ಬ್ರೇಕಿಂಗ್ ನ್ಯೂಸ್
02-04-21 08:09 pm Headline Karnataka News Network ಕರ್ನಾಟಕ
ಮೈಸೂರು, ಎ.2 : ಸರಕಾರದ ಇಲಾಖೆಯಲ್ಲಿ ರೂಲ್ಸ್ ಪ್ರೊಸೀಜರ್ ಮೀರಬಾರದೆಂಬುದು ನನ್ನ ಉದ್ದೇಶ. ಇದು ನನ್ನ ಮತ್ತು ಯಡಿಯೂರಪ್ಪ ನಡುವಿನ ವೈಯುಕ್ತಿಕ ವಿಚಾರವಲ್ಲ. ನನ್ನ ಇಲಾಖೆಗೆ ಹಣಕಾಸು ಇಲಾಖೆ ಹಣ ನೀಡುತ್ತೆ. ಆ ಹಣವನ್ನು ನಾನು, ನನ್ನ ಇಲಾಖೆ ಖರ್ಚು ಮಾಡಬೇಕು. ಇದು ನಮ್ಮ ಇಲಾಖೆಯ ಹಕ್ಕು. ಆದ್ರೆ ನನ್ನ ಗಮನಕ್ಕೆ ಬಾರದೇ ನೇರವಾಗಿ ಶಾಸಕರಿಗೆ ಹಂಚಿಕೆ ಮಾಡಿರುವುದು ನನ್ನ ಗಮನಕ್ಕೆ ಬಂತು. ಬೆಂಗಳೂರು ನಗರ ಜಿಪಂ ಒಂದಕ್ಕೆ 65 ಕೋಟಿ ಬಿಡುಗಡೆಯಾಗಿದೆ. ಒಟ್ಟು ರಾಜ್ಯದಲ್ಲಿ 1299 ಕೋಟಿ ರೂ. ಅನುದಾನವನ್ನು ಕಾನೂನು ಉಲ್ಲಂಘಿಸಿ ನೇರ ಹಂಚಿಕೆ ಮಾಡಿದ್ದಾರೆ. ಇದನ್ನು ಪ್ರಶ್ನಿಸಿ, ಹಿರಿಯರಿಗೆ ಪತ್ರ ಬರೆದಿದ್ದೇನೆ..

ಹೀಗೆಂದು ಸಿಎಂ ಯಡಿಯೂರಪ್ಪ ವಿರುದ್ಧ ರಾಜ್ಯಪಾಲರಿಗೆ ಪತ್ರ ಬರೆದು ಅಸಮಾಧಾನ ಹೊರಹಾಕಿರುವ ಹಿರಿಯ ಸಚಿವ ಕೆ.ಎಸ್ ಈಶ್ವರಪ್ಪ ಸಮರ್ಥನೆ ಕೊಟ್ಟಿದ್ದಾರೆ.
ಈ ಬಗ್ಗೆ ನಾನು ಪಕ್ಷದ ರಾಜ್ಯ ಉಸ್ತುವಾರಿ ಅರುಣ್ ಸಿಂಗ್, ನಳಿನ್ ಕಟೀಲ್ ಕುಮಾರ್ ಕಟೀಲ್ ಅವರ ಗಮನಕ್ಕೆ ತಂದಿದ್ದೇನೆ. ಪ್ರಧಾನಿ ಮೋದಿ, ಅಮಿತ್ ಶಾ ಎಲ್ಲರಿಗೂ ಪತ್ರ ಬರೆದಿದ್ದೇನೆ ಎಂದು ಹೇಳಿದ ಈಶ್ವರಪ್ಪ , ಆದೇಶ ಹೊರಡಿಸಿದ ಬಳಿಕ ಸಂಬಂಧಪಟ್ಟ ಸಚಿವರ ಗಮನಕ್ಕೆ ತನ್ನಿ ಎಂದು ಸಿಎಂ ಹೇಳಿರುವುದು ಎಷ್ಟು ಸರಿ. ನಾನು ಆರ್ಡಿಪಿಆರ್ ಪ್ರಿನ್ಸಿಪಲ್ ಕಾರ್ಯದರ್ಶಿ ಕೇಳಿದಾಗ, ಇಲ್ಲ ಸರ್, ಅನುದಾನ ತಡೆ ಹಿಡಿಯಲಾಗಿದೆ ಎಂದು ಹೇಳಿದ್ದಾರೆ. ಅರುಣ್ ಸಿಂಗ್, ಕಟೀಲ್, ಸಿ.ಟಿ.ರವಿ ಎಲ್ಲರೂ ತಡೆ ಹಿಡಿಯಿರಿ ಎಂದು ಹೇಳಿದ್ರು. ಸಿಎಂ ನೇರವಾಗಿ ನನ್ನ ಇಲಾಖೆಗೆ ಅನುದಾನ ನೀಡಿ ಹಂಚಿಕೆ ಮಾಡಬೇಕು. ಈ ರೂಲ್ಸ್ ಪ್ರೊಸೀಜರ್ ಪಾಲನೆ ಆಗಬೇಕೆಂಬುದು ನನ್ನ ಉದ್ದೇಶ ಎಂದು ಹೇಳಿದರು.

ಹಾಗೆಂದು ಮಾಧ್ಯಮಗಳು ನನ್ನ ಬಗ್ಗೆ ರೆಬಲ್ ಅಂತ ತೋರಿಸುವುದಲ್ಲ. ನನ್ನ ಜಾಯಮಾನದಲ್ಲಿ ರೆಬಲ್ ಆಗಲ್ಲ. ನಾನು ರೆಬಲ್ ಅಲ್ಲ, ನಾನು ಲಾಯಲ್. ನನ್ನ ಜೀವನದಲ್ಲಿ ಪಕ್ಷದ ವಿರುದ್ಧ ರೆಬಲ್ ಆಗಿಲ್ಲ ಎಂದು ಹೇಳಿದರು.
The controversy triggered in Karnataka by state minister K.S. Eshwarappa’s letter to the governor against B.S. Yediyurappa comes as the latest challenge for the besieged chief minister.
24-08-26 03:16 pm
HK News Staffer
ಕರ್ನಾಟಕದಲ್ಲಿ ‘ಅನಲಾಗ್ ಪನ್ನೀರ್’ಗೆ ಒಂದು ವರ್ಷ ನಿಷ...
22-08-26 10:15 pm
ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ನಾಪತ್ತೆ ; ಏ...
22-08-26 03:01 pm
500 ಕೆಪಿಎಸ್ ಶಾಲೆಗಳ ಸಮಗ್ರ ಅಭಿವೃದ್ಧಿಗೆ ₹2500 ಕೋ...
22-08-26 11:10 am
ದೇಶದ ರಾಜಕೀಯದಲ್ಲಿ ಬಹುದೊಡ್ಡ ಬಿರುಗಾಳಿ; ವಿರುದ್ಧ ಧ...
21-08-26 03:42 pm
24-08-26 04:55 pm
HK News Staffer
ಪಾಲ್ಘಾಟ್ ರೈಲ್ವೇ ವಿಭಾಗದಿಂದ ಮಂಗಳೂರು ಹೊರಕ್ಕೆ ; ವ...
22-08-26 08:37 pm
ದೇಹದಲ್ಲಿಡೀ ಉರಿ ಉರಿ! ಕೆರೆಯಲ್ಲೇ ವಾಸ, ಅಲ್ಲೇ ಆಹಾ...
20-08-26 10:55 am
ತಮಿಳುನಾಡು ಮಹಿಳಾ ಸರ್ಕಾರಿ ನೌಕರರಿಗೆ ಸರ್ಕಾರದ ಬಂಪರ...
19-08-26 02:13 pm
ಲಷ್ಕರ್ ಸ್ಥಾಪಕ ಹಫೀಜ್ ಸಯೀದ್ 10,000 ಯುವಕರನ್ನು ಕಾ...
19-08-26 01:06 pm
24-08-26 06:25 pm
HK News Staffer
ಈದ್ ಮಿಲಾದ್ ; ಬೆಳಗ್ಗೆ ಕೋಟೆಪುರದಿಂದ ಉಳ್ಳಾಲ ದರ್ಗಾ...
24-08-26 04:14 pm
ಅಡಿಕೆ ಎಲೆ ಚುಕ್ಕಿ ರೋಗ ನಿಯಂತ್ರಣಕ್ಕೆ ಸಿಪಿಸಿಆರ್ ಐ...
24-08-26 04:11 pm
ಎಂಆರ್ ಪಿಎಲ್ ನಲ್ಲಿ 26 ಇಂಜಿನಿಯರಿಂಗ್ ಹುದ್ದೆಗಳ ಭರ...
24-08-26 01:13 pm
ಹಲ್ಲೆಗೀಡಾದವರ ಮೇಲೆ ಕೊಲೆಯತ್ನ ಕೇಸು ಹಾಕಿದ್ದಾರೆ, ಹ...
23-08-26 06:17 pm
24-08-26 09:06 pm
HK News Staffer
ಸಾವಿರಾರು ಕೋಟಿ ವಂಚಕ, ಶಿವಂ ಅಸೋಸಿಯೇಟ್ಸ್ ಮಾಲೀಕ ಶಿ...
24-08-26 07:04 pm
ಚಿಕ್ಕಮಗಳೂರಿನಲ್ಲಿ ಈದ್ ಮೆರವಣಿಗೆ ಸಿದ್ಧತೆ ; ಬೃಹತ್...
24-08-26 02:35 pm
ಕುಂಬಳೆಯ ಮುಸ್ಲಿಂ ವ್ಯಾಪಾರಿಗೆ ಹನಿಟ್ರ್ಯಾಪ್ ; ವಿಡಿ...
24-08-26 02:25 pm
ನದಿಗೆ ಬಿದ್ದ ಫುಟ್ಬಾಲ್ ಹೆಕ್ಕಲು ಹೋಗಿ ಜೀವ ಕಳಕೊಂಡ...
24-08-26 01:03 pm