ಬ್ರೇಕಿಂಗ್ ನ್ಯೂಸ್
03-09-21 04:41 pm Headline Karnataka News Network ಕರ್ನಾಟಕ
ಬೆಂಗಳೂರು, ಸೆ.3: ಈ ಬಾರಿ ಕೊರೊನಾ ಎರಡನೇ ಅಲೆಗೆ ಎರಡು ತಿಂಗಳು ಲಾಕ್ಡೌನ್ ಆಗಿ ಬಹಳಷ್ಟು ಜನರು ತತ್ತರಗೊಂಡಿದ್ದರು. ಇದರಿಂದ ಹೊಟೇಲ್, ಇನ್ನಿತರ ಉದ್ಯಮ ಕ್ಷೇತ್ರಗಳು ಕೂಡ ಭಾರೀ ನಷ್ಟಕ್ಕೀಡಾಗಿದ್ದವು. ಆದರೆ, ಇದೇ ಅವಧಿಯಲ್ಲಿ ರಾಜ್ಯ ಸರಕಾರದ ಅಬಕಾರಿ ಇಲಾಖೆ ಮಾತ್ರ ಭರಪೂರ ಲಾಭ ಮಾಡಿಕೊಂಡಿದೆ. ಎಪ್ರಿಲ್ ನಿಂದ ಆಗಸ್ಟ್ ವರೆಗಿನ ಐದು ತಿಂಗಳ ಅವಧಿಯಲ್ಲಿ ರಾಜ್ಯದ ಬೊಕ್ಕಸಕ್ಕೆ ಅಬಕಾರಿ ಇಲಾಖೆಯಿಂದ 10,197 ಕೋಟಿ ರೂಪಾಯಿ ಆದಾಯ ಬಂದಿದೆ.


ಈ ಅವಧಿಯಲ್ಲಿ 261 ಲಕ್ಷ ಬಾಕ್ಸ್ ಲಿಕ್ಕರ್ ಮತ್ತು 87 ಲಕ್ಷ ಬಾಕ್ಸ್ ಬೀಯರ್ ಮಾರಾಟ ಆಗಿದೆ. ಮದ್ಯ ಮಾರಾಟ ಹಿಂದಿನ ಅವಧಿಗೆ ಹೋಲಿಸಿದರೆ, 31 ಶೇಕಡಾದಷ್ಟು ಜಾಸ್ತಿಯಾಗಿದೆ. ಇದೇ ಅವಧಿಯಲ್ಲಿ ಕಳೆದ ವರ್ಷ ಅಬಕಾರಿ ಇಲಾಖೆಯ ಆದಾಯ 7555 ಕೋಟಿ ರೂಪಾಯಿ ಆಗಿತ್ತು. ಈ ಬಾರಿಯ ಎಪ್ರಿಲ್(2202 ಕೋಟಿ), ಜೂನ್(2230 ಕೋಟಿ), ಜುಲೈ(2233 ಕೋಟಿ) ತಿಂಗಳಲ್ಲಿ ಮದ್ಯ ಮಾರಾಟ ಹಿಂದಿಗಿಂತ ಹೆಚ್ಚಿತ್ತು.
ಮುಂದಿನ ಆರ್ಥಿಕ ಸಾಲಿನಲ್ಲಿ ಅಬಕಾರಿ ಆದಾಯವನ್ನು 24,500 ಕೋಟಿಗೆ ಏರಿಸಲು ಇಲಾಖೆ ಗುರಿ ಇರಿಸಿದೆ. ಈ ಬಾರಿ ಬೀಯರ್ ಮಾರಾಟ ಹಿಂದಿಗಿಂತ ಹೆಚ್ಚಿರುವುದು ಕಂಡುಬಂದಿದೆ. ಕೊರೊನಾ ವೈರಸ್ ಭೀತಿಯ ಕಾರಣ ಬೀಯರ್ ಮಾರಾಟದ ಪ್ರಮಾಣ ತುಸು ಇಳಿಕೆಯಾಗಿತ್ತು. ಕಳೆದ ಎರಡು ತಿಂಗಳಲ್ಲಿ ಬೀಯರ್ ಮಾರಾಟವೂ ಹೆಚ್ಚಿದೆ.
karnataka state excise departments revenue grows earns 10197 crore in five months
14-01-26 03:34 pm
Bangalore Correspondent
ಆನೆ ದಂತದಿಂದ ಮಾಡಲ್ಪಟ್ಟ ರಾಧಾ ಕೃಷ್ಣರ ವಿಗ್ರಹ ಮಾರಾ...
14-01-26 02:54 pm
ಧರ್ಮಸ್ಥಳದಲ್ಲಿ 74 ಅಸಹಜ ಸಾವು ಪ್ರಕರಣ ; ಪ್ರತ್ಯೇಕ...
14-01-26 01:34 pm
ಅಕಾಲಿಕ ಮಳೆಗೆ ಕಂಗಾಲಾದ ಕಾಫಿನಾಡು ; ಭಾರೀ ಮಳೆಗೆ ಕೊ...
13-01-26 10:13 pm
ಇಲೆಕ್ಟ್ರಾನಿಕ್ ಸಿಟಿ ಪಕ್ಕದಲ್ಲೇ ಬಾಂಗ್ಲಾ ವಲಸಿಗರ ಅ...
13-01-26 03:04 pm
13-01-26 06:39 pm
HK News Desk
ರಷ್ಯಾ ಬಳಿಕ ಇರಾನ್ ಮುಂದಿಟ್ಟು ಟ್ರಂಪ್ ಬೆದರಿಕೆ ; ಇ...
13-01-26 04:21 pm
ಮುಂಬೈಗೆ ಬಂದೇ ಬರುತ್ತೇನೆ, ತಾಕತ್ತಿದ್ದರೆ ತಡೆಯಿರಿ....
12-01-26 11:00 pm
ಕುಂಬಳೆ ಟೋಲ್ ಗೇಟ್ ವಿರುದ್ಧ ರಸ್ತೆ ತಡೆದು ಪ್ರತಿಭಟನ...
12-01-26 05:01 pm
ಎಕ್ಸ್ ನಲ್ಲಿ ಅಶ್ಲೀಲ ಕಂಟೆಂಟ್ ; ಐಟಿ ಸಚಿವಾಲಯದ ಒತ್...
11-01-26 06:07 pm
14-01-26 03:15 pm
Mangalore Correspondent
ಕುಂದಾಪುರ -ತಲಪಾಡಿ, ಸುರತ್ಕಲ್- ಬಿ.ಸಿ.ರೋಡ್ ಹೆದ್ದಾ...
13-01-26 10:30 pm
Ayyappa Death, Mangalore: ಶಬರಿಮಲೆ ಹೊರಟಿದ್ದ ಅಯ...
12-01-26 08:03 pm
ಭಾರತ ರಕ್ತಪಾತಕ್ಕೆ ಇನ್ನಷ್ಟು ಸಿದ್ಧವಾಗಬೇಕು ; ಚೀನಾ...
11-01-26 10:39 pm
ಬಾಂಗ್ಲಾದಲ್ಲಿ ಹಿಂದುಗಳ ಹತ್ಯೆಯನ್ನು ಭಾರತ ನೋಡುತ್ತ...
11-01-26 07:06 pm
14-01-26 05:22 pm
HK News Desk
ಹೆಂಡತಿ ಮೇಲೆ ಕಣ್ಣು ; ಗುತ್ತಿಗೆದಾರನನ್ನು ಕೊಲೆ ಮಾಡ...
13-01-26 05:28 pm
ಡಿಜಿಟಲ್ ಅರೆಸ್ಟ್ ನೆಪದಲ್ಲಿ ದೆಹಲಿಯ ವೃದ್ಧ ವೈದ್ಯ...
13-01-26 03:37 pm
ಡ್ರಗ್ಸ್ ನೆಟ್ವರ್ಕ್ ಭೇದಿಸಿದ ಮಂಗಳೂರು ಪೊಲೀಸರು ; ಬ...
12-01-26 06:28 pm
Mangalore Crime: ಬಾಂಗ್ಲಾದವನೆಂದು ಹೇಳಿ ವಲಸೆ ಕಾರ...
12-01-26 01:54 pm