ಬ್ರೇಕಿಂಗ್ ನ್ಯೂಸ್
14-12-20 12:40 pm Bangalore Correspondent ಕರ್ನಾಟಕ
ಬೆಂಗಳೂರು, ಡಿ.14: ಸಾರಿಗೆ ನೌಕರರ ಮುಷ್ಕರವನ್ನು ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ಹೈಜಾಕ್ ಮಾಡಿದ್ದಾರೆಂಬ ಆರೋಪ ಕೇಳಿಬಂದಿದ್ದು ಸಾರ್ವಜನಿಕರ ಆಕ್ರೋಶ ಈಗ ಕೋಡಿಹಳ್ಳಿ ವಿರುದ್ಧ ತಿರುಗಿಬಿದ್ದಿದೆ. ತಮ್ಮ ಮೊಡುತನ, ಪ್ರತಿಷ್ಠೆಗೆ ಕಾರ್ಮಿಕರನ್ನು ಬಲಿಯಾಗಿಸಿದ್ದಾರೆ ಎಂದು ಕಾರ್ಮಿಕ ಸಂಘಗಳ ಮುಖಂಡರು ಕೋಡಿ ಕೋಡಿಹಳ್ಳಿ ಚಂದ್ರಶೇಖರ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಾರ್ಮಿಕ ಸಂಘಟನೆಗಳ ಪೈಕಿ ಪ್ರಮುಖವಾಗಿರುವ ಎಐಟಿಯುಸಿ ನಾಯಕ ಅನಂತ ಸುಬ್ಬರಾವ್, ಕೋಡಿಹಳ್ಳಿ ವಿರುದ್ಧ ಹರಿಹಾಯ್ದಿದ್ದಾರೆ.
ಕೋಡಿಹಳ್ಳಿಯವರೇ ಡೀಲ್ ಮಾಡುವುದು ಬಿಟ್ಟು ಲೀಡರ್ ಆಗಿ ಕೆಲಸ ಮಾಡಿ. ನೀವು ಹೀಗೆ ವರ್ತಿಸುವುದನ್ನು ನೋಡಿದರೆ ಇದರ ಹಿಂದೆ ಏನೋ ಅಜೆಂಡಾ ಇಟ್ಟುಕೊಂಡಿರುವ ಸಂಶಯ ಕಾಣುತ್ತಿದೆ. ಅವರ ಒಣಪ್ರತಿಷ್ಠೆಗೆ ಸಾರಿಗೆ ನೌಕರರು ಬಲಿಯಾಗಬೇಕಾಗಿದೆ. ಕೋಡಿಹಳ್ಳಿ ಅವರದ್ದೇನು ಮೊನೋಪಾಲಿನಾ ಎಂದು ಸುಬ್ಬರಾವ್ ಮಾಧ್ಯಮ ಒಂದಕ್ಕೆ ಹೇಳಿಕೆ ನೀಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.


ಪ್ರತಿಭಟನೆ ಮಾಡಲು ಹೊರಟ ಕಾರ್ಮಿಕರನ್ನು ದಾರಿ ತಪ್ಪಿಸಿ ಅವರಿಂದ ದಿಢೀರ್ ಮುಷ್ಕರ ಮಾಡಿಸಿದ್ದಾರೆ. ಸಂಘಟನೆ ಕಟ್ಟಿ ಬೆಳೆಸೋದು ಸಾಮಾನ್ಯ ಸಂಗತಿಯಲ್ಲ. ಈ ಕೋಡಿಹಳ್ಳಿ ಎಂದಾದರೂ ಕಾರ್ಮಿಕ ಸಂಘಟನೆ ಕಟ್ಟಿದ್ದಾರೆಯೇ, ಕಾರ್ಮಿಕ ಕಾನೂನುಗಳ ಅರಿವು ಹೊಂದಿದ್ದಾರೆಯೇ.. ಕೋಡಿಹಳ್ಳಿಯವರ ಹಿನ್ನೆಲೆ ನೋಡಿದರೆ ಅವರು ಖಾಸಗಿಯವರ ಪರ ಇದ್ದವರೇ ಹೊರತು ಸಾರ್ವಜನಿಕ ಸಂಸ್ಥೆಗಳ ಪರ ಇದ್ದವರಲ್ಲ. ಇವರು ಖಾಸಗಿ ಲಾಬಿಯ ಪರ ಕೆಲಸ ಮಾಡುತ್ತಿರುವಂತೆ ಕಾಣುತ್ತಿದೆ. ಇದರ ಹಿಂದೇನೂ ಏನೋ ಡೀಲ್ ಮಾಡುತ್ತಿರುವ ಬಗ್ಗೆ ಸಂಶಯ ಬರುತ್ತಿದೆ ಎಂದು ಹೇಳಿದ್ದಾರೆ.
ನಿನ್ನೆಯೇ ಮಾತುಕತೆ ನಡೆಸಿದ ಬಳಿಕ ನಮ್ಮ ಸಂಘಟನೆಯ ಸದಸ್ಯರಿಗೆ ಕರ್ತವ್ಯಕ್ಕೆ ಹಾಜರಾಗುವಂತೆ ತಿಳಿಸಿದ್ದೇವೆ. ಕೋಡಿಹಳ್ಳಿ ಮಾತು ಕಟ್ಟಿಕೊಂಡು ಇಂದು ಕೂಡ ಮುಷ್ಕರ ಮುಂದವರಿಸಿದ್ರೆ ಕಾನೂನು ಕ್ರಮ ಎದುರಿಸಬೇಕಾಗುತ್ತದೆ ಎಂದು ಅನಂತ ಸುಬ್ಬರಾವ್ ಕಾರ್ಮಿಕರನ್ನು ಎಚ್ಚರಿಸಿದ್ದಾರೆ.
25-07-26 03:06 pm
HK News Staffer
ಧಾರವಾಡ ; ಮಗ ರೈಲು ಹಳಿಗೆ ಬಿದ್ದು ಆತ್ಮಹತ್ಯೆ, ಸಾವಿ...
23-07-26 08:05 pm
Soujanya case: ಸೌಜನ್ಯ ಪ್ರಕರಣದಲ್ಲಿ ಸಿಬಿಐಗೆ ತರಾ...
22-07-26 06:00 pm
ಸಚಿವ ಸಂಪುಟಕ್ಕೆ ಖರ್ಗೆ, ಡಿಕೆ, ಸಿದ್ದರಾಮಯ್ಯ ಪ್ರತ್...
19-07-26 08:34 pm
ಡಿಕೆಶಿ ಸಂಪುಟ ವಿಸ್ತರಣೆಗೆ ಮತ್ತೆ ಬ್ರೇಕ್ ; 55ರ ಒಳ...
17-07-26 02:55 pm
26-07-26 01:32 pm
HK News Staffer
ವಿದ್ಯಾರ್ಥಿಗಳ ಪ್ರತಿಭಟನೆ ಕಿಚ್ಚು ; ರಾಷ್ಟ್ರೀಯ ಪರೀ...
25-07-26 07:34 pm
ಅಂತೂ ವಿದ್ಯಾರ್ಥಿಗಳ ಪ್ರತಿಭಟನೆಗೆ ಮಣಿದ ಕೇಂದ್ರ ಸರ್...
25-07-26 03:07 pm
NEET ಪ್ರತಿಭಟನೆ ಹಿಂಸಾಚಾರ ; 117 ಶಂಕಿತರ ಫೋಟೋ ಬಿಡ...
24-07-26 03:25 pm
ಪ್ರಶ್ನೆಪತ್ರಿಕೆ ಸೋರಿಕೆ ; ಕೇಂದ್ರ ಸರ್ಕಾರದ ಭರವಸೆಗ...
24-07-26 11:18 am
26-07-26 09:57 pm
HK News Desk
ಕದ್ರಿ ಯುದ್ಧ ಸ್ಮಾರಕದ ಬಳಿ ಟಿ-55 ಯುದ್ಧ ಟ್ಯಾಂಕರ್...
26-07-26 09:14 pm
ಎಸ್ಐಆರ್ ನಿಂದ ಯಾರೂ ಮತದಾನದ ಹಕ್ಕು ಕಳೆದುಕೊಳ್ಳುವುದ...
25-07-26 07:32 pm
ಎಸ್ಐಆರ್ ನಿಂದ ಯಾರೂ ಮತದಾನದ ಹಕ್ಕು ಕಳೆದುಕೊಳ್ಳುವುದ...
25-07-26 07:32 pm
ಹವಾಮಾನ ಇಲಾಖೆಯ ಅವೈಜ್ಞಾನಿಕ ವರದಿ, ತರಾತುರಿಯ ರಜೆ ಘ...
25-07-26 02:42 pm
26-07-26 04:30 pm
HK News Staffer
ಶಾಲಾ ಬಸ್ಸಿಗೆ ಮರ ಬಿದ್ದು ಮಗು ಸಾವು ಪ್ರಕರಣ ; ಬಸ್ಸ...
25-07-26 07:36 pm
Vikky Bappal, Mangalore Crime: ಕುಖ್ಯಾತ ರೌಡಿ ವ...
25-07-26 03:50 pm
ಡೇಟಿಂಗ್ ಆ್ಯಪ್ನಲ್ಲಿ ಪರಿಚಯವಾಗಿದ್ದ ಯುವತಿಯಿಂದ ಬ್ಲ...
24-07-26 08:57 pm
ಪಿಡಿಓ ಹುದ್ದೆ ಕೊಡಿಸುವುದಾಗಿ ಹೇಳಿ 26 ಲಕ್ಷ ಪೀಕಿಸಿ...
24-07-26 08:31 pm