ಬ್ರೇಕಿಂಗ್ ನ್ಯೂಸ್
22-07-21 05:04 pm Headline Karnataka News Network ಕರ್ನಾಟಕ
ಬೆಂಗಳೂರು, ಜುಲೈ 22: ಯಡಿಯೂರಪ್ಪ ಪರವಾಗಿ ಲಿಂಗಾಯತ ಸ್ವಾಮೀಜಿಗಳು ಬ್ಯಾಟಿಂಗ್ ಮಾಡುತ್ತಿರುವ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸಚಿವ ಕೆ.ಎಸ್. ಈಶ್ವರಪ್ಪ, ಯಡಿಯೂರಪ್ಪ ಸಿಎಂ ಆಗುವಾಗ ಇವರು ಸ್ವಾಮೀಜಿಗಳೇನಾದ್ರೂ ಬಂದಿದ್ದಾರೆಯೇ ? ಅಥವಾ ಇವರದೇ ಸಮುದಾಯದ ಶಾಸಕರು ಏನೆಲ್ಲಾ ಹೇಳಿಕೆ ನೀಡುತ್ತಿದ್ದಾಗ ಕರೆದು ಬುದ್ಧಿ ಹೇಳಿದ್ದಾರೆಯೇ ? ಆಗ ಯಾಕೆ ಇವರೆಲ್ಲ ಯಡಿಯೂರಪ್ಪ ಪರವಾಗಿ ನಿಂತಿಲ್ಲ ಎಂದು ಖಾರವಾಗಿ ಪ್ರಶ್ನಿಸಿದ್ದಾರೆ.

ಯಡಿಯೂರಪ್ಪ ಇವತ್ತು ಆಡಿರುವ ಮಾತುಗಳನ್ನು ತುಂಬ ಶ್ಲಾಘಿಸುತ್ತೇನೆ. ಅವರೊಬ್ಬ ಮುತ್ಸದ್ಧಿ. ಅವರೊಂದಿಗೆ ಬಿಜೆಪಿಯಲ್ಲಿ ಕೇವಲ ನಾಲ್ಕು ಶಾಸಕರು ಇದ್ದಾಗಿನಿಂದಲೂ ಇದ್ದೇನೆ. ಅವರು ಮೊದಲಿನಿಂದಲೂ ರೈತರು ಪರವಾಗಿ ಹೋರಾಟ ಮಾಡಿಕೊಂಡು ಬಂದವರು. ಕೆಲವೊಮ್ಮೆ ಯಾರದ್ದೋ ಮಾತು ಕೇಳಿ, ಎಡವಿದ್ದಾರೆ. ಕೆಜೆಪಿ ಹೋದಾಗ, ಯಾರದ್ದೋ ಮಾತು ಕೇಳಿ ಹೋಗಿದ್ದೆ ಎಂದು ಆಬಳಿಕ ಹೇಳಿದ್ದರು. ಆಮೇಲೆ ಬಿಜೆಪಿಯನ್ನು ಮತ್ತೆ ಕಟ್ಟೋಣ ಎಂದು ರಾಜ್ಯದಾದ್ಯಂತ ಓಡಾಡಿದ್ದರು. ಇವತ್ತು ಪಕ್ಷ ನನ್ನ ತಾಯಿ, ಪಕ್ಷದ ರಾಷ್ಟ್ರೀಯ ಮುಖಂಡರು ಏನು ಹೇಳುತ್ತಾರೋ ಅದಕ್ಕೆ ಬದ್ಧನಿದ್ದೇನೆ ಎಂದು ಹೇಳಿದ್ದು ಇಡೀ ದೇಶಕ್ಕೆ ಮಾದರಿ ಎಂದು ಈಶ್ವರಪ್ಪ ಹೇಳಿದರು.
ವಿಧಾನಸೌಧದಲ್ಲಿ ಕ್ಯಾಬಿನೆಟ್ ಸಭೆ ಹಿನ್ನೆಲೆಯಲ್ಲಿ ಸಭಾಂಗಣ ಪ್ರವೇಶ ಮಾಡುತ್ತಿದ್ದಂತೆ ಮಾಧ್ಯಮದವರು ಪ್ರತಿಕ್ರಿಯೆ ಕೇಳಿದ್ದಕ್ಕೆ ಮೇಲಿನಂತೆ ಹೇಳಿದರು. ಯಾರು ಸಿಎಂ ಆಗುತ್ತಾರೆ ಎಂಬ ಪ್ರಶ್ನೆಗೆ, ಅದನ್ನೆಲ್ಲ ಕೇಳಬಾರದು. ಪಕ್ಷ ಏನು ಹೇಳುತ್ತದೋ ನಾವದನ್ನು ಪಾಲಿಸುತ್ತೇವೆ. ಹೈಕಮಾಂಡ್ ಏನು ಹೇಳುತ್ತೋ ಗೊತ್ತಿಲ್ಲ ಎಂದು ಹೇಳಿದರು.
Eshwarappa bats for BSY slams Lingayat pontiffs. Amid speculations that his exit was on the cards, several pontiffs made a beeline to Karnataka Chief Minister B S Yediyurappa's official residence for the second consecutive day on Wednesday and threw their weight behind him.
06-12-25 12:33 pm
HK News Desk
Dharwad Accident, Police Inspector: ಧಾರವಾಡ; ಡ...
05-12-25 11:20 pm
Shivamogga Doctor Suicide: ಶಿವಮೊಗ್ಗ ; ಮೂರು ವರ...
05-12-25 10:00 pm
Indigo Flight News, Hubli Marriage: ಕೈಕೊಟ್ಟ ಇ...
05-12-25 07:26 pm
ಇಸ್ಲಾಂ ಹೆಸರಲ್ಲಿ ಬಲಾತ್ಕಾರ, ಲೂಟಿ, ಮತಾಂತರ ಮಾಡಿದ್...
04-12-25 05:36 pm
07-12-25 02:04 pm
HK News Desk
ಸಂವಿಧಾನ ಪೀಠಿಕೆಯಲ್ಲಿ ಜಾತ್ಯತೀತ, ಸಮಾಜವಾದ ಪದ ಅಗತ್...
07-12-25 12:31 pm
ದೇವಾಲಯದ ಹಣ ದೇವರಿಗೆ ಸೇರಿದ್ದು, ಸಹಕಾರಿ ಬ್ಯಾಂಕುಗಳ...
06-12-25 04:58 pm
ಬಾಬರಿ ಮಸೀದಿ ನಿರ್ಮಿಸುವುದಾಗಿ ಹೇಳಿ ವಿವಾದ ಎಬ್ಬಿಸಿ...
04-12-25 05:39 pm
IndiGo Cancels Nearly 200 Flights Nationwide;...
04-12-25 11:15 am
07-12-25 03:02 pm
Mangalore Correspondent
ತಡರಾತ್ರಿ ಮನೆಗೆ ನುಗ್ಗಿ ಕಡಬ ಹೆಡ್ ಕಾನ್ಸ್ ಟೇಬಲ್ ದ...
06-12-25 06:12 pm
Kantara, Mangalore, Rishab Shetty; ಕಾಂತಾರ -1ರ...
05-12-25 12:24 pm
Mangalore, Suicide: ಕೊಣಾಜೆ ; 16ರ ಬಾಲಕಿ ಮನೆಯಲ್...
05-12-25 12:10 pm
Mithun Rai Congress, Notice: ಎಐಸಿಸಿ ಸೆಕ್ರಟರಿ...
05-12-25 10:34 am
06-12-25 09:52 pm
Mangalore Correspondent
Ganesh Gowda, Chikkamagaluru, Congress, Murde...
06-12-25 02:43 pm
ಚಿನ್ನ ಕಸಿದ ಪ್ರಕರಣ ಬೆನ್ನತ್ತಿ ಕುಖ್ಯಾತ ಅಂತಾರಾಜ್ಯ...
05-12-25 11:00 pm
ಸಿಐಡಿ ಪೊಲೀಸ್ ಸೋಗಿನಲ್ಲಿ ಮುಲ್ಕಿಯ ವೃದ್ಧ ದಂಪತಿಗೆ...
04-12-25 11:15 pm
ಪೊಲೀಸ್ ಕಮಿಷನರ್ ಕಚೇರಿ ಬಳಿ ನಿಲ್ಲಿಸಿದ್ದ ಕಾರಿನಿಂದ...
04-12-25 10:53 pm