ತೆಕ್ಕಟ್ಟೆ ; ದೇವಸ್ಥಾನದ ಒಳಗೆ ಯುವಕ ಸಾವಿಗೆ ಶರಣು

07-03-21 08:46 pm       Headline Karnataka News Network   ಕರ್ನಾಟಕ

ಇಲ್ಲಿನ ತೆಕ್ಕಟ್ಟೆಯ ಮಹಾಲಿಂಗೇಶ್ವರ ದೇವಸ್ಥಾನದ ಒಳಗೆ ಯುವಕ ಆತ್ಮಹತ್ಯೆಗೆ ಶರಣಾದ ಘಟನೆ ನಡೆದಿದೆ.

ಉಡುಪಿ, ಮಾ.7 : ಇಲ್ಲಿನ ತೆಕ್ಕಟ್ಟೆಯ ಮಹಾಲಿಂಗೇಶ್ವರ ದೇವಸ್ಥಾನದ ಒಳಗೆ ಯುವಕ ಆತ್ಮಹತ್ಯೆಗೆ ಶರಣಾದ ಘಟನೆ ನಡೆದಿದೆ.

ತೆಕ್ಕಟ್ಟೆಯ ಬಾರಲಿಬೆಟ್ಟು ನಿವಾಸಿ ಚಂದ್ರ ಪೂಜಾರಿ (35) ಆತ್ಮಹತ್ಯೆಗೈದ ಯುವಕ. ಸೆಂಟ್ರಿಂಗ್ ಕೆಲಸ ಮಾಡುತ್ತಿದ್ದ ಚಂದ್ರ ಎರಡು ವರ್ಷದ ಹಿಂದೆ ಮದುವೆಯಾಗಿದ್ದ. ಯಾವಾಗಲೊಮ್ಮೆ ದೇವಸ್ಥಾನಕ್ಕೆ ಬರುತ್ತಿದ್ದು ಕೆಲವು ಸಮಯಗಳಿಂದ ಖಿನ್ನತೆಗೆ ಒಳಗಾಗಿದ್ದ ಎಂದು ಸ್ಥಳೀಯರು ತಿಳಿಸಿದ್ದಾರೆ. ನಿನ್ನೆ ರಾತ್ರಿ ಅಥವಾ ಬೆಳಗ್ಗೆ ದೇವಸ್ಥಾನದ ಬಾವಿಯ ಹಗ್ಗವನ್ನು ತೆಗೆದು ನೇಣು ಬಿಗಿದು ಸಾವಿಗೆ ಶರಣಾಗಿದ್ದಾನೆ. 

ದೇವಸ್ಥಾನದಲ್ಲಿ ಯಾರು ಇಲ್ಲದಿದ್ದಾಗ ಕೃತ್ಯ ನಡೆದಿದೆ. ಇಂದು ಬೆಳಗ್ಗೆ ದೇವಸ್ಥಾನದ ಒಳಗೆ ಕ್ಲೀನ್ ಮಾಡಲು ಕೆಲಸಗಾರರು ಬಂದಿದ್ದ ವೇಳೆ ಚಂದ್ರ ಪೂಜಾರಿ ಸಾವನ್ನಪ್ಪಿರುವುದು ಬೆಳಕಿಗೆ ಬಂದಿದೆ. ಈ ಸಂಬಂಧ ಕೋಟ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

In a tragic incident a 35-year-old man committed suicide inside the temple of Thekkatte Mahaljngeshwara Temple in Udupi. The deceased has been identified as Chandra Poojary.