ಬ್ರೇಕಿಂಗ್ ನ್ಯೂಸ್
03-01-22 11:56 am HK Desk news ಕರ್ನಾಟಕ
ಬೆಂಗಳೂರು, ಜ.3 : ತಾಲಿಬಾನ್ ಸಿದ್ಧಾಂತ ಎನ್ನುವುದು ಧಾರ್ಮಿಕ ಕುರುಡುತನ. ಅಲ್ಪಸಂಖ್ಯಾತರ ಮತದ ಮೇಲೆ ಕಣ್ಣಿಟ್ಟುಕೊಂಡು ಕಾಂಗ್ರೆಸ್ ಈ ರೀತಿಯ ಕುರುಡುತನವನ್ನು ಪ್ರದರ್ಶಿಸುತ್ತಿದೆ. ಕಾಂಗ್ರೆಸಿಗರ ವರ್ತನೆಯನ್ನು ನೋಡಿದರೆ ತಾಲಿಬಾನಿಗರ ರೀತಿಯೇ ಕಾಣುತ್ತದೆ. ಈ ರೀತಿಯ ವರ್ತನೆಯಿಂದಾಗಿ ಬಹುಸಂಖ್ಯಾತ ಹಿಂದುಗಳು ಕಾಂಗ್ರೆಸನ್ನು ನಂಬುವ ಸ್ಥಿತಿಯಲ್ಲಿ ಇಲ್ಲ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದ್ದಾರೆ.
ಈ ಬಗ್ಗೆ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿರುವ ಸಿ.ಟಿ.ರವಿ, ಕಾಂಗ್ರೆಸ್ ಪಕ್ಷವು ಬಹುಸಂಖ್ಯಾತರ ಭಾವನೆಗಳಿಗೆ ಒಂದಂಶದ ಗೌರವವನ್ನೂ ನೀಡುತ್ತಿಲ್ಲ. ಕಾಂಗ್ರೆಸ್ ಹಳೆಯ ಸಾಮ್ರಾಜ್ಯಶಾಹಿ ಪದ್ಧತಿಯಲ್ಲೇ ಇದ್ದು, ಪ್ರಭುತ್ವದಿಂದ ಆಳಲ್ಪಡುತ್ತಿದೆ. ಕಾಲಕ್ಕೆ ತಕ್ಕಂತೆ ಬದಲಾಗುವ ಮಾನಸಿಕತೆಯನ್ನೂ ಬೆಳೆಸಿಕೊಳ್ಳದೆ ಹಳ್ಳ ಹಿಡಿದಿದೆ. ಬಿಜೆಪಿಯ ಪ್ರತಿ ನಡೆಯನ್ನು ವಿರೋಧಿಸುವುದನ್ನೇ ಕಾಂಗ್ರೆಸಿಗರು ಹವ್ಯಾಸ ಮಾಡಿಕೊಂಡಿರುವುದು ದುರದೃಷ್ಟಕರ ಎಂದು ಹೇಳಿದರು.
ಈವತ್ತಿನ ಕಾಂಗ್ರೆಸ್ ಅನ್ನುವುದು ಹಳೆಯ ಮಹಾತ್ಮ ಗಾಂಧಿ ಇದ್ದಾಗಿನ ಕಾಂಗ್ರೆಸ್ ಆಗಿ ಉಳಿದಿಲ್ಲ. ಈಗ ಇರುವುದು ಸೋನಿಯಾ ಗಾಂಧಿ ಪ್ರಣೀತ ಕಾಂಗ್ರೆಸ್. ಇತ್ತೀಚಿನ ಚುನಾವಣಾ ಫಲಿತಾಂಶಗಳನ್ನು ನೋಡಿಯಾದರೂ ಕಾಂಗ್ರೆಸಿಗರು, ತಮ್ಮ ನಿಲುವುಗಳನ್ನು ಬದಲಿಸಿಕೊಳ್ಳಬೇಕಿತ್ತು. ತಮ್ಮದೇ ನಿಲುವುಗಳನ್ನು ತೋರಿಸುತ್ತಾ ಮುನ್ನಡೆದರೆ, ಜನರೇ ಅವರಿಗೆ ಪಾಠ ಕಲಿಸುತ್ತಾರೆ. ಕಾಂಗ್ರೆಸಿಗರ ಭ್ರಷ್ಟಾಚಾರ, ಒಡೆದಾಳುವ ನೀತಿಯನ್ನು ಇಂದಿನ ಜನರು ಒಪ್ಪಿಕೊಳ್ಳವುದಿಲ್ಲ ಎಂದರು ಸಿಟಿ ರವಿ.
ಸ್ವಾತಂತ್ರ್ಯ ಬಂದು 75 ವರ್ಷಗಳಾದರೂ, ಸರಕಾರ ದೇಗುಲದ ಆದಾಯಕ್ಕೆ ಕಣ್ಣು ಹಾಕುವುದು, ಅದರ ಮೇಲೆ ಪ್ರಭುತ್ವ ಸಾಧಿಸುವುದು ಅಂದರೆ, ಸ್ವಾತಂತ್ರ್ಯದ ಕಲ್ಪನೆಯನ್ನೇ ವಿರೋಧಿಸಿದಂತೆ. ಕೆಪಿಸಿಸಿ ಅಧ್ಯಕ್ಷ ಡಿಕೆಶಿಯವರು ದೇಗುಲದ ಮೇಲೆ ಕೈಯಿಟ್ಟರೆ ಬಿಜೆಪಿಯವರು ಭಸ್ಮವಾಗಲಿದ್ದಾರೆ ಎಂದಿದ್ದಾರೆ. ಆದರೆ, ಅವರಿಗೆ ಒಂದು ಹೇಳಬೇಕಾಗುತ್ತದೆ. ಈಗಲೇ ಸಿಬಿಐ, ಇಡಿಗಳಿಂದ ತನಿಖೆ ಎದುರಿಸುತ್ತಿರುವ ಡಿಕೆಶಿಯವರೇ ಭಸ್ಮಾಸುರ ಇದ್ದಂತೆ. ಯಾರ ತಲೆ ಮೇಲೆ ಕೈಯಿಟ್ಟರೂ ಭಸ್ಮ ಆಗುತ್ತಿದ್ದಾರೆ. ಜೊತೆಗಿದ್ದವರೇ ಕೈಬಿಟ್ಟು ಹೋಗುತ್ತಿದ್ದಾರೆ. ಇನ್ನು ತನ್ನದೇ ತಲೆ ಮೇಲೆ ಕೈಯಿಡುವ ಸ್ಥಿತಿ ಬರಲಿದೆ, ತನ್ನನ್ನೇ ಭಸ್ಮ ಮಾಡಿಕೊಳ್ಳಲಿದ್ದಾರೆ ಎಂದು ವ್ಯಂಗ್ಯವಾಡಿದರು.
“The ideology of Taliban is religious blindness. Congress follows blindness for the sake of minority votes. The attitude of Congress is in line of Taliban. Majority Hindus are not in a position to believe Congress,” said National chief secretary of BJP C T Ravi. Speaking at a press conference in the city on Sunday, Ravi said, “Congress party is not giving an ounce of respect to the feelings of majority. The party which is led by dynasty, does not have the mental status of changing according to times. It is unfortunate that Congress has the habit of opposing every change the BJP tries to implement.
18-07-25 07:11 pm
Bangalore Correspondent
Dharmasthala Case, SIT, CM Siddaramaiah: ಧರ್ಮ...
18-07-25 04:48 pm
Mangalore South ACP Vijayakranti: ಮಂಗಳೂರು ದಕ್...
18-07-25 03:38 pm
Minister Dinesh Gundu Rao, Dharmasthala: ಧರ್ಮ...
17-07-25 07:45 pm
Dharmasthala News, SIT: ಧರ್ಮಸ್ಥಳ ಪ್ರಕರಣದಲ್ಲಿ...
17-07-25 04:50 pm
16-07-25 09:58 pm
HK News Desk
Changur Baba: ಲವ್ ಜಿಹಾದ್, ಹಿಂದು ಯುವತಿಯರ ಮತಾಂತ...
14-07-25 03:24 pm
ಅಹ್ಮದಾಬಾದ್ ವಿಮಾನ ದುರಂತ ; ಭಾರೀ ಅನುಮಾನ ಹುಟ್ಟಿಸಿ...
12-07-25 09:25 pm
Apples New COO, Sabih Khan: ಟೆಕ್ ದೈತ್ಯ ಏಪಲ್ ಸ...
12-07-25 04:21 pm
ಸಾಮೂಹಿಕ ಮತಾಂತರ ; ಮೂರೇ ವರ್ಷಕ್ಕೆ ಚಾಂಗೂರ್ ಬಾಬಾನಿ...
12-07-25 02:15 pm
18-07-25 03:19 pm
Mangalore Correspondent
Mangalore Rain, Thokottu: ಧಾರಕಾರ ಮಳೆ ; ತೊಕ್ಕೊ...
18-07-25 02:36 pm
"Celebrating Excellence: 37 Achievers Felicit...
17-07-25 06:30 pm
Wild Elephant Attack, Dharmasthala: ಧರ್ಮಸ್ಥಳ...
17-07-25 04:14 pm
Minister Priyank Kharge, Drug Trafficking: ಡ್...
17-07-25 01:51 pm
18-07-25 12:40 pm
Mangalore Correspondent
Mangalore Fraud, WhatsApp, crime: ಕಂಪನಿಯ ಎಂಡಿ...
18-07-25 12:01 pm
Mangalore Kadri Police, Crime, Snake; ಹೆಬ್ಬಾವ...
18-07-25 11:36 am
Crore Fraud, Roshan Saldanha Arrest, Mangalor...
17-07-25 10:42 pm
Uppinangady Murder: ಕೌಟುಂಬಿಕ ಕಲಹ ; ಮಾತಿಗೆ ಮಾತ...
17-07-25 02:30 pm