ಬ್ರೇಕಿಂಗ್ ನ್ಯೂಸ್
12-06-21 11:37 am Headline Karnataka News Network ಕರ್ನಾಟಕ
ಚಿಕ್ಕಬಳ್ಳಾಫುರ, ಜೂನ್ 12: ಲಾಕ್ಡೌನ್ ಕಾರಣದಿಂದಾಗಿ ಟೊಮ್ಯಾಟೊ ಧಾರಣೆಯಲ್ಲಿ ತೀವ್ರ ಕುಸಿತವಾಗಿದ್ದು ರೈತರು ತಾವು ಬೆಳೆದ ಟೊಮ್ಯಾಟೋವನ್ನು ರಸ್ತೆಗೆ ಸುರಿದು ಹೋಗಿದ್ದಾರೆ.
ಟೊಮ್ಯಾಟೋವನ್ನು ಕೊಳ್ಳುವವರೇ ಇಲ್ಲದೆ, ಚಿಕ್ಕಬಳ್ಳಾಪುರ ನಗರದ ಮಾರುಕಟ್ಟೆ ಹೊರಗಡೆ ರಸ್ತೆಯಲ್ಲಿ ಸುರಿಯಲಾಗಿದೆ. ರಸ್ತೆಗೆ ಸುರಿದಿರುವ ಟೊಮ್ಯಾಟೋ ರಾಶಿ ದನಗಳಿಗೂ ಬೇಡವಾಗಿದೆ. ರಾಶಿ ಹಾಕಿದ ಹಸಿ ಹಸಿ ಟೊಮ್ಯಾಟೋ ಹಣ್ಣುಗಳನ್ನು ಹಸುಗಳು ತಿನ್ನುತ್ತಿದ್ದು ಹೊಟ್ಟೆ ತುಂಬಿದ ಬಳಿಕ ಹಾಗೇ ಬಿಟ್ಟುಬಿಟ್ಟಿದೆ.
ಚಿಕ್ಕಬಳ್ಳಾಪುರದ ಮಾರುಕಟ್ಟೆಯಲ್ಲಿ 15 ಕೇಜಿಯ ಟೊಮ್ಯಾಟೋ ಬಾಕ್ಸಿಗೆ ಕೇವಲ 50 ರೂ. ಬೆಲೆಯಿದ್ದು ಅಷ್ಟಕ್ಕೂ ಕೊಳ್ಳುವವರಿಲ್ಲದಂತಾಗಿದೆ. ಹೀಗಾಗಿ ರಾಶಿ ರಾಶಿ ಟೊಮ್ಯಾಟೋಗಳನ್ನು ಎಪಿಎಂಸಿ ಮಾರುಕಟ್ಟೆಗೆ ರೈತರು ಹೊರಗಡೆ ಸುರಿದು ಹೋಗಿದ್ದಾರೆ. ಕೇಜಿ ಟೊಮ್ಯಾಟೋ ಬೆಲೆ 3 ರೂಪಾಯಿಗೆ ಕುಸಿದಿದ್ದು ಪಿಕಪ್, ಟೆಂಪೋಗಳಲ್ಲಿ ಮಾರುಕಟ್ಟೆಗೆ ತಂದವರು ವಾಹನ ಬಾಡಿಗೆಯ ಹಣವೂ ಸಿಗದೆ ಕಂಗಾಲಾಗಿದ್ದಾರೆ.
ಚಿಕ್ಕಬಳ್ಳಾಪುರ ನಗರದ ಎಪಿಎಂಸಿ ಮಾರುಕಟ್ಟೆಯ ಹೊರಗಡೆಯಲ್ಲಿ ರಾಶಿಗಟ್ಟಲೆ ಟೊಮ್ಯಾಟೋ ಬಿದ್ದಿದ್ದು ರೈತರ ಸ್ಥಿತಿ ಹೀನಾಯ ಎನ್ನುವಂತಾಗಿದೆ.
ಚಿಕ್ಕಬಳ್ಳಾಪುರ, ಕೋಲಾರ, ಚಿತ್ರದುರ್ಗದಲ್ಲಿ ಅತಿ ಹೆಚ್ಚು ಟೊಮ್ಯಾಟೊ ಬೆಳೆಯುತ್ತಿದ್ದು ಈಗ ಬೆಳೆಯ ಸೀಸನ್. ಆದರೆ, ಲಾಕ್ಡೌನ್ ಕಾರಣದಿಂದಾಗಿ ಟೊಮ್ಯಾಟೋಗೆ ಬೆಲೆ ಇಲ್ಲದೆ, ರೈತರು ಕಂಗಾಲಾಗಿದ್ದು ವಾಹನಗಳಲ್ಲಿ ತಂದ ಬೆಳೆಯನ್ನು ದಿನವೂ ರಸ್ತೆಯಲ್ಲೇ ಸುರಿದು ಹೋಗುತ್ತಿದ್ದಾರೆ. ಕೈಗೆ ಬಂದ ತುತ್ತು ಬಾಯಿಗಿಲ್ಲದ ಪರಿಸ್ಥಿತಿ. ಸರಕಾರದ ಕಡೆಯಿಂದ ರೈತರಿಂದ ನೇರವಾಗಿ ಖರೀದಿಸಿ ತಲುಪಿಸುವ ಕಾರ್ಯ ಮಾಡಬಹುದು. ಆದರೆ, ಎಪಿಎಂಸಿಯಾಗಲೀ, ಇತರೇ ಮಾರುಕಟ್ಟೆ ವ್ಯಾಪಾರಸ್ಥರಾಗಲೀ ಆ ಕೆಲಸವನ್ನು ಮಾಡಿಲ್ಲ.
Video: Click
Supply chain distortion of farm produce owing to the lockdown over COVID-19 has hurt both farmers and consumers. There have been reports from across the state of farmers, in despair, destroying their own crop in chikkaballapur
15-09-25 08:53 pm
Bangalore Correspondent
Actor Upendra, Wife Priyanka, Cyber Fraud, Ha...
15-09-25 04:45 pm
Pratap Simha, Banu Mushtaq: ಬಾನು ಮುಷ್ತಾಕ್ ದಸರ...
15-09-25 03:39 pm
Bommai, SIT, Dharmasthala, Bommai: ನಿರೀಕ್ಷೆಗೆ...
14-09-25 05:18 pm
ವಾಹನ ಸವಾರರಿಗೆ ಶೇ.50 ರಿಯಾಯಿತಿ ಆಫರ್ ಎಫೆಕ್ಟ್ ...
13-09-25 10:38 pm
15-09-25 04:57 pm
HK News Desk
ನಾನು ಶಿವಭಕ್ತ ; ನಿಂದನೆಯ ವಿಷವನ್ನು ಕುಡಿದು ಜೀರ್ಣಿ...
14-09-25 10:49 pm
ಪ್ರಧಾನಿ ಮೋದಿ ಅಸ್ಸಾಂನಲ್ಲಿ ಇರುವಾಗಲೇ 5.8ರ ತೀವ್ರತ...
14-09-25 07:31 pm
ಮಿಜೋರಾಂ ರಾಜ್ಯದಲ್ಲಿ ಮೊದಲ ರೈಲು ಮಾರ್ಗ ಪ್ರಧಾನಿ ಮೋ...
13-09-25 03:25 pm
ವಾಷಿಂಗ್ ಮೆಷಿನ್ ವಿಷಯದಲ್ಲಿ ವಾಗ್ವಾದ ; ಅಮೆರಿಕದಲ...
12-09-25 11:33 am
15-09-25 08:28 pm
Mangalore Correspondent
Mangalore Accident, Saudi, Ullal: ಸೌದಿ ಅರೇಬಿಯ...
15-09-25 02:08 pm
ಬಂಗ್ಲೆಗುಡ್ಡೆ ಕಾಡಿನಲ್ಲಿ ಸ್ಥಳ ಶೋಧಕ್ಕೆ ಎಸ್ಐಟಿ ಸಿ...
15-09-25 01:58 pm
Mangalore, Ullal News, Boat: ಕೈಕೊಟ್ಟ ಇಂಜಿನ್ ;...
15-09-25 11:27 am
Vittal Gowda, Mangalore, Dharmasthala: ವಿಠಲ ಗ...
14-09-25 10:55 pm
15-09-25 10:47 pm
Bangalore Correspondent
Udupi, Surat Murder, Arrest: ವೃದ್ಧ ದಂಪತಿಯನ್ನು...
14-09-25 06:01 pm
Mangalore Fake Aadhar, RTC Scam, Police: ಆರೋಪ...
13-09-25 11:36 am
ಅಪ್ರಾಪ್ತ ಬಾಲಕಿಯನ್ನು ಅತ್ಯಾಚಾರಗೈದು ಹತ್ಯೆ ; ಬೆಳಗ...
12-09-25 11:07 pm
Ullal Police, Mangalore, Gold Robbery: ತೊಕ್ಕೊ...
12-09-25 10:48 pm