ಬ್ರೇಕಿಂಗ್ ನ್ಯೂಸ್
01-06-21 09:54 pm Satish, Bengaluru Correspondent ಕರ್ನಾಟಕ
ದಾವಣಗೆರೆ, ಜೂನ್ 1: ಯಡಿಯೂರಪ್ಪ ಆಲದ ಮರ, ಚಾಕು ಹಾಕಲು ಬಂದ್ರೆ ನಾವು ಸುಮ್ನೆ ಬೀಡ್ತೀವಾ? ಉಂಡು ಹೋದ ಕೊಂಡೂ ಹೋದ ಯೋಗಿಶ್ವರ್ ಒಬ್ಬ ಭ್ರಷ್ಟಾಚಾರಿ.. ಹೀಗೆಂದು ಸಚಿವ ಸಿ.ಪಿ. ಯೋಗೀಶ್ವರ್ ಅವರನ್ನು ಛೇಡಿಸಿದ್ದು ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ.
ಇತ್ತೀಚೆಗೆ ಸಿಎಂ ಯಡಿಯೂರಪ್ಪ ವಿರುದ್ಧ ದೆಹಲಿಗೆ ದೂರು ಹೇಳಿಕೊಂಡು ಹೋಗಿದ್ದಲ್ಲದೆ, ರಾಜ್ಯದಲ್ಲಿರುವುದು ಮೂರು ಪಕ್ಷಗಳ ಸರಕಾರ ಎಂದು ಟೀಕಿಸಿದ್ದ ಯೋಗೀಶ್ವರ್ ವಿರುದ್ಧ ಬಿಜೆಪಿಯ ಇತರ ಸಚಿವರು, ಯಡಿಯೂರಪ್ಪ ಬಣದ ಶಾಸಕರು ಹರಿಹಾಯ್ದಿದ್ದಾರೆ.

ಇದೇ ವಿಚಾರದಲ್ಲಿ ದಾವಣಗೆರೆಯಲ್ಲಿ ಯೋಗೀಶ್ವರ್ ವಿರುದ್ಧ ವಾಗ್ದಾಳಿ ನಡೆಸಿದ ಎಂಪಿ ರೇಣುಕಾಚಾರ್ಯ, ಯೋಗೀಶ್ವರ್ ಒಬ್ಬ ಭ್ರಷ್ಟಾಚಾರಿ.. ಆ ವ್ಯಕ್ತಿ ಏನೆಲ್ಲ ಮಾಡಿದ್ದಾನೆ ಅವೆಲ್ಲದರ ದಾಖಲೆ ಬಿಡುಗಡೆ ಮಾಡುತ್ತೇನೆ. ಮೆಗಾಸಿಟಿ ಅಕ್ರಮದ ಬಗ್ಗೆಯೂ ದಾಖಲೆ ಬಿಡುಗಡೆ ಮಾಡ್ತೀನಿ ಎಂದು ಗುಡುಗಿದ್ದಾರೆ.
ಚುನಾವಣೆಯಲ್ಲಿ ಸೋತ ವ್ಯಕ್ತಿ ಅವರಿವರ ಕಾಲು ಹಿಡಿದು ಮಂತ್ರಿ ಆಗಿದ್ದಾನೆ. ಕೊಟ್ಟ ಇಲಾಖೆಯ ಅಧಿಕಾರಿಗಳ ಸಭೆಯನ್ನೇ ಮಾಡಿಲ್ಲ. ಕೇವಲ ದೆಹಲಿ- ಬೆಂಗಳೂರು ಪ್ರವಾಸ ಮಾಡುವುದೇ ಆಗಿದೆ. ಕೆಲವು
ದೆಹಲಿ ನಾಯಕರ ಗೇಟ್ ಕಾದು ಗಾಸಿಪ್ ಹರಡಿಸುವುದೇ ಯೋಗಿಶ್ವರ್ ಕೆಲಸವಾಗಿದೆ. ಇದೀಗ ರಾಷ್ಟ್ರೀಯ ನಾಯಕರೇ ಮಂಗಳಾರತಿ ಮಾಡಿ ಕಳುಹಿಸಿದ್ದಾರೆ ಎಂದು ಮೂದಲಿಸಿದರು.

ಯೋಗೀಶ್ವರ್ ತನ್ನ ಸ್ವಂತ ಊರು ಚಿಕ್ಕೇರಿಹಳ್ಳಿಯಲ್ಲಿ ಬಿಜೆಪಿಗೆ ಗ್ರಾಪಂ ಸ್ಥಾನವನ್ನೂ ಗೆಲ್ಲಿಸಲು ಸಾಧ್ಯವಾಗಿಲ್ಲ. ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ನಗರಸಭೆಯನ್ನೂ ಗೆದ್ದಿಲ್ಲ. ಇವರಿಗೆ ರಾಮನಗರ ಉಸ್ತುವಾರಿ ಬೇಕಂತೆ ಎಂದು ವ್ಯಂಗ್ಯವಾಡಿದ ರೇಣುಕಾಚಾರ್ಯ,
ಚುನಾವಣೆಯಲ್ಲಿ ಸೋತ ವ್ಯಕ್ತಿಗೆ ಹಿಂಬಾಗಿಲ ಮೂಲಕ ಮಂತ್ರಿ ಸ್ಥಾನ ಕೊಟ್ಟಿದ್ದೇ ಅಪರಾಧ, ಈತನಿಗೆ ಉಸ್ತುವಾರಿ ಬೇಕಂತೆ. ಮೂರು ಪಕ್ಷ ಹಾರಿ ಬಂದ ಯೋಗಿಶ್ವರ್ ಪಾಲಿಗೆ ಬಿಜೆಪಿಯಲ್ಲಿ ಕಥೆ ಮುಗಿದಂತೆ. ಈಗಾಗ್ಲೇ 65 ಜನ ಶಾಸಕರು ಸಹಿ ಮಾಡಿದ್ದೇವೆ, ಕೋವಿಡ್ ಮುಗಿದ ಬಳಿಕ ಸಚಿವ ಸ್ಥಾನದಿಂದ ವಜಾಕ್ಕೆ ಹೈಕಮಾಂಡ್ ಗೆ ಅಗ್ರಹ ಮಾಡುತ್ತೇವೆ ಎಂದು ಹೇಳಿದರು.
ಯತ್ನಾಳ್ ಸಿಎಂ ಬಗ್ಗೆ ಹಗುರವಾಗಿ ಮಾತನಾಡೋದು ಸರಿಯಲ್ಲ. ಪದೇ ಪದೇ ವಿಜಯೇಂದ್ರ ಹೆಸರು ಯಾಕೆ ಹೇಳ್ತೀರಿ.. ಇವೆಲ್ಲದರ ಬಗ್ಗೆ ಇನ್ನು ಸುಮ್ಮನಿರಲು ಸಾಧ್ಯವಿಲ್ಲ ಎಂದು ರೇಣುಕಾಚಾರ್ಯ ಕಿಡಿಕಾರಿದ್ದಾರೆ.
Davangere MP Renukacharya slammed at CP Yogeshwar says he's a most corrupted Politician. CM Yediyurappa is like an Ashoka tree no one can cut off him said Renukacharya
25-05-26 09:38 pm
HK News Staffer
Student Suicide: ನೀಟ್ ಪರೀಕ್ಷೆ ಪಜೀತಿ ; ಪಿಯುಸಿಯ...
24-05-26 09:03 pm
ಕಪ್ಪೆಚಿಪ್ಪು ತೆಗೆಯಲು ನದಿಗಿಳಿದಿದ್ದ ಏಳು ಮಹಿಳೆಯರು...
24-05-26 05:36 pm
ಬೆಂಗಳೂರು ಜಿಬಿಎ ಚುನಾವಣೆಗೆ ವಿಜಯ್ ಪಕ್ಷ ಎಂಟ್ರಿ ?...
23-05-26 11:37 pm
ಸರ್ಕಾರಿ ಶಾಲೆಗಳಲ್ಲಿ ಕೇಸರಿ ಶಾಲು ಧರಿಸಲು ಅವಕಾಶ ಇಲ...
23-05-26 10:40 pm
26-05-26 12:54 pm
HK News Staffer
ಗೃಹಲಕ್ಷ್ಮಿ ಪಡೆಯಲು ಬಯೋಮೆಟ್ರಿಕ್ ಕಡ್ಡಾಯ ; ಕೂಡಲೇ...
26-05-26 12:50 pm
ಎಐಎಡಿಎಂಕೆ ಪಕ್ಷದ ಮೂವರು ಶಾಸಕರು ಸ್ಥಾನಕ್ಕೆ ರಾಜಿನಾ...
25-05-26 08:18 pm
ಕಾಕ್ರೋಚ್ ಜನತಾ ಪಾರ್ಟಿ ವಿರುದ್ಧ ಸಿಬಿಐ ತನಿಖೆಗೆ ಸು...
25-05-26 05:29 pm
ಮತ್ತೆ ಇಂಧನ ಶಾಕ್..! 11 ದಿನದಲ್ಲಿ 4ನೇ ಬಾರಿ ಪೆಟ್ರ...
25-05-26 10:19 am
25-05-26 09:57 pm
HK News Staffer
‘ಲ್ಯಾಂಡ್ ಲಿಂಕ್ಸ್’ ಸಂಸ್ಥೆಯ ನಾಲ್ಕು ಸಭಾಭವನ ಏಕಕಾ...
25-05-26 04:23 pm
ಅಮೆರಿಕದಲ್ಲಿ ಧರ್ಮಗುರು, ಹುಟ್ಟೂರು ಮಂಗಳೂರಿನಲ್ಲಿ ಸ...
25-05-26 01:08 pm
Mukka Accident, Mangalore: ಮುಕ್ಕ ಬಳಿ ಭೀಕರ ಅಪಘ...
24-05-26 09:22 pm
ಕುಳೂರು ಸೇತುವೆಯಿಂದ ಹಾರಿ ಆತ್ಮಹತ್ಯೆಗೆ ಯತ್ನಿಸಿದ ಹ...
24-05-26 04:45 pm
26-05-26 02:43 pm
HK News Staffer
ಪಿಯುಸಿ ವಿದ್ಯಾರ್ಥಿನಿಯ ಅತ್ಯಾಚಾರ, ಕೊಲೆ ಪ್ರಕರಣ ;...
26-05-26 11:56 am
Tablet Arif Murder: ಟ್ಯಾಬ್ಲೆಟ್ ಆರೀಫ್ ಕೊಲೆ ಪ್ರ...
25-05-26 11:00 pm
ಭಟ್ಕಳದಲ್ಲಿ ಮುರಿದ ಕೋಮು ಸಾಮರಸ್ಯದ ಕಟ್ಟೆ; ರಸ್ತೆ ನ...
25-05-26 09:40 pm
ಮುಸ್ಲಿಂ ಲೀಗ್ ಶಾಸಕನ ಬಗ್ಗೆ ವಾಟ್ಸಾಪ್ ಗ್ರೂಪಿನಲ್ಲಿ...
25-05-26 04:26 pm