ಬ್ರೇಕಿಂಗ್ ನ್ಯೂಸ್
23-02-21 01:51 pm Headline Karnataka News Network ಕರ್ನಾಟಕ
ನವದೆಹಲಿ, ಫೆ.23 : ಸರಕಾರದಿಂದ ಅನುಮತಿ ಪಡೆದಿರುವ ಕಲ್ಲು ಕ್ವಾರಿ ಹಾಗೂ ಗಣಿಗಾರಿಕೆ ಪ್ರದೇಶಗಳಲ್ಲಿ ಮಾತ್ರ ಸ್ಫೋಟಕ ಸಾಮಗ್ರಿಗಳನ್ನು ಬಳಕೆ ಮಾಡುವಂತಾಗಲು ಹೊಸ ಕಾನೂನು ಜಾರಿ ಮಾಡಲಾಗವುದು ಎಂದು ಗಣಿ ಮತ್ತು ಭೂ ವಿಜ್ಞಾನ ಸಚಿವ ಮುರುಗೇಶ್ ನಿರಾಣಿ ಹೇಳಿದ್ದಾರೆ.
ಸಚಿವರು ನವದೆಹಲಿಗೆ ಆಗಮಿಸಿದ್ದ ಹಿನ್ನೆಲೆಯಲ್ಲಿ ಚಿಕ್ಕಬಳ್ಳಾಪುರ ಘಟನೆಯ ಬಗ್ಗೆ ಮಾಧ್ಯದವರು ಪ್ರಶ್ನೆ ಮಾಡಿದಾಗ, ಕಾನೂನು ಬಾಹಿರವಾಗಿ ಕಲ್ಲು ಕ್ವಾರಿ ಮತ್ತು ಗಣಿ ಪ್ರದೇಶಗಳಲ್ಲಿ ಸ್ಫೋಟಕ ವಸ್ತುಗಳನ್ನು ಬಳಕೆ ಮಾಡುತ್ತಿರುವುದರಿಂದ ಇಂಥ ಅವಘಡಗಳು ಸಂಭವಿಸುತ್ತಿವೆ. ಇದನ್ನು ತಡೆಗಟ್ಟಲು ಸದ್ಯದಲ್ಲೇ ಹೊಸ ಕಾನೂನು ಜಾರಿ ಮಾಡಲಾಗುವುದು. ಸರ್ಕಾರದಿಂದ ಲೈಸೆನ್ಸ್ ಪಡೆದವರು ಮಾತ್ರ ಸ್ಫೋಟಕ ಸಾಮಗ್ರಿ ಬಳಸುವ ಕಾನೂನು ಜಾರಿ ಮಾಡಲಾಗುವುದು ಎಂದು ತಿಳಿಸಿದರು.
ಕೆಲವು ಕಡೆ ಕಾನೂನು ಬಾಹಿರವಾಗಿ ಕಲ್ಲು ಗಣಿಗಾರಿಕೆ ನಡೆಯುತ್ತಿರುವುದು ಗಮನಕ್ಕೆ ಬಂದಿದೆ. ಈಗಾಗಲೇ ಇದನ್ನು ತಡೆಗಟ್ಟಲು ಇಲಾಖಾ ಮಟ್ಟದಲ್ಲಿ ಹಲವಾರು ಬಿಗಿ ಕ್ರಮಗಳನ್ನು ಕೈಗೊಂಡಿದ್ದೇವೆ. ಒಂದು ವೇಳೆ ನಮ್ಮ ಅಧಿಕಾರಿಗಳು ಈ ರೀತಿಯ ಚಟುವಟಿಕೆಗಳಲ್ಲಿ ಭಾಗಿಯಾಗಿರುವುದು ಕಂಡುಬಂದರೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.
ಈ ರೀತಿಯ ಅವಘಡಗಳು ಗಣಿ ಕಾರ್ಮಿಕರಿಗೆ ತರಬೇತಿ ಮತ್ತು ಗಣಿಗಾರಿಕೆ ಶಾಲೆಯ ಸ್ಥಾಪನೆಯ ಮಹತ್ವವನ್ನು ನೆನಪಿಸುತ್ತವೆ. ಗಣಿಗಾರಿಕೆ ಚಟುವಟಿಕೆಗಳಲ್ಲಿ ತೊಡಗಿರುವ ಜನರಿಗೆ ಜಿಲೆಟಿನ್ ಕಡ್ಡಿ ಸಹಿತ ಸ್ಫೋಟಕಗಳು ಮತ್ತು ಇತರ ಸೋಟಕ ಸಾಮಗ್ರಿಗಳನ್ನು ಎಚ್ಚರಿಕೆಯಿಂದ ನಿರ್ವಹಿಸುವ ಬಗ್ಗೆ ತರಬೇತಿ ನೀಡುವ ಅಗತ್ಯವಿದೆ. ರಾಜ್ಯದಲ್ಲಿ ಗಣಿಗಾರಿಕೆ ಶಾಲೆಯನ್ನು ಸ್ಥಾಪಿಸಲು ತೀರ್ಮಾನಿಸಿದ್ದೇವೆ ಎಂದು ಹೇಳಿದರು.
ಹಿರೇನಾಗವಲ್ಲಿ ಘಟನೆಯಲ್ಲಿ ಯಾರೇ ಪ್ರಭಾವಿಗಳಾಗಿದ್ದರೂ ಸುಮ್ಮನೆ ಬಿಡುವುದಿಲ್ಲ. ಕಾನೂನಿನ ಪ್ರಕಾರ ಏನು ಕ್ರಮ ಕೈಗೊಳ್ಳಬೇಕೋ ಅದನ್ನು ಸರ್ಕಾರ ತೆಗೆದುಕೊಳ್ಳಲಿದೆ ಎಂದು ಹೇಳಿದರು.
ಶಿವಮೊಗ್ಗ ದುರಂತ ಮಾಸುವ ಮುನ್ನವೇ ಮತ್ತೊಂದು ಗಣಿ ಸ್ಫೋಟ! ಆರು ಸಾವು, ಸಚಿವ ಸುಧಾಕರ್ ವಿರುದ್ಧ ಆಕ್ರೋಶ
ಸ್ಫೋಟ ಪ್ರಕರಣ ; ಮುಖ್ಯಮಂತ್ರಿ ದುರಾಡಳಿತಕ್ಕೆ ಅಮಾಯಕರು ಬಲಿ : ಸಿದ್ದರಾಮಯ್ಯ ಆಕ್ರೋಶ
6 Dead In Quarry Blast In Karnataka's Chikkaballapur Minister of Mines and Geology Murugesh Nirani brings new law.
07-03-21 10:20 pm
Headline Karnataka News Network
ಚಿನ್ನವಿದೆಯೆಂದು ನಂಬಿ ದುಬಾರಿ ಬೆಲೆಯ ವಾಚ್ ಪುಡಿಗಟ್...
07-03-21 10:07 pm
ತೆಕ್ಕಟ್ಟೆ ; ದೇವಸ್ಥಾನದ ಒಳಗೆ ಯುವಕ ಸಾವಿಗೆ ಶರಣು
07-03-21 08:46 pm
ಜಾರಕಿಹೊಳಿ ಸಿಡಿ ಬ್ಲಾಸ್ಟ್ ಮಾಡಿದ್ದ ಕಲ್ಲಹಳ್ಳಿ ಯು...
07-03-21 04:29 pm
ದಾವಣಗೆರೆಯಲ್ಲಿ ನೋಟು, ನಾಣ್ಯಗಳ ಪ್ರದರ್ಶನ ; 150 ಕ್...
07-03-21 03:02 pm
07-03-21 06:17 pm
Headline Karnataka News Network
ಸಿಎಂ ಪಿಣರಾಯಿ ಕುತ್ತಿಗೆ ಸುತ್ತಿಕೊಂಡ ಗೋಲ್ಡ್ ಸ್ಮಗ...
05-03-21 05:11 pm
‘ಭಾರತೀಯರು ಅಮೆರಿಕನ್ನರನ್ನೂ ಮಿರಿಸುತ್ತಿದ್ದಾರೆ’; ಅ...
05-03-21 11:59 am
ಅನುರಾಗ್ ಕಶ್ಯಪ್, ತಾಪ್ಸಿ ಪನ್ನು ಮನೆ ಮೇಲೆ ಐಟಿ ದಾಳ...
05-03-21 09:37 am
ಸಮುದ್ರ ಮಧ್ಯೆ ಬೋಟ್ ಪಲ್ಟಿ ; ನೀರಿಗೆ ಬಿದ್ದು ಎರಡು...
04-03-21 12:01 pm
07-03-21 07:34 pm
Mangaluru correspondent
ಕುಡಿದು ರಂಪಾಟ ; ಬುದ್ಧಿ ಹೇಳಿದ್ದ ತಮ್ಮನ ಕೊಲೆಗೈದಿದ...
07-03-21 12:21 pm
ನಗ್ನ ವಿಡಿಯೋ ತೋರಿಸಿ ಉದ್ಯಮಿಗೆ ಬ್ಲ್ಯಾಕ್ಮೇಲ್ ; ಮ...
07-03-21 10:44 am
ಕಂಬಳದಲ್ಲಿ ಹಿಂಸೆ ಕಂಡಿಲ್ಲ ; ಮಂಗಳೂರು ಕಂಬಳದಲ್ಲಿ ವ...
06-03-21 11:24 pm
ಪ್ರತಾಪ್ ಸಿಂಹ ಒಬ್ಬ ಮೆಂಟಲ್, ಹುಚ್ಚಾಸ್ಪತ್ರೆಗೆ ಸೇ...
06-03-21 11:15 pm
08-03-21 11:42 am
Headline Karnataka News Network
ಪಂಪ್ವೆಲ್ ಲಾಡ್ಜ್ ನಲ್ಲಿ ಅಂದರ್ ಬಾಹರ್ ಜೂಜಾಟ ; 11...
08-03-21 11:14 am
ಪತ್ನಿಗೆ ವಂಚಿಸಿ ಮತ್ತೊಂದು ಮದುವೆ ; ಕಿಲಾಡಿ ಪೊಲೀಸ್...
06-03-21 10:36 pm
ಜೋತಿಷ್ಯ ಹೇಳುವ ನೆಪದಲ್ಲಿ ಪೂಜೆ ; ಮನೆಯಲ್ಲಿದ್ದ ಚಿನ...
06-03-21 12:50 pm
ರಸ್ತೆಯಲ್ಲಿ ಮಂಗಳಮುಖಿಯರ ರೌಡಿಸಂ ; ಯುವಕರಿಗೆ ಭೀಕರ...
06-03-21 11:37 am