‘ಅಧಿಕಾರದಲ್ಲಿದ್ದಾಗ ಬ್ಲ್ಯಾಕ್‌ಮನಿ ಮಾಡುತ್ತಿದ್ದವರು ಈಗ ಬ್ಲ್ಯಾಕ್‌ಮೇಲ್‌ಗೆ ಇಳಿದಿದ್ದಾರೆ’

07-03-21 10:20 pm       Headline Karnataka News Network   ಕರ್ನಾಟಕ

ಅಧಿಕಾರದಲ್ಲಿದ್ದಾಗ ಬ್ಲ್ಯಾಕ್‌ಮನಿ ಮಾಡುತ್ತಿದ್ದ ಕಾಂಗ್ರೆಸಿಗರು ಅಧಿಕಾರ ಹೋದ ಬಳಿಕ ಬ್ಲ್ಯಾಕ್‌ಮೇಲ್‌ಗೆ ಇಳಿದಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್‌ ಕಟೀಲು ವ್ಯಂಗ್ಯವಾಡಿದ್ದಾರೆ. 

ಬೀದರ್, ಮಾ.7 : ಅಧಿಕಾರದಲ್ಲಿದ್ದಾಗ ಬ್ಲ್ಯಾಕ್‌ಮನಿ ಮಾಡುತ್ತಿದ್ದ ಕಾಂಗ್ರೆಸಿಗರು ಅಧಿಕಾರ ಹೋದ ಬಳಿಕ ಬ್ಲ್ಯಾಕ್‌ಮೇಲ್‌ಗೆ ಇಳಿದಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್‌ ಕಟೀಲು ವ್ಯಂಗ್ಯವಾಡಿದ್ದಾರೆ. 

ಇಲ್ಲಿನ ಬಸವ ಕಲ್ಯಾಣದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್‌ ರಾಷ್ಟ್ರೀಯ ಅಧ್ಯಕ್ಷೆ ಸೋನಿಯಾ ಗಾಂಧಿ ಬೇಲ್‌ನಲ್ಲಿದ್ದಾರೆ. ರಾಜ್ಯ ಕಾಂಗ್ರೆಸ್ ಅಧ್ಯಕ್ಷರೂ ಬೇಲ್‌ನಲ್ಲಿದ್ದಾರೆಂದರು.‌ ಮಂದಿರ ಅಯೋಧ್ಯೆಯಲ್ಲೇ ನಿರ್ಮಾಣವೇಕೆ ಎಂದು ಪ್ರಶ್ನಿಸುತ್ತಾರೆ. ರಾಮನ ಬಗ್ಗೆ ಮಾತನಾಡುವ ಯೋಗ್ಯತೆ ಆ ಮಾಜಿ ಸಿಎಂಗೆ ಇಲ್ಲ. ನೀವು ಮುಖ್ಯಮಂತ್ರಿ ಆಗುವ ಉದ್ದೇಶದಿಂದಲೇ ಪಕ್ಷ ಬಿಟ್ಟು ಬಂದಿದ್ರಿ ಎಂದು ಹೆಸರು ಹೇಳದೆ ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಕಿಡಿಕಾರಿದರು.

ಡಿಕೆಶಿ ಹಾಗೂ ಸಿದ್ದರಾಮಯ್ಯ ನಡುವೆ ವೈಮನಸ್ಸು ಹೆಚ್ಚಾಗಿದೆ. ಬಹಳ ದಿವಸ ‘ಕೈ’ ಉಳಿಯಲ್ಲವೆಂದು ಕೆಲವರು ಬಿಜೆಪಿಗೆ ಬರುತ್ತಿದ್ದಾರೆ. ಯಾವಾಗಲೂ ಬಡವರ ಬಗ್ಗೆ ಮಾತನಾಡುವ ಕಾಂಗ್ರೆಸ್ ಪಕ್ಷದವರು ಬಡವರ ಅಕೌಂಟ್‌ಗೆ ಹಣ ಹಾಕಲಿಲ್ಲ. ಬದಲಾಗಿ ತಮ್ಮ ಅಕೌಂಟ್ ವಿಸ್ತರಿಸಿದರು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಕಟೀಲು ಹೇಳಿದರು. ಬಿಜೆಪಿ ಬೂತ್‌ಮಟ್ಟದ ಕಾರ್ಯಕರ್ತರ ಸಮಾವೇಶದಲ್ಲಿ ಕಟೀಲು ಮಾತನಾಡಿದರು.

Ramesh Jarkiholi sex scandal BJP Naleen Kumar kateel slams at Congress government says they are into blackmailing business after black money.