ಬ್ರೇಕಿಂಗ್ ನ್ಯೂಸ್
14-09-21 04:36 pm Headline Karnataka News Network ಕರ್ನಾಟಕ
ಬೆಂಗಳೂರು, ಸೆ.14: ಬಾಯಲ್ಲಿ ಹಿಂದೂ ಹಿಂದೂ ಅಂತಾರೆ, ಈಗ ಹಿಂದುಗಳ ದೇವಸ್ಥಾನಗಳನ್ನೇ ಒಡೆಯುತ್ತಿದ್ದಾರೆ ಎಂದು ಮಾಜಿ ಸಚಿವ ಎಚ್.ಡಿ ರೇವಣ್ಣ ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ವ್ಯಂಗ್ಯವಾಡಿದ್ದಾರೆ. ಮೈಸೂರಿನ ನಂಜನಗೂಡಿನಲ್ಲಿ ದೇವಸ್ಥಾನ ಒಂದನ್ನು ಕೆಡವಿದ ಅಲ್ಲಿನ ಜಿಲ್ಲಾಡಳಿತ ಮತ್ತು ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಒತ್ತಾಯ ಕೇಳಿಬಂದಿರುವಾಗಲೇ ವಿರೋಧ ಪಕ್ಷಗಳ ಮುಖಂಡರು ಬಿಜೆಪಿ ವಿರುದ್ಧ ಹರಿಹಾಯ್ದಿದ್ದಾರೆ.
ಜೆಡಿಎಸ್ ಕುರಿತ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಹೆಚ್.ಡಿ.ರೇವಣ್ಣ, ಕೆಲವರು ಜೆಡಿಎಸ್ ಮುಳುಗುವ ದೋಣಿ ಎನ್ನುತ್ತಿದ್ದರು. ಮುಳುಗುವಾಗ ಹೇಗೆ ಮೇಲೆತ್ತುವುದು ಎನ್ನುವುದೂ ಗೊತ್ತಿದೆ. ಸಮುದ್ರದಲ್ಲಿ ಮುಳುಗೇಳುವ ಸಬ್ಮೆರಿನ್ ಮೆಷಿನ್ ನಮ್ಮ ಬಳಿ ಇದೆ. ಯಾವಾಗ ಹಡಗು ಮೇಲೆತ್ತಬೇಕು, ಯಾವಾಗ ಮುಳುಗಿಸಬೇಕು ಎಂದು ಗೊತ್ತಿದೆ ಎಂದು ತೀಕ್ಷ್ಣವಾಗಿ ಹೇಳಿದರು.
ಸಬ್ಮೆರಿನ್ ಯಂತ್ರ ರಿಪೇರಿ ಮಾಡಿದ್ದೇವೆ. ದೇವೇಗೌಡರು, ಕುಮಾರಸ್ವಾಮಿ ಅದನ್ನು ನೋಡಿಕೊಳ್ಳುತ್ತಾರೆ. ಕಲಬುರಗಿ ಪಾಲಿಕೆ ಬಗ್ಗೆ ಖರ್ಗೆ ಮಾತನಾಡಿದ್ದಾರೆ. ಈ ಬಗ್ಗೆ ವರಿಷ್ಠರು ತೀರ್ಮಾನ ಮಾಡುತ್ತಾರೆ. 2023ರಲ್ಲಿ ರಾಜ್ಯದಲ್ಲಿ ಜೆಡಿಎಸ್ ಇಲ್ಲದೆ ಅಧಿಕಾರ ಮಾಡಲು ಸಾಧ್ಯವಿಲ್ಲ ಎಂದು ಹೇಳಿದರು.
ಕಲಬುರಗಿ ಮಹಾನಗರ ಪಾಲಿಕೆಯಲ್ಲಿ ಅಧಿಕಾರ ಹಿಡಿಯಲು ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ಜೆಡಿಎಸ್ ಅನ್ನು ಅವಲಂಬಿಸಿವೆ. ಅತ್ತ ಮೇಯರ್ ಪಟ್ಟಕ್ಕೆ ಪಟ್ಟು ಹಿಡಿದಿರುವ ಜೆಡಿಎಸ್, ಯಾವ ಪಕ್ಷದೊಂದಿಗೆ ಕೈ ಜೋಡಿಸಲಿದೆ ಎನ್ನುವುದು ಕುತೂಹಲ ಮೂಡಿಸಿದೆ.
ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಅವರು ಜೆಡಿಎಸ್ ಮುಳುಗುತ್ತಿರುವ ಹಡಗು ಎಂದು ವ್ಯಂಗ್ಯವಾಡಿದ್ದರು. ಇದಕ್ಕೆ ತಿರುಗೇಟು ನೀಡಿದ್ದ ರೇವಣ್ಣ, ಮುಳುಗಿದ ಹಡಗಿನ ಜೊತೆ ಏಕೆ ಬರ್ತೀರಾ? ಮುಳುಗುವ ಹಡಗಿನ ಜತೆ ಸೇರಿ ನಿಮ್ಮ ಸ್ಥಾನಕ್ಕೆ ಕುತ್ತು ತಂದುಕೊಳ್ಳಬೇಡಿ. ಇದರಿಂದ ಬೊಮ್ಮಾಯಿ ಅವರ ಸೀಟಿಗೆ ಕುತ್ತು ಬರುವುದು ಬೇಡ ಎಂದು ಲೇವಡಿ ಮಾಡಿದ್ದರು.
JDS Leader HD Revanna slams state BJP Govt over Temple Demolition Controversy.
06-05-24 05:44 pm
Bangalore Correspondent
Bengaluru Metro: ನಮ್ಮ ಮೆಟ್ರೋ ರೈಲಿನಲ್ಲಿ ಯುವಕ-ಯ...
06-05-24 03:38 pm
DK Shivakumar Slaps Congress Worker, haveri:...
06-05-24 01:51 pm
R Ashok, Revanna, Prajwal: ರೇವಣ್ಣನನ್ನ ಬಂಧಿಸಿರ...
05-05-24 10:54 pm
Sex Scandal, H D Revanna: ಷಡ್ಯಂತ್ರ ಮಾಡಿ ನನ್ನನ...
05-05-24 09:54 pm
06-05-24 09:31 pm
HK News Desk
Pune boy dead, cricket: ಕ್ರಿಕೆಟ್ ಆಡುವಾಗ ಖಾಸಗ...
06-05-24 12:23 pm
Accident in Rajasthan: ದೇವರ ದರ್ಶನಕ್ಕೆ ತೆರಳುತ್...
05-05-24 11:51 am
Priyanka Gandhi, Narendra modi, Rahul Gandi:...
04-05-24 03:41 pm
Puri Lok Sabha: ಸೂರತ್, ಇಂದೋರ್ ಬಳಿಕ ಒಡಿಶಾದ ಪುರ...
04-05-24 03:27 pm
06-05-24 08:17 pm
Mangalore Correspondent
Lok Sabha election, Prajwal Revanna: ಪ್ರಜ್ವಲ್...
06-05-24 04:54 pm
Prajwal Revanna sex, Congress Shalet Pinto Ma...
06-05-24 02:51 pm
Ksrtc Mangalore, crime: ಸೈಡ್ ಕೊಟ್ಟಿಲ್ಲ ಎಂಬ ಕಾ...
06-05-24 02:14 pm
Konkani writer Ronald Sequeira mangalore: ಹಿರ...
06-05-24 01:30 pm
05-05-24 02:44 pm
HK News Desk
K P K Jeyakumar Dhanasingh: ತಿರುನಲ್ವೇಲಿ ಜಿಲ್ಲ...
04-05-24 11:03 pm
Hubballi Crime Rape Minor, Arrest; ಹುಬ್ಬಳ್ಳಿ...
04-05-24 12:23 pm
Mangalore Fake CBI Call, Crime, Online fraud:...
03-05-24 09:57 pm
House fire, Lover: ಮೂವರು ಮಕ್ಕಳ ತಾಯಿಯನ್ನ ಮದುವ...
03-05-24 03:21 pm