ಮೈಸೂರು; ದೊಡ್ಡ ಬಕೆಟ್ ನೀರಿನಲ್ಲಿ 2 ವರ್ಷದ ಮಗು ಬಿದ್ದು ಸಾವು

18-06-21 05:48 pm       Headline Karnataka News Network   ಕರ್ನಾಟಕ

ನೀರು ತುಂಬಿದ್ದ ದೊಡ್ಡ  ಬಕೆಟ್ ಗೆ  2 ವರ್ಷದ ಮಗು ಬಿದ್ದು ಸಾವನ್ನಪ್ಪಿರುವ ದುರ್ಘಟನೆ ತರಿಕಲ್ ಗ್ರಾಮದಲ್ಲಿ ನಡೆದಿದೆ. 

ಮೈಸೂರು, ಜೂನ್ 18 : ನೀರು ತುಂಬಿದ್ದ ದೊಡ್ಡ  ಬಕೆಟ್ ಗೆ  2 ವರ್ಷದ ಮಗು ಬಿದ್ದು ಸಾವನ್ನಪ್ಪಿರುವ ದುರ್ಘಟನೆ ಜಿಲ್ಲೆಯ ಹುಣಸೂರು ತಾಲೂಕಿನ ತರಿಕಲ್ ಗ್ರಾಮದಲ್ಲಿ ನಡೆದಿದೆ. 

ಗ್ರಾಮದ ಮಾಜಿ ಪಂಚಾಯತ್ ಅಧ್ಯಕ್ಷ  ಸುಂದರ್ ರಾಜ್ ಹಾಗೂ ಪ್ರೇಮಾ ದಂಪತಿಯ ಪುತ್ರ ಸಮರ್ಥ ಎಂದು ಗುರುತಿಸಲಾಗಿದೆ. 

ಬಚ್ಚಲುಮನೆಯಲ್ಲಿ ಇಟ್ಟಿದ್ದ ದೊಡ್ಡ ಬಕೆಟ್ ನೀರಿನಲ್ಲಿ ನೀರು ತೆಗೆದುಕೊಳ್ಳಲು ಹೋಗಿದ್ದ ಮಗು ಸಮರ್ಥ ಮಕಾಡೆ ಬಿದ್ದಿದ್ದಾನೆ, ಅಕ್ಕಂದಿರೊಂದಿಗೆ ಆಟವಾಡುತ್ತಿದ್ದ ಪುತ್ರ ಸಮರ್ಥ ಕಾಣದಿದ್ದಾಗ ಮನೆಯವರೆಲ್ಲರೂ ಹುಡುಕಾಟ ನಡೆಸಿದ್ದಾರೆ. ಆನಂತರ ಬಚ್ಚಲುಮನೆಯ ಬಕೆಟ್ ನಲ್ಲಿ ಮಗು ಬಿದ್ದಿರುವುದನ ಕಂಡ ಕುಟುಂಬಸ್ಥರು ಮೇಲೆತ್ತಿದ್ದರು ಪ್ರಯೋಜನವಾಗಲಿಲ್ಲ, ಆತನ ಪ್ರಾಣ ಆಗಲೇ ಹಾರಿಹೋಗಿತ್ತು.  

ಗ್ರಾಮದಲ್ಲಿ ರಾತ್ರಿಯೇ ಅಂತ್ಯಸಂಸ್ಕಾರ ಮಾಡಲಾಗಿದ್ದು ಶಾಸಕ ಮಂಜುನಾಥ್ ಮಗುವಿನ ಅಂತ್ಯಸಂಸ್ಕಾರ ಮುಗಿಯುವವರೆಗೂ ಇದ್ದು ಪೋಷಕರಿಗೆ ಸಾಂತ್ವನ ಹೇಳಿದರು. ಈ ಸಂಬಂಧ ಯಾವುದೇ ಪ್ರಕರಣ ದಾಖಲಾಗಿಲ್ಲ.

In a tragic incident in Mysore, a Two-year-old child falls into a water-filled bucket and dies. The deceased has been identified as Samarth. No case has been filed in regards to this case.