ಬ್ರೇಕಿಂಗ್ ನ್ಯೂಸ್
25-03-21 07:45 pm Headline Karnataka News Network ಕರ್ನಾಟಕ
ಕೊಲ್ಕತ್ತಾ, ಮಾ.25: ದೇಶದಲ್ಲಿ 30 ಶೇಕಡಾ ಇರುವ ಮುಸ್ಲಿಮರು ಒಂದಾದರೆ, ನಾಲ್ಕು ಪಾಕಿಸ್ಥಾನವನ್ನು ಮಾಡಿಯೇವು. ನಾವು ಒಟ್ಟಾಗಿ ನಾಲ್ಕು ಪಾಕಿಸ್ಥಾನಗಳನ್ನು ಸೃಷ್ಟಿಸಿದರೆ, ಇಲ್ಲಿರುವ 70 ಶೇಕಡಾ ಇತರರು ಎಲ್ಲಿ ಹೋಗಬೇಕು ಎಂದು ಪಶ್ಚಿಮ ಬಂಗಾಳದ ಟಿಎಂಸಿ ನಾಯಕನೊಬ್ಬ ನೀಡಿರುವ ಹೇಳಿಕೆ ಚುನಾವಣೆ ಹೊತ್ತಲ್ಲಿ ವಿವಾದದ ಕಿಡಿ ಎಬ್ಬಿಸಿದೆ.
ಪಶ್ಚಿಮ ಬಂಗಾಳದ ಬೀರ್ ಭೂಮ್ ವಿಧಾನಸಭಾ ಕ್ಷೇತ್ರದಲ್ಲಿ ಟಿಎಂಸಿ ನಾಯಕ ಶೇಖ್ ಆಲಂ ಚುನಾವಣಾ ಪ್ರಚಾರ ನಡೆಸುತ್ತಿದ್ದ ವೇಳೆ ಈ ಹೇಳಿಕೆಯನ್ನು ನೀಡಿದ್ದು, ಹೇಳಿಕೆಯ ವಿಡಿಯೋವನ್ನು ಪಶ್ಚಿಮ ಬಂಗಾಳ ಬಿಜೆಪಿ ಸಹ ಪ್ರಭಾರಿ ಅಮಿತ್ ಮಾಳವೀಯ ಟ್ವೀಟ್ ಮೂಲಕ ಹಂಚಿಕೊಂಡಿದ್ದಾರೆ. ಅಲ್ಲದೆ, ಈ ಮಾತನ್ನು ಅಲ್ಲಿನ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಪರವಾಗಿ ಪಕ್ಷದ ನಾಯಕ ಕೊಟ್ಟಿದ್ದಾರೆ. ಮಮತಾ ಈ ಮಾತನ್ನು ಒಪ್ಪಿಕೊಳ್ಳುತ್ತಾರೆಯೇ ಎಂದು ಪ್ರಶ್ನಿಸಿದ್ದಾರೆ.
ಮಮತಾ ಬ್ಯಾನರ್ಜಿ ಕಳೆದ ಹತ್ತು ವರ್ಷಗಳಿಂದ ನಡೆಸಿರುವ ಮುಸ್ಲಿಂ ತುಷ್ಟೀಕರಣದ ನೀತಿಯಿಂದಾಗಿ ಶೇಖ್ ಆಲಂ ದೇಶದಲ್ಲಿ ನಾಲ್ಕು ಪಾಕಿಸ್ಥಾನಗಳನ್ನು ಸೃಷ್ಟಿ ಮಾಡುವ ಹೇಳಿಕೆ ನೀಡಲು ಧೈರ್ಯ ತೋರಿದ್ದಾನೆ. ಇವರು ತಮ್ಮ ಆಡಳಿತದಲ್ಲಿ ಪಶ್ಚಿಮ ಬಂಗಾಳದ ಬಹುಸಂಖ್ಯಾತ ನಾಗರಿಕರನ್ನು ದ್ವಿತೀಯ ದರ್ಜೆ ನಾಗರಿಕರನ್ನಾಗಿ ಮಾಡಿದ್ದಾರೆ. ದುರ್ಗಾ ವಿಸರ್ಜನೆ ಮಾಡುವುದಕ್ಕೂ ಬಹುಸಂಖ್ಯಾತರು ಕೋರ್ಟ್ ಪರ್ಮಿಷನ್ ಪಡೆಯಬೇಕಾದ ಸ್ಥಿತಿಯಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಆಲಂ ನೀಡಿರುವ ಹೇಳಿಕೆಯ ವಿಡಿಯೋದಲ್ಲಿ ಆತನ ಎಚ್ಚರಿಕೆಯ ಮಾತುಗಳು ಹೀಗಿವೆ. ‘’ದೇಶದಲ್ಲಿ 30 ಶೇಕಡಾ ಇದ್ದೇವೆ. ಉಳಿದವರು 70 ಶೇಕಡಾ ಇದ್ದಾರೆ. ಅವರು (ಬಿಜೆಪಿ) ಈ 70 ಶೇಕಡಾ ಮಂದಿಯನ್ನು ಮುಂದಿಟ್ಟುಕೊಂಡು ಪಶ್ಚಿಮ ಬಂಗಾಳದಲ್ಲಿ ಅಧಿಕಾರಕ್ಕೇರುತ್ತೇವೆಂದು ಕೊಂಡರೆ ಅದು ಭ್ರಮೆಯಷ್ಟೇ. ನಾವೊಂದು ವೇಳೆ ಎಲ್ಲ ಸೇರ್ಕೊಂಡು ಒಟ್ಟುಗೂಡಿದರೆ, ದೇಶದ ಮುಸ್ಲಿಮರೆಲ್ಲಾ ಒಗ್ಗಟ್ಟಾದರೆ, ನಾಲ್ಕು ಪಾಕಿಸ್ಥಾನಗಳನ್ನು ಸೃಷ್ಟಿಸಬಹುದು. ಹಾಗಾದರೆ, ದೇಶದ ಇತರೇ 70 ಶೇಕಡಾ ಜನ ಎಲ್ಲಿ ಹೋಗುತ್ತಾರೆ, ಹೇಳಿ...’’ ಎಂದು ಪ್ರಶ್ನೆ ಮಾಡಿದ್ದಾರೆ.
ಪಶ್ಚಿಮ ಬಂಗಾಳದಲ್ಲಿ 27 ಶೇ. ಮುಸ್ಲಿಮ್ ಮತದಾರರಿದ್ದಾರೆ. ಅವರ ಮತಗಳೇ ಅಲ್ಲೀಗ ನಿರ್ಣಾಯಕ. ಇದೇ ಕಾರಣಕ್ಕೆ ಟಿಎಂಸಿ ನಾಯಕರು ಈ ರೀತಿಯ ಮಾತುಗಳನ್ನಾಡುತ್ತಿದ್ದಾರೆ ಎನ್ನುವ ಟೀಕೆ ಕೇಳಿಬರುತ್ತಿದೆ. ತನ್ನ ಹೇಳಿಕೆ ಬಗ್ಗೆ ನ್ಯೂಸ್ 18 ವಾಹಿನಿಗೆ ಪ್ರತಿಕ್ರಿಯೆ ನೀಡಿರುವ ಶೇಖ್ ಆಲಂ, ನಾಲ್ಕು ಪಾಕಿಸ್ಥಾನಗಳನ್ನು ಸೃಷ್ಟಿಸಬೇಕು ಎನ್ನುವುದು ನನ್ನ ಹೇಳಿಕೆಯ ಅರ್ಥವಲ್ಲ. ಎಲ್ಲರಿಗೂ ನಾನು ಹೇಳೋದು ಏನಂದ್ರೆ, ಮುಸ್ಲಿಮರನ್ನು ಬೆದರಿಸಲು ಬಂದ್ರೆ ನಾವು ಕೂಡ ಬಲವಾಗಿದ್ದೇವೆ ಎನ್ನುವುದನ್ನು ಹೇಳಿದ್ದೇನೆ ಅಷ್ಟೇ ಎಂದಿದ್ದಾರೆ.
ಪಶ್ಚಿಮ ಬಂಗಾಳದಲ್ಲಿ ಮೊದಲ ಹಂತದ ಮತದಾನಕ್ಕೆ (ಮಾ.27) ಎರಡು ದಿನ ಇರುವಾಗ ಈ ರೀತಿಯ ಹೇಳಿಕೆ ನೀಡಿರುವುದು ರಾಜಕೀಯ ವಲಯದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಿದೆ. ಇದೇ ವೇಳೆ, ಈ ಹೇಳಿಕೆ ಬಿಜೆಪಿ ನಾಯಕರ ಪಾಲಿಗೆ ಆಹಾರವಾಗಿ ಪರಿಣಮಿಸಿದೆ.
Trinamool Congress (TMC) leader Sheikh Alam’s purported remarks that “four Pakistan” can be created if India’s “30% Muslims come together” drew flak from the Bharatiya Janata Party (BJP) on Thursday.
13-05-25 09:50 pm
HK News Desk
Davangere Accident, police constable death: ಲ...
13-05-25 09:37 pm
ಅರ್ಧದಲ್ಲಿ ಕದನ ನಿಲ್ಲಿಸಿದ್ದು ಯಾಕೆ? ಇಷ್ಟಕ್ಕೆ ನಮ್...
13-05-25 01:14 pm
Dr Subbanna Ayyappan Dead, Mandya: ಪದ್ಮಶ್ರೀ ಪ...
11-05-25 01:21 pm
Minister zameer ahmed, Pak, India: ಮೋದಿ ಹೇಳಿದ...
10-05-25 10:40 pm
13-05-25 08:47 pm
HK News Desk
ಪಾಕ್ ಅಣ್ವಸ್ತ್ರ ಗೋದಾಮಿನಲ್ಲಿ ವಿಕಿರಣ ಸೋರಿಕೆ ; ಅಮ...
13-05-25 06:46 pm
ಪಂಜಾಬ್ನಲ್ಲಿ ವಿಷಪೂರಿತ ಮದ್ಯ ಸೇವಿಸಿ 17 ಮಂದಿ ಬಲಿ...
13-05-25 04:39 pm
ಪಾಕಿಸ್ತಾನದಲ್ಲಿ ಬೆನ್ನು ಬೆನ್ನಿಗೆ ಭೂಕಂಪನ ; ಪರಮಾಣ...
13-05-25 02:51 pm
ಮೋದಿ ಎಚ್ಚರಿಕೆ ಬೆನ್ನಲ್ಲೇ ಮತ್ತೆ ಡ್ರೋಣ್ ದಾಳಿ ; ಕ...
12-05-25 11:21 pm
13-05-25 10:33 pm
Mangalore Correspondent
ಹೆದ್ದಾರಿ ಬದಿಯಲ್ಲಿ ಕಸ ಎಸೆಯುವವರ ಮೇಲೆ ನಿಗಾ ವಹಿಸಿ...
13-05-25 07:33 pm
ಕರಾವಳಿಗೆ ಮತ್ತೊಂದು ಸುಸಜ್ಜಿತ ವಿಮಾನ ನಿಲ್ದಾಣ ; ಕಾ...
12-05-25 08:22 pm
Comedy Khiladigalu Rakesh Poojary Death: 'ಕಾಮ...
12-05-25 11:26 am
Mangalore, Pilikula, Dr Suryaprakash Shenoy:...
11-05-25 05:01 pm
13-05-25 07:55 pm
HK News Desk
Abdul Rauf Azhar; ಕಂದಹಾರ್ ವಿಮಾನ ಹೈಜಾಕ್ ಮಾಸ್ಟರ...
08-05-25 05:32 pm
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm