸಾವಿರಾರು ಕೋಟಿ ವಂಚಕ, ಶಿವಂ ಅಸೋಸಿಯೇಟ್ಸ್ ಮಾಲೀಕ ಶಿ...
24-08-26 07:04 pm
ಚಿಕ್ಕಮಗಳೂರಿನಲ್ಲಿ ಈದ್ ಮೆರವಣಿಗೆ ಸಿದ್ಧತೆ ; ಬೃಹತ್...
24-08-26 02:35 pm
ಕುಂಬಳೆಯ ಮುಸ್ಲಿಂ ವ್ಯಾಪಾರಿಗೆ ಹನಿಟ್ರ್ಯಾಪ್ ; ವಿಡಿ...
24-08-26 02:25 pm
ನದಿಗೆ ಬಿದ್ದ ಫುಟ್ಬಾಲ್ ಹೆಕ್ಕಲು ಹೋಗಿ ಜೀವ ಕಳಕೊಂಡ...
24-08-26 01:03 pm