ಹುಣಸೂರು : ಬಹಿರ್ದೆಸೆಗೆ ತೆರಳಿದ್ದ ಯುವಕ ಹುಲಿಗೆ ಆಹುತಿ !

10-09-21 02:37 pm       Headline Karnataka News Network   ಕರ್ನಾಟಕ

ಮೂರು ತಿಂಗಳ ಹಿಂದಷ್ಟೇ ಮದುವೆಯಾಗಿದ್ದ ಯುವಕನೊಬ್ಬ ಹುಲಿ ದಾಳಿಗೆ ಒಳಗಾಗಿ ಸಾವನ್ನಪ್ಪಿದ ಘಟನೆ ಹುಣಸೂರು ತಾಲೂಕಿನ ಅಯ್ಯನಕೆರೆ ಹಾಡಿಯಲ್ಲಿ ನಡೆದಿದೆ.

ಮೈಸೂರು, ಸೆ.10 : ಮೂರು ತಿಂಗಳ ಹಿಂದಷ್ಟೇ ಮದುವೆಯಾಗಿದ್ದ ಯುವಕನೊಬ್ಬ ಹುಲಿ ದಾಳಿಗೆ ಒಳಗಾಗಿ ಸಾವನ್ನಪ್ಪಿದ ಘಟನೆ ಹುಣಸೂರು ತಾಲೂಕಿನ ಅಯ್ಯನಕೆರೆ ಹಾಡಿಯಲ್ಲಿ ನಡೆದಿದೆ.

ಅಯ್ಯನಕೆರೆ ಹಾಡಿ ನಿವಾಸಿ ಕರಿಯಯ್ಯ ಎಂಬವರ ಮಗ ಗಣೇಶ್ (24) ಹುಲಿ ದಾಳಿಗೆ ಬಲಿಯಾದ ವ್ಯಕ್ತಿ. ಗಣೇಶ್ ಬುಧವಾರ ಬೆಳಗ್ಗೆ ಹಾಡಿಯ ಅಂಚಿನಲ್ಲಿರುವ ಕಾಡಿಗೆ ಬಹಿರ್ದೆಸೆಗೆ ತೆರಳಿದ್ದ ವೇಳೆ ಹುಲಿ ದಾಳಿ ಮಾಡಿ ಸಾಯಿಸಿದೆ. ಮುಖದ ಕೆಲ ಭಾಗವನ್ನು ತಿಂದು, ಮೃತದೇಹವನ್ನು 300 ಮೀ‌.ನಷ್ಟು ದೂರಕ್ಕೆ ಎಳಕೊಂಡು ಹೋಗಿದೆ. 

ಮಧ್ಯಾಹ್ನ 12 ಗಂಟೆಯಾದರೂ ಗಣೇಶ್ ಮನೆಗೆ ವಾಪಸ್ ಬರದೇ ಇದ್ದರಿಂದ, ಆತನ ಪತ್ನಿ ಹಾಗೂ ಸಹೋದರ ಕಾಡಿನಲ್ಲಿ ಹುಡುಕಿದ್ದಾರೆ. ಕೆರೆಯ ಬಳಿ ಗಣೇಶನ ಚಪ್ಪಲಿ, ಹುಲಿ ಹೆಜ್ಜೆ, ರಕ್ತದ ಕಲೆಗಳು,  ಎಳೆದೊಯ್ದಿರುವ ಕುರುಹು ಕಂಡುಬಂದಿದೆ. ಬಳಿಕ ಪೊದೆಯೊಳಗೆ ಶವ ಪತ್ತೆಯಾಗಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.

A tiger killed a tribal youth, who had gone to relieve himself, at the Nagarahole Tiger Reserve Forest in Karnataka's Veeranahosalli, officials said on Thursday.