ಯಡಿಯೂರಪ್ಪ ಬಹಳ ಆಸೆಪಟ್ಟು ಸರ್ಕಾರ ಮಾಡಿದ್ರು, ಈಗ ಅವ್ರ ಪಕ್ಷದವ್ರೇ ಅವ್ರನ್ನು ಕೆಡವುತ್ತಿದ್ದಾರೆ ; ಪರಮೇಶ್ವರ್ ಮರುಕ

20-07-21 12:59 pm       Headline Karnataka News Network   ಕರ್ನಾಟಕ

ಸಂಪುಟದಲ್ಲಿ ಇದ್ದವರೇ ಸಿಎಂ ಬದಲಾಯಿಸಲು ಹೊರಟಿದ್ದಾರೆ.‌ ಇವರ ಕಿತ್ತಾಟ ಆಡಳಿತದ ಮೇಲೆ ಪರಿಣಾಮ ಬೀಳುತ್ತಿದೆ. ಜನರಿಗೆ ಇದರಿಂದ ಸಂಕಷ್ಟ ಉಂಟಾಗುತ್ತಿದೆ ಎಂದು ಮಾಜಿ ಡಿಸಿಎಂ ಜಿ. ಪರಮೇಶ್ವರ್ ಹೇಳಿದ್ದಾರೆ. 

ತುಮಕೂರು, ಜುಲೈ 20: ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿ ಬಹಳ ಆಸೆ ಇಟ್ಟುಕೊಂಡು ಸರ್ಕಾರ ಮಾಡಿದ್ರು. ಬಹಳ ಕಷ್ಟಪಟ್ಟು ಶಾಸಕರನ್ನು ಕೊಂಡು ಬಿಜೆಪಿ ಸರ್ಕಾರ ತಂದಿದ್ರು. ಆದರೆ, ಅವರ ಪಕ್ಷದವರೇ ಅವರನ್ನ ಬದಲಾಯಿಸಲು ಹೊರಟಿರೋದು ದುರದೃಷ್ಟಕರ ಎಂದು ಮಾಜಿ ಡಿಸಿಎಂ ಜಿ. ಪರಮೇಶ್ವರ್ ಹೇಳಿದ್ದಾರೆ. 

ಸಂಪುಟದಲ್ಲಿ ಇದ್ದವರೇ ಸಿಎಂ ಬದಲಾಯಿಸಲು ಹೊರಟಿದ್ದಾರೆ.‌ ಇವರ ಕಿತ್ತಾಟ ಆಡಳಿತದ ಮೇಲೆ ಪರಿಣಾಮ ಬೀಳುತ್ತಿದೆ. ಜನರಿಗೆ ಇದರಿಂದ ಸಂಕಷ್ಟ ಉಂಟಾಗುತ್ತಿದೆ. ಸಿಎಂಗೆ ನಾನು ಮೊದಲೇ ಹೇಳಿದ್ದೇ, ಇದನ್ನೆಲ್ಲಾ ಸರಿಪಡಿಸಿಕೊಳ್ಳುವಂತೆ ಹೇಳಿದ್ದೆ. ಬಿಜೆಪಿಯವರು ಮಾಡುತ್ತಿರುವ ತಪ್ಪುಗಳು ಬಹಳಷ್ಟಿದೆ. ಅವೆಲ್ಲಾ ನಮಗೆ, ಕಾಂಗ್ರೆಸ್ ಪಾಲಿಗೆ ಅನುಕೂಲ ಆಗಲಿದೆ ಎಂದು ಹೇಳಿದರು. 

ಎಂ.ಬಿ.ಪಾಟೀಲ ಮತ್ತು ಶಾಮನೂರು ಅವರು ಬೇರೆ ಬೇರೆ ಕಾರಣಗಳಿಗೆ ಯಡಿಯೂರಪ್ಪ ಅವರನ್ನು ಬೆಂಬಲಿಸಿರಬಹುದು. ನಾವೇನು ಹೋಗಿ ಅಂಥಾ ಹೇಳುತ್ತಿಲ್ಲ. ಇನ್ನೂ ಒಂದೂವರೆ ವರ್ಷ ಇದೆ, ಆಡಳಿತ ನಡೆಸಿ. ಯಡಿಯೂರಪ್ಪನವರೇ ಅಧಿಕಾರ ಪೂರ್ಣ ಮಾಡಬೇಕು ಎಂಬ ಆಸೆ ನಮಗಿದೆ. ಯಾಕೆಂದರೆ ಅವರು ಅನೇಕ ತಪ್ಪುಗಳನ್ನು ಮಾಡುತ್ತಾ ಇದ್ದರೆ ನಮಗೆ ಅನುಕೂಲ. ಕಾಂಗ್ರೆಸ್‌ ಯಾವಾಗಲೂ ಚುನಾವಣೆಗೆ ಸಿದ್ಧ ಇರುತ್ತದೆ.‌ ಸರಕಾರ ಬಿದ್ದರೆ ಚುನಾವಣೆ ಎದುರಿಸಲು ರೆಡಿ ಇದ್ದೇವೆ ಎಂದು ಹೇಳಿದರು.