ದಾರಿಯಲ್ಲಿ ಹೋಗೋರು ದೂರು ನೀಡಿದರೆ ಎಫ್ಐಆರ್ ದಾಖಲಿಸಕ್ಕಾಗಲ್ಲ ; ಜಾರಕಿಹೊಳಿ ವಕೀಲ

05-03-21 12:32 pm       Headline Karnataka News Network   ಕರ್ನಾಟಕ

ರಮೇಶ್ ಜಾರಕಿಹೊಳಿ ರಾಸಲೀಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅನಾಮಿಕ ದೂರಿನಿಂದ ಕಾನೂನಿನಡಿ FIR ದಾಖಲಿಸಲಾಗಲ್ಲ ಎಂದು ವಕೀಲ ರಮೇಶ್ ಹೇಳಿದ್ದಾರೆ.

ಬೆಂಗಳೂರು,ಮಾ.05: ರಮೇಶ್ ಜಾರಕಿಹೊಳಿ ರಾಸಲೀಲೆ CD ಬಿಡುಗಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತ್ರಸ್ತೆ ದೂರು ನೀಡದ ಕಾರಣ FIR​ ದಾಖಲಿಸಲಾಗಲ್ಲ. ಕಾನೂನಿನಡಿ ಎಫ್ಐಆರ್ ದಾಖಲಿಸಲು ಅವಕಾಶ ಇಲ್ಲ ಎಂದು ಸುಪ್ರೀಂಕೋರ್ಟ್ ವಕೀಲ ರಮೇಶ್ ಬೆಂಗಳೂರಿನಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. 

ಕಾನೂನಿನ ಪ್ರಕಾರ ಸಂತ್ರಸ್ತೆ, ಸಂತ್ರಸ್ತೆ ಪೋಷಕರು ಅಥವಾ ಸಂಬಂಧಿಕರು‌ ದೂರು ನೀಡಬೇಕು. ಅನಾಮಿಕ ದೂರಿನಿಂದ ಕಾನೂನಿನಡಿ FIR ದಾಖಲಿಸಲಾಗಲ್ಲ. ದೂರು ಕೊಟ್ಟವನನ್ನೇ ಹಿಡಿದು ವಿಚಾರಣೆ ನಡೆಸಬೇಕು ಎಂದು ಹೇಳಿದ್ದಾರೆ.

ರಮೇಶ್ ಜಾರಕಿಹೊಳಿ ವಿರುದ್ಧ ಖಾಸಗಿ ದೂರು‌ ನೀಡಿದ್ದಾರೆ. ದಾರಿಯಲ್ಲಿ ಹೋಗುವವನು ಕೂಡ ದೂರು ಕೊಡಬಹುದು. ‘ಸಿಡಿ’ ಇದೆ ಎಂದು ಬೇಕಾಬಿಟ್ಟಿಯಾಗಿ ಮಾತಾಡಬಹುದು. ದೂರುದಾರ ದಿನೇಶ್ ಕಲ್ಲಹಳ್ಳಿ ಬಳಿ ಯಾವುದೇ ಸಾಕ್ಷಿ ಇಲ್ಲ. ವಿಡಿಯೋ ಸಾಕ್ಷ್ಯ ಸಾಕಾಗೋದಿಲ್ಲ ಎಂದು ರಮೇಶ್​ ಜಾರಕಿಹೊಳಿ ಪರ ವಕೀಲ ರಮೇಶ್ ಬ್ಯಾಟಿಂಗ್ ಮಾಡಿದ್ದಾರೆ.

ಬೆಳಗಾವಿಯಲ್ಲಿ ಬಂದ್ ವಾತಾವರಣ

ಅಶ್ಲೀಲ ಸಿಡಿ ವಿಚಾರಕ್ಕಾಗಿ ರಮೇಶ್​ ಜಾರಕಿಹೊಳಿ ರಾಜೀನಾಮೆ ನೀಡಿದ ನಂತರ ಕ್ಷುದ್ರಗೊಂಡಿರುವ ಅವರ ಬೆಂಬಲಿಗರು ಬೆಳಗಾವಿಯಲ್ಲಿ ಪ್ರತಿಭಟನೆ ಮುಂದುವರೆಸಿದ್ದಾರೆ. ಪ್ರತಿಭಟನೆಗೆ ಹೆದರಿ ಗೋಕಾಕ್​ನಲ್ಲಿ ಕಾಲೇಜುಗಳನ್ನು ದಿಢೀರನೆ ಬಂದ್ ಮಾಡಲಾಗಿದೆ. ಇನ್ನೊಂದೆಡೆ ಸರ್ಕಾರಿ ಬಸ್​ ಸಂಚಾರ ಸಹ ಗೋಕಾಕ್​ನಲ್ಲಿ ಸ್ಥಗಿತಗೊಂಡಿದ್ದು, ಅರ್ಧ ದಾರಿಯಲ್ಲಿ ಸಿಕ್ಕಿಹಾಕಿಕೊಂಡಿರುವ ವಿದ್ಯಾರ್ಥಿಗಳು ಮತ್ತು ಕೆಲಸದ ನಿಮಿತ್ತ ಬೇರೆ ಬೇರೆ ಊರುಗಳಿಗೆ ಹೊರಟವರು ಪರದಾಡುವಂತಾಗಿದೆ.

ಪ್ರತಿಭಟನೆಯ ಕಾವು ಏರುತ್ತಿದ್ದಂತೆ ರಮೇಶ್ ಜಾರಕಿಹೊಳಿ ಬೆಂಬಲಿಗ ಮೈಮೇಲೆ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿರುವ ಘಟನೆಯೂ ನಡೆದಿದೆ. ಗೋಕಾಕ್- ಧಾರವಾಡ ರಸ್ತೆ ತಡೆದು ಧರಣಿ ನಡೆಸುತ್ತಿದ್ದ ವೇಳೆ ಘಟನೆ ಸಂಭವಿಸಿದ್ದು, ತಕ್ಷಣ ಧಾವಿಸಿದ ಪೊಲೀಸರು ಬೆಂಬಲಿಗನನ್ನು ತಡೆದು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಇನ್ನು ಗೋಕಾಕ್ ತಾಲೂಕಿನ ಮಾಲದಿನ್ನಿ ಕ್ರಾಸ್​ನಲ್ಲಿ ರಮೇಶ್ ಬೆಂಬಲಿಗರ ಪ್ರತಿಭಟನೆ ಜೋರಾಗಿದ್ದು, ಟೈರ್​ಗೆ ಬೆಂಕಿ ಹಚ್ಚಿ, ರಸ್ತೆ ತಡೆದು ಪ್ರತಿಭಟಿಸುತ್ತಿದ್ದಾರೆ.

Two days after lodging a complaint with Bengaluru’s Cubbon Park police station against former water resources minister Ramesh Jarkiholi who reigned over allegations of sexual exploitation, social activist Dinesh Kalahalli failed to appear before the police on Thursday.