ಕರ್ನಾಟಕದಲ್ಲಿ ಇಂದು 8,061 ಮಂದಿ ಸೋಂಕಿನಿಂದ ಗುಣಮುಖರಾಗಿದ್ದಾರೆ

24-08-20 09:51 pm       Bangalore Correspondent   ಕರ್ನಾಟಕ

ಸೋಂಕಿನಿಂದ ಇಂದು ರಾಜ್ಯದಾದ್ಯಂತ 8,061 ಮಂದಿ ಗುಣಮುಖರಾಗಿದ್ದಾರೆ, ಬೆಂಗಳೂರು ನಗರದಲ್ಲಿ 2,034 ಮಂದಿ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ಈವರೆಗೆ ರಾಜ್ಯದಲ್ಲಿ 1,97,625 ಮಂದಿ ಗುಣಮುಖರಾಗಿದ್ದಾರೆ.

ಬೆಂಗಳೂರು, ಆಗಸ್ಟ್ 24: ಸೋಂಕಿನಿಂದ ಇಂದು ರಾಜ್ಯದಾದ್ಯಂತ 8,061 ಮಂದಿ ಗುಣಮುಖರಾಗಿದ್ದಾರೆ, ಬೆಂಗಳೂರು ನಗರದಲ್ಲಿ 2,034 ಮಂದಿ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ಈವರೆಗೆ ರಾಜ್ಯದಲ್ಲಿ 1,97,625 ಮಂದಿ ಗುಣಮುಖರಾಗಿದ್ದಾರೆ.

ರಾಜ್ಯದಲ್ಲಿ ಇಂದು 5,851 ಮಂದಿ ಕೊರೊನಾ ಸೋಂಕಿಗೆ ಒಳಗಾಗಿದ್ದಾರೆ. ಈ ಮೂಲಕ ಈವರೆಗೆ ಸೋಂಕಿಗೆ ಒಳಗಾದವರ ಸಂಖ್ಯೆ 2,83,665ಕ್ಕೆ ಏರಿಕೆಯಾಗಿದೆ. ಇನ್ನು ಬೆಂಗಳೂರು ನಗರವೊಂದರಲ್ಲೇ ಇಂದು 1,918 ಮಂದಿಗೆ ಕೊರೊನಾ ಪಾಸಿಟಿವ್ ಬಂದಿದೆ.

ಸೋಂಕಿನಿಂದ ಇಂದು 130 ಮಂದಿ ಸಾವನ್ನಪ್ಪಿದ್ದು ಬೆಂಗಳೂರು ನಗರವೊಂದರಲ್ಲೇ 26 ಮಂದಿ ಸಾವನ್ನಪ್ಪಿದ್ದಾರೆ. ಈವರೆಗೆ ಸಾವನ್ನಪ್ಪಿದವರ ಸಂಖ್ಯೆ 4,810ಕ್ಕೆ ಏರಿಕೆಯಾಗಿದೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.