ಬ್ರೇಕಿಂಗ್ ನ್ಯೂಸ್
30-12-21 10:52 pm HK Desk news ಕರ್ನಾಟಕ
ವಿಜಯಪುರ, ಡಿ.30 : ಇದೇ ಸಂಕ್ರಾಂತಿಗೆ ಸರಕಾರ ಮತ್ತು ಪಕ್ಷದಲ್ಲಿ ದೊಡ್ಡ ಬದಲಾವಣೆ ಆಗಲಿದೆ. ಸಚಿವ ಸಂಪುಟದಲ್ಲೂ ಬದಲಾವಣೆಯಾಗಲಿದೆ, ಪಕ್ಷದ ಸಂಘಟನೆಯಲ್ಲೂ ಬದಲಾವಣೆಯಾಗಲಿದೆ ಎಂದು ವಿಜಯಪುರ ಶಾಸಕ ಬಸವನಗೌಡ ಪಾಟೀಲ್ ಬಾಂಬ್ ಸಿಡಿಸಿದ್ದಾರೆ.
ವಿಧಾನಸಭೆ ಚುನಾವಣೆಗೆ ಪಕ್ಷವನ್ನ ಬಲ ಪಡಿಸಲು ವರಿಷ್ಠರು ತಯಾರಿ ನಡೆಸಿದ್ದಾರೆ. ಪ್ರಧಾನಿಗಳ ಗುಪ್ತಚರ ಇಲಾಖೆ ಎಲ್ಲವನ್ನೂ ನೋಡುತ್ತಿದೆ. ಕಚೇರಿಗೆ ಹೋಗದ ಸಚಿವರು ಯಾರು ಎಂಬ ಬಗ್ಗೆ ಎಲ್ಲ ಬೆಳವಣಿಗೆಯನ್ನ ಪ್ರಧಾನಿ ಗಮನಿಸುತ್ತಿದ್ದಾರೆ. ಸಂಕ್ರಾಂತಿ ಬಳಿಕ ಮೋದಿ ದೊಡ್ಡ ನಿರ್ಧಾರ ತೆಗೆದುಕೊಳ್ತಾರೆ. ಪಕ್ಷದಲ್ಲಿ, ಸರ್ಕಾರದಲ್ಲಿ ಮೋದಿ ಬದಲಾವಣೆ ಮಾಡಲಿದ್ದಾರೆ ಎಂದು ಯತ್ನಾಳ್ ಹೇಳಿದ್ದಾರೆ. ಕಳೆದ ಸಂಕ್ರಾಂತಿಗೆ ಹೇಳಿದ್ದೆ, ಒಂದು ವಿಕೆಟ್ ಹಾರಿತ್ತು. ಈ ಬಾರಿಯು ಬದಲಾವಣೆ ಹೇಳ್ತಿದೀನಿ, ಸಂಕ್ರಾಂತಿಯ ವರೆಗೆ ಕಾಯಿರಿ ಎಂದರು ಯತ್ನಾಳ್.
ಸಿಎಂ ಫಾರಿನ್ ಟೂರ್ ವದಂತಿ ಬಗ್ಗೆ ಹೇಳಿದ ಅವರು, ಸಿಎಂ ಅವರ ವೀಸಾ ಬಂದಿದ್ದರೇ ನನಗೆ ತೋರಿಸಿ. ಸಿಎಂ ಫಾರಿನ್ ಟೂರ್ ಇಲ್ಲ, ಇದ್ದರೆ ಗೊತ್ತಾಗುತ್ತಿತ್ತು. ಸಿಎಂ ಪ್ರವಾಸ ಚಲನವಲನ ಏನಿದ್ದರೂ ಸಾರ್ವಜನಿಕವಾಗಿರುತ್ತೆ. ನಾನು ಸಿಎಂ ಬದಲಾವಣೆ ಬೇಡ ಅನ್ನೋದು ಇಲ್ಲ, ಬೇಕು ಅನ್ನೋದೂ ಇಲ್ಲ, ಎಲ್ಲವೂ ಹೈಕಮಾಂಡ್ ಗೆ ಬಿಟ್ಟಿದ್ದು ಎಂದ ಯತ್ನಾಳ್, ಮತ್ತೆ ಸಚಿವ ಸ್ಥಾನದ ಆಸೆ ಹೊರಹಾಕಿದ್ದಾರೆ.
ಗಟ್ಸ್ ಇರೋರು ಗೃಹ ಸಚಿವರಾಗಬೇಕು. ನಮ್ಮಂತವರ ಕೈಯ್ಯಲ್ಲಿ ಕೊಟ್ರೆ ಬರೋಬ್ಬರಿ ಮಾಡ್ತೀವಿ. ದೇಶ ವಿರೋಧಿ ಚಟುವಟಿಕೆ ಮಾಡೋರನ್ನ, ಉಪಾದ್ಯಾಪಿಗಳಿಗೆ ಸರಿಯಾಗಿ ಮಾಡ್ತೀವಿ. ಈಗಿನ ಗೃಹ ಮಂತ್ರಿ ಒಳ್ಳೆಯರು, ಪ್ರಾಮಾಣಿಕರಿದ್ದಾರೆ. ಆದರೆ ಆರಗ ಜ್ಞಾನೇಂದ್ರ ಅರಣ್ಯ, ಕಂದಾಯ, ಗ್ರಾಮೀಣಾಭಿವೃದ್ಧಿಗೆ ಸೂಕ್ತರಿದ್ದಾರೆ ಎಂದು ಪರೋಕ್ಷವಾಗಿ ಕುಟುಕುವ ಕೆಲಸ ಮಾಡಿದ್ದಾರೆ.
Amid talks that the Karnataka cabinet expansion or reshuffle is likely next month, senior BJP MLA Basanagouda Patil Yatnal, who had earlier claimed that BS Yediyurappa will not remain Chief Minister for long, on Friday hinted at 'historical changes' in the state after Sankranti.
16-09-25 11:00 pm
Bangalore Correspondent
Nanjegowda MLA, Malur: ಮಾಲೂರು ಕಾಂಗ್ರೆಸ್ ಶಾಸಕ...
16-09-25 10:54 pm
Bangalore Suicide, Air force: ಸಹೋದರಿ ಜೊತೆ ಜಗಳ...
15-09-25 08:53 pm
Actor Upendra, Wife Priyanka, Cyber Fraud, Ha...
15-09-25 04:45 pm
Pratap Simha, Banu Mushtaq: ಬಾನು ಮುಷ್ತಾಕ್ ದಸರ...
15-09-25 03:39 pm
16-09-25 10:11 pm
HK News Desk
Cloudburst, Dehradun: ಡೆಹ್ರಾಡೂನ್ನಲ್ಲಿ ಭಾರೀ ಮ...
16-09-25 02:46 pm
Waqf, Supreme Court; ವಕ್ಫ್ ತಿದ್ದುಪಡಿ ಕಾಯ್ದೆ...
15-09-25 04:57 pm
ನಾನು ಶಿವಭಕ್ತ ; ನಿಂದನೆಯ ವಿಷವನ್ನು ಕುಡಿದು ಜೀರ್ಣಿ...
14-09-25 10:49 pm
ಪ್ರಧಾನಿ ಮೋದಿ ಅಸ್ಸಾಂನಲ್ಲಿ ಇರುವಾಗಲೇ 5.8ರ ತೀವ್ರತ...
14-09-25 07:31 pm
16-09-25 07:48 pm
Mangalore Correspondent
Ex IPS Kempaiah, Professor Umeshchandra, Mang...
16-09-25 07:02 pm
Mangalore BJP Protest, UT khader, Red Stone:...
16-09-25 06:51 pm
UT Khader, Mangalore, Ullal: ಉಳ್ಳಾಲ ಕ್ಷೇತ್ರದಲ...
16-09-25 06:06 pm
ಕೆಂಪು ಕಲ್ಲು ನಿಯಮ ಸರಳೀಕರಣಕ್ಕೆ ಸಂಪುಟದಲ್ಲಿ ಒಪ್ಪಿ...
16-09-25 05:12 pm
16-09-25 10:40 pm
HK News Desk
Bidar crime: ಏಳು ವರ್ಷದ ಬಾಲಕಿಯನ್ನ ಮೂರನೇ ಮಹಡಿಯಿ...
16-09-25 07:12 pm
Bangalore Police, Inspector Suspend, Crime, D...
15-09-25 10:47 pm
Udupi, Surat Murder, Arrest: ವೃದ್ಧ ದಂಪತಿಯನ್ನು...
14-09-25 06:01 pm
Mangalore Fake Aadhar, RTC Scam, Police: ಆರೋಪ...
13-09-25 11:36 am