ಬ್ರೇಕಿಂಗ್ ನ್ಯೂಸ್
29-10-21 01:57 pm Bengaluru Correspondent ಕರ್ನಾಟಕ
ಬೆಂಗಳೂರು, ಅ.29: ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ತೀವ್ರ ಹೃದಯಾಘಾತದಿಂದ ಚಿಂತಾಜನಕ ಸ್ಥಿತಿಗೆ ಒಳಗಾಗಿದ್ದು ಸ್ಯಾಂಡಲ್ ವುಡ್ ಶಾಕ್ ಆಗಿದೆ. ಅಭಿಮಾನಿಗಳು ಆರೋಗ್ಯಕ್ಕಾಗಿ ಪ್ರಾರ್ಥನೆಯ ಮೊರೆ ಹೋಗಿದ್ದಾರೆ. ಈ ನಡುವೆ, ಆಸ್ಪತ್ರೆ ವೈದ್ಯರು ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ್ದು ಪುನೀತ್ 11.30 ಕ್ಕೆ ಆಸ್ಪತ್ರೆಗೆ ಬಂದಾಗಲೇ ತೀವ್ರ ಹೃದಯಾಘಾತಕ್ಕೆ ಈಡಾಗಿದ್ದರು ಎಂದು ಮಾಹಿತಿ ನೀಡಿದ್ದಾರೆ.
ಆಸ್ಪತ್ರೆಗೆ ಬರುವಾಗಲೇ ದೇಹಸ್ಥಿತಿ ಗಂಭೀರವಾಗಿತ್ತು. ಕೂಡಲೇ ಅವರನ್ನು ಐಸಿಯುಗೆ ಸೇರಿಸಲಾಗಿತ್ತು. ಚಿಕಿತ್ಸೆ ನೀಡಲಾಗುತ್ತಿದ್ದು ಯಾವುದನ್ನೂ ಹೇಳಕ್ಕಾಗಲ್ಲ ಎಂದು ಹೇಳಿದ್ದು ಸ್ಯಾಂಡಲ್ ವುಡ್ ಪಾಲಿಗೆ ಶಾಕ್ ಹೆಚ್ಚಿಸಿದ್ದಾರೆ.
ಆದರೆ, ಪುನೀತ್ ತಮ್ಮ ಆರೋಗ್ಯ, ದೇಹದ ಚೌಕಟ್ಟು ಬಗ್ಗೆ ತೀವ್ರ ಕಾಳಜಿ ವಹಿಸುತ್ತಿದ್ದರು. ಅದಕ್ಕಾಗಿ ದಿನದ ಹೆಚ್ಚಿನ ಸಮಯವನ್ನು ಜಿಮ್ ತರಬೇತಿಗೆ ವಿನಿಯೋಗಿಸುತ್ತಿದ್ದರು. ಪುನೀತ್ ಪಾಲಿಗೆ ಅತಿಯಾದ ಕಾಳಜಿ ಮತ್ತು ಅತಿಯಾದ ವರ್ಕೌಟ್ ಮಾಡುತ್ತಿದ್ದುದೇ ಮುಳುವಾಯ್ತಾ ಅನ್ನುವ ಮಾತು ಕೇಳಿಬಂದಿದೆ.

ದೇಹವನ್ನು ಚೆನ್ನಾಗಿ ಇಟ್ಟುಕೊಳ್ಳದಿದ್ದರೆ ಅದು ತನ್ನ ವೃತ್ತಿ ಬದುಕಿಗೆ ಹಿನ್ನಡೆ ಆಗಬಹುದೆನ್ನುವ ಕಾಳಜಿಯಿಂದಾಗಿ ದಿನನಿತ್ಯ ಜಿಮ್ ಮಾಡೋದನ್ನು ಮಾತ್ರ ಬಿಡುತ್ತಿರಲಿಲ್ಲ. ಸದಾಶಿವನಗರದ ತನ್ನ ಮನೆ ಹಾಗು ಕಾಮನ್ ಆಗಿ ಹೋಗುತ್ತಿದ್ದ ಜಿಮ್ ನಲ್ಲಿ ಗಂಟೆಗಟ್ಟಲೇ ಬೆವರು ಹರಿಸುತ್ತಿದ್ದ ಪುನೀತ್ ಕೆಲವೊಮ್ಮೆ ದಿನದ ಬಹುತೇಕ ಸಮಯವನ್ನು ಅಲ್ಲಿಯೇ ಕಳೆಯುತ್ತಿದ್ದರು. ಈ ಬಗ್ಗೆ ಮನೆಮಂದಿ ಕೂಡ ಅನೇಕ ಬಾರಿ ಅತಿಯಾದ ವರ್ಕೌಟ್ ಮಾಡದಂತೆ ಆಕ್ಷೇಪ ವ್ಯಕ್ತಪಡಿಸುತ್ತಿದ್ದರಂತೆ. ವೈದ್ಯರು ಕೂಡ ಈ ಬಗ್ಗೆ ಅಪ್ಪು ಅವರನ್ನು ಎಚ್ಚರಿಸಿದ್ದರು. ಆದರೆ ವೈದ್ಯರ ಸಲಹೆಯನ್ನು ನಿರ್ಲಕ್ಷಿಸಿದ್ದೇ ಈಗ ಅಪ್ಪು ಪಾಲಿಗೆ ಮುಳುವಾಗಿದೆ. ಅಲ್ಲದೆ, ಜಿಮ್ ತರಬೇತಿ ವೇಳೆ ಟ್ರೈನರ್ ಗಳು ಶಕ್ತಿ ವರ್ಧನೆಗಾಗಿ ಪ್ರೋಟೀನ್ ಪುಡಿಗಳನ್ನು ನೀಡುತ್ತಾರೆ ಎನ್ನಲಾಗುತ್ತಿದ್ದು ಆ ರೀತಿಯ ಫುಡ್ ದೇಹದ ಸಂರಚನೆಗೆ ಮುಳುವಾಗುತ್ತೆ ಎನ್ನುತ್ತಾರೆ ವೈದ್ಯರು.
ಸದ್ಯ ವಿಕ್ರಂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅಪ್ಪುಗೆ ನುರಿತ ವೈದ್ಯರ ತಂಡ ಚಿಕಿತ್ಸೆ ನೀಡುತ್ತಿದೆ. ಆದರೂ ಕ್ಷಣ ಕ್ಷಣಕ್ಕು ದೇಹಸ್ತಿತಿ ವಿಷಮವಾಗುತ್ತಿದ್ದು ವೈದ್ಯರಿಗೂ ಆತಂಕ ಮೂಡಿಸಿದೆ. ಈ ನಡುವೆ ಪುನೀತ್ ಜೀವನ್ಮರಣ ಹೋರಾಟ ನಡೆಸುತ್ತಿರುವ ವಿಷಯ ತಿಳಿದ ಅಪಾರ ಸಂಖ್ಯೆಯ ಅಭಿಮಾನಿಗಳು ಆಸ್ಪತ್ರೆ ಬಳಿ ದೌಡಾಯಿಸುತ್ತಿದ್ದಾರೆ. ಅಪ್ಪು ಕ್ಷೇಮವಾಗಿ ಹೊರಬನ್ನಿ ಎಂದು ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ. ಅಪ್ಪು ಕುಟುಂಬದಲ್ಲಂತೂ ಶೋಕ ಮಡುಗಟ್ಟಿದೆ. ಆಸ್ಪತ್ರೆ ಆವರಣದಲ್ಲಿ ಚಿತ್ರನಟರ ದಂಡೇ ಸೇರಿದ್ದು ಕಣ್ಣೀರಿಡುತ್ತಿದ್ದಾರೆ. ಆಸ್ಪತ್ರೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಅನೇಕ ಸಚಿವರು ಹಾಗೂ ಚಿತ್ರರಂಗದ ಗಣ್ಯರು ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವನ ಹೇಳುತ್ತಿದ್ದಾರೆ.
Sandalwood 'Power Star' Puneeth Rajkumar's health condition is serious, according to the latest statement by Vikram Hospital. Puneeth was admitted to Vikram Hospital in Bengaluru at 11:30 am today after he complained of chest pain. "We are trying our best to treat him. His condition is serious. We can't say anything as of now.
17-12-25 10:30 pm
HK News Desk
ಯಶವಂತಪುರ - ಕಾರವಾರ ಗೋಮಟೇಶ್ವರ ಎಕ್ಸ್ ಪ್ರೆಸ್ ರೈಲು...
17-12-25 12:45 pm
ಶೃಂಗೇರಿ ; ಬಿಕಾಂ ಓದುತ್ತಿದ್ದ ವಿದ್ಯಾರ್ಥಿನಿ ಹಠಾತ್...
17-12-25 12:42 pm
ಶಿವಮೊಗ್ಗ, ಧಾರವಾಡ ಸೇರಿ ಹಲವೆಡೆ ಲೋಕಾಯುಕ್ತ ದಾಳಿ ;...
16-12-25 03:08 pm
ಮಂಗಳೂರು ಬೆನ್ನಲ್ಲೇ ತುಮಕೂರು ಜಿಲ್ಲಾಧಿಕಾರಿ ಕಚೇರಿಗ...
16-12-25 12:57 pm
17-12-25 10:27 pm
HK News Desk
ಆಸ್ಟ್ರೇಲಿಯಾ ಬೋಂಡಿ ಬೀಚ್ ದಾಳಿ ; ಹೈದ್ರಾಬಾದ್ ಮೂಲದ...
17-12-25 01:38 pm
ಯುಕೆಯ ಮಿಡ್ಲಾಂಡ್ಸ್ ನಲ್ಲಿ ಕನ್ನಡ ರಾಜ್ಯೋತ್ಸವ ; ಬರ...
16-12-25 06:33 pm
ಭಟ್ಕಳ ತಹಸೀಲ್ದಾರ್ ಕಚೇರಿಗೂ ಸ್ಫೋಟದ ಬೆದರಿಕೆ ; ತಮಿ...
16-12-25 01:56 pm
ಪಾಕಿಸ್ತಾನದ ಎರಡು ವಿವಿಗಳಲ್ಲಿ ಸಂಸ್ಕೃತ ಕಲಿಯಲು ಕೋರ...
15-12-25 08:12 pm
17-12-25 08:54 pm
Mangalore Correspondent
New year 2026, Mangalore Rules: ಹೊಸ ವರ್ಷಾಚರಣೆ...
17-12-25 08:19 pm
Udupi, Baby death: ಉಡುಪಿ ; ತಾಯಿ ಕೈಯಿಂದ ಜಾರಿ ಬ...
17-12-25 05:23 pm
Mangalore Jail, Fight, Ccb Police: ಮಂಗಳೂರು ಜೈ...
17-12-25 05:05 pm
Mangalore Landslide, Death: ಗುಡ್ಡ ಕುಸಿದು ಕಾರ್...
16-12-25 10:25 pm
17-12-25 11:14 am
Bangalore Correspondent
ಕದ್ರಿಯಲ್ಲಿ ಬೈಕ್ ಕದ್ದು ಭಟ್ಕಳದಲ್ಲಿ ಮಹಿಳೆಯ ಸರ ಕಸ...
16-12-25 10:35 pm
Mangalore Crime, Robbery, Mukka: 'ಬಂಗಾರ್ ಒಲ್ಪ...
15-12-25 10:26 pm
Udupi Murder, Brahmavar, Update: ಕುಡಿದ ಮತ್ತಿನ...
15-12-25 05:37 pm
Brahmavar Murder, Udupi Crime: ಎಣ್ಣೆ ಪಾರ್ಟಿಯಲ...
15-12-25 12:19 pm