ಬ್ರೇಕಿಂಗ್ ನ್ಯೂಸ್
14-11-21 03:34 pm H.K, Bengaluru Desk ಕರ್ನಾಟಕ
ಬೆಂಗಳೂರು, ನ.14: ಬಿಟ್ ಕಾಯಿನ್ ಹಗರಣದಲ್ಲಿ ಯಾರೇ ಭಾಗಿಯಾದ್ದರೂ ಬಿಟ್ಟುಬಿಡುವ ಪ್ರಶ್ನೆಯೇ ಇಲ್ಲ. ಯಾರೇ ಇದ್ದರೂ ಮುಲಾಜಿಲ್ಲದೆ ಕ್ರಮ ಜರುಗಿಸಲಿದ್ದೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪುನರುಚ್ಚರಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಬೊಮ್ಮಾಯಿ, ಕಾಂಗ್ರೆಸಿನವರು ಯಾರೋ ಇಬ್ಬರು ಇದ್ದಾರೆ ಎನ್ನುತ್ತಿದ್ದಾರೆ. ಆ ಇಬ್ಬರು ಯಾರೆಂದು ಹೇಳಲಿ. ನಾವು ಕ್ರಮ ಜರುಗಿಸುತ್ತೇವೆ. ಈ ಪ್ರಕರಣದಲ್ಲಿ ಯಾರಿಗಾದ್ರೂ ಮೋಸ ಆಗಿದ್ದರೆ, ದೇಶಕ್ಕೆ ನಷ್ಟ ಆಗಿದ್ದರೆ ಅದರ ಬಗ್ಗೆ ಮಾಹಿತಿ ನೀಡಲಿ. ನಾವು ತನಿಖೆ ನಡೆಸುತ್ತಿದ್ದೇವೆ. ನಿಮ್ಮದ್ದನ್ನು ಮುಚ್ಚಿಟ್ಟುಕೊಳ್ಳಲು ಯಾರದ್ದೋ ಹೆಸರನ್ನು ತೇಲಿ ಬಿಡುವುದು ಸರಿಯಲ್ಲ ಎಂದು ಹೇಳಿದರು.
ಬಿಟ್ ಕಾಯಿನ್ ಪ್ರಕರಣವನ್ನು ಭೇದಿಸಿದ್ದೇ ನಾವು. ಆರೋಪಿಯನ್ನು ಬಂಧಿಸಿದ್ದು, ಚಾರ್ಜ್ ಶೀಟ್ ಹಾಕಿದ್ದು ನಾವು. ನಿಮ್ಮಿಂದ ನಾವು ಪಾಠ ಕಲಿಯಬೇಕಿಲ್ಲ. ಈ ಬಗ್ಗೆ ಇಡಿ ತನಿಖೆಗೆ ಶಿಫಾರಸು ಮಾಡಿದ್ದು ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಸಿಬಿಐ, ಇಂಟರ್ ಪೋಲ್ ನವರು ಹಲವಾರು ಮಾಹಿತಿ ಕೇಳಿದ್ದಾರೆ, ನಾವು ಮಾಹಿತಿಗಳನ್ನು ಕೊಟ್ಟಿದ್ದೇವೆ. ಕಾಂಗ್ರೆಸ್ ವಕ್ತಾರ ರಣದೀಪ್ ಸುರ್ಜೇವಾಲಾ ಅವರ ಪ್ರಶ್ನೆಗಳಿಗೆ ನಾವು ಉತ್ತರ ಕೊಟ್ಟಿದ್ದೇವೆ. ಅವರೇ ಹೇಳುವಂತೆ, 2016ರಲ್ಲಿ ಶ್ರೀಕಿ ಹ್ಯಾಕ್ ಮಾಡಿದ್ದಾನೆ ಅಂದರೆ, ಆಗಲೇ ಯಾಕೆ ಇವರು ತನಿಖೆ ಮಾಡಿರಲಿಲ್ಲ. ಈ ಪ್ರಕರಣಕ್ಕೂ ರಾಜ್ಯಕ್ಕೂ ಸಂಬಂಧ ಇದ್ದರೆ ತನಿಖೆ ನಡೆಸಬೇಕಿತ್ತು ಎಂದು ಸಿಎಂ ಬೊಮ್ಮಾಯಿ ಹೇಳಿದರು.
2018ರಲ್ಲಿ ನೀವು ಆರೋಪಿಯನ್ನು ಬಿಟ್ಟು ಕಳುಹಿಸಿದ್ದೀರಿ. ನಿರೀಕ್ಷಣಾ ಜಾಮೀನು ಪಡೆದರೂ ವಿಚಾರಣೆ ನಡೆಸಬಾರದು ಅಂತೇನಿಲ್ಲ. 2020ರಲ್ಲಿ ಡ್ರಗ್ಸ್ ಪ್ರಕರಣದಲ್ಲಿ ಬಂಧಿಸಿ ವಿಚಾರಣೆ ನಡೆಸಿದಾಗ ಹ್ಯಾಕಿಂಗ್ ಪ್ರಕರಣ ಗೊತ್ತಾಗಿದೆ. ನೀವು ಅಧಿಕಾರದಲ್ಲಿದ್ದಾಗ ಇವೆಲ್ಲದಕ್ಕೂ ಅವಕಾಶ ನೀಡಿದ್ದಿರಿ. ಈಗ ನಾವು ಬಂಧಿಸಿ ವಿಚಾರಣೆ ನಡೆಸುವಾಗ ನಮಗೇ ಪ್ರಶ್ನೆ ಹಾಕುತ್ತೀರಾ ಎಂದು ಕೇಳಿದರು.
ಏನೋ 5 ಸಾವಿರ ಬಿಟ್ ಕಾಯಿನ್ ಕಳವಾಗಿದೆ ಅಂತ ಯಾವ ಆಧಾರದಲ್ಲಿ ನೀವು ಹೇಳಿದ್ದೀರಿ. ಒಂದು ಟ್ವಿಟರ್ ಹ್ಯಾಂಡಲ್ ಆರೋಪ ಮಾಡಿದ್ದನ್ನೇ ಆಧಾರವಾಗಿಟ್ಟು ಈ ಮಾತು ಹೇಳೋದಾದ್ರೆ ನಿಮ್ಮ ಚಿಂತನೆ ಎಷ್ಟು ದಿವಾಳಿಯಾಗಿದೆ ಎಂದು ಗೊತ್ತಾಗುತ್ತದೆ. ನಿಶ್ಚಿತ ಪುರಾವೆ, ಸಾಂದರ್ಭಿಕ ಸಾಕ್ಷ್ಯಗಳನ್ನು ಇಟ್ಟುಕೊಂಡೇ ಮಾತನಾಡಬೇಕಿತ್ತು ಎಂದು ಬೊಮ್ಮಾಯಿ, ಕಾಂಗ್ರೆಸ್ ಉಸ್ತುವಾರಿ ಸುರ್ಜೇವಾಲಾಗೆ ತಿರುಗೇಟು ನೀಡಿದ್ದಾರೆ.
Under fire from the Congress over the alleged Bitcoin scam, the Chief Minister Basavaraj Bommai on November 14 hit back at the Congress by stating that he need not take lessons from those who had let off the accused in the Bitcoin scam charged with hacking earlier.
17-07-25 07:45 pm
Bangalore Correspondent
Dharmasthala News, SIT: ಧರ್ಮಸ್ಥಳ ಪ್ರಕರಣದಲ್ಲಿ...
17-07-25 04:50 pm
CM Siddaramaiah, Janardhan Reddy; ನವೆಂಬರ್ ಒಳಗ...
16-07-25 09:36 pm
ಕೋವಿಡ್ ಮುಗಿದರೂ, ಅದರ ಪರಿಣಾಮ ನಿಂತಿಲ್ಲ..! ನರಮಂಡಲ...
16-07-25 07:05 pm
BESCOM, Cybercrime, Digital Arrest: ಡಿಜಿಟಲ್ ಅ...
16-07-25 03:58 pm
16-07-25 09:58 pm
HK News Desk
Changur Baba: ಲವ್ ಜಿಹಾದ್, ಹಿಂದು ಯುವತಿಯರ ಮತಾಂತ...
14-07-25 03:24 pm
ಅಹ್ಮದಾಬಾದ್ ವಿಮಾನ ದುರಂತ ; ಭಾರೀ ಅನುಮಾನ ಹುಟ್ಟಿಸಿ...
12-07-25 09:25 pm
Apples New COO, Sabih Khan: ಟೆಕ್ ದೈತ್ಯ ಏಪಲ್ ಸ...
12-07-25 04:21 pm
ಸಾಮೂಹಿಕ ಮತಾಂತರ ; ಮೂರೇ ವರ್ಷಕ್ಕೆ ಚಾಂಗೂರ್ ಬಾಬಾನಿ...
12-07-25 02:15 pm
17-07-25 06:30 pm
Mangalore Correspondent
Wild Elephant Attack, Dharmasthala: ಧರ್ಮಸ್ಥಳ...
17-07-25 04:14 pm
Minister Priyank Kharge, Drug Trafficking: ಡ್...
17-07-25 01:51 pm
Mangalore Rain, Landslide, Maryhill: ಭಾರೀ ಮಳೆ...
17-07-25 01:34 pm
Wizdom Education, Guruvandana, Mangalore: ಮಂಗ...
17-07-25 01:26 pm
17-07-25 02:30 pm
Mangalore Correspondent
Cyber Crime Tumkur, Facebook, Mangalore Polic...
16-07-25 11:04 pm
Mangalore Crime, Konaje Murder: ಒಂಟಿ ಮಹಿಳೆಯ ಅ...
16-07-25 09:48 pm
Sexual Harassment Odisha News; ಪ್ರಾಧ್ಯಾಪಕನಿಂದ...
16-07-25 04:37 pm
Kavoor police constable arrest, Mangalore: ದೂ...
16-07-25 11:42 am