ಪಾದಯಾತ್ರೆ ಕೊರೋನಾ ಯಾತ್ರೆ ಆಗುವುದು ಬೇಡ ; ಕೈಬಿಡುವಂತೆ ಗೃಹ ಸಚಿವ ಮನವಿ 

12-01-22 02:46 pm       HK Desk news   ಕರ್ನಾಟಕ

ರಾಜ್ಯ ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ದಿನೇ ದಿನೇ ಕೊರೋನಾ ಪಾಸಿಟಿವ್ ಪ್ರಕರಣಗಳು ಏರಿಕೆಯಾಗುತ್ತಿದೆ.

ಬೆಂಗಳೂರು, ಜ 12 : ರಾಜ್ಯ ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ದಿನೇ ದಿನೇ ಕೊರೋನಾ ಪಾಸಿಟಿವ್ ಪ್ರಕರಣಗಳು ಏರಿಕೆಯಾಗುತ್ತಿದೆ. ಈ ಹೊತ್ತಿನಲ್ಲಿ ಕಾಂಗ್ರೆಸ್ ನಾಯಕರ ಮೇಕೆದಾಟು ಪಾದಯಾತ್ರೆ ಬೇಕಾ, ಇದರಿಂದ ಮತ್ತಷ್ಟು ಕೊರೋನಾ ಸೋಂಕು ಹರಡುವುದರಲ್ಲಿ ಸಂಶಯವಿಲ್ಲ ಎಂದು ರಾಜ್ಯದ ಬಹುತೇಕ ಜನ ಮಾತನಾಡಿಕೊಳ್ಳುತ್ತಿದ್ದಾರೆ. ಪಾದಯಾತ್ರೆಗೆ ಬಿಜೆಪಿ ನಾಯಕರು ಟೀಕಿಸುತ್ತಾ ಬಂದಿದ್ದು, ಕೈ ನಾಯಕರ ವಿರುದ್ಧ ಈಗಾಗಲೇ 3 ಎಫ್ಐಆರ್ ಗಳು ದಾಖಲಾಗಿವೆ.

ಈ ಸಂದರ್ಭದಲ್ಲಿ ಪತ್ರಿಕಾ ಪ್ರಕಟಣೆ ಮೂಲಕ ಗೃಹ ಸಚಿವ ಆರಗ ಜ್ಞಾನೇಂದ್ರ ಕಾಂಗ್ರೆಸ್ ನಾಯಕರ ಪಾದಯಾತ್ರೆ ಹಿಂತೆಗೆದುಕೊಳ್ಳುವಂತೆ ಮನವಿ ಮಾಡಿದ್ದಾರೆ. ಪಾದಯಾತ್ರೆ ಕೊರೋನಾ ಯಾತ್ರೆ ಆಗುವುದು ಬೇಡ, ದಯವಿಟ್ಟು ರಾಜಕೀಯ ಉದ್ದೇಶದ ಯಾತ್ರೆ ಕೈಬಿಡಿ ಎಂದು  ಕೈ ನಾಯಕರಿಗೆ ಮನವಿ ಮಾಡಿದ್ದಾರೆ.

ಈ ಬಗ್ಗೆ ಪತ್ರಿಕಾ ಪ್ರಕಟಣೆ ಮೂಲಕ ಆರಗ ಜ್ಞಾನೇಂದ್ರ ಮನವಿ ಮಾಡಿದ್ದು,  ಸಾರ್ವಜನಿಕರ ಆರೋಗ್ಯದ ಬಗ್ಗೆ ಆರಂಭದಲ್ಲೇ ಆತಂಕ ಇತ್ತು. ಹೀಗಾಗಿ ಪಾದಯಾತ್ರೆ ಮುಂದೂಡಿ ಅಂತ ಮನವಿ ಮಾಡಿದ್ವಿ, ಈಗ ಎಲ್ಲರ ಆತಂಕ ನಿಜವಾಗುತ್ತಿದೆ. ಕೊರೋನಾ ಕೇಸ್ ಹೆಚ್ಚಾಗುತ್ತಿದೆ. ಅಪಪ್ರಚಾರ, ವಿತಂಡವಾದ ಬಿಟ್ಟು ಪಾದಯಾತ್ರೆ ಕೈಬಿಡಿ ಎಂದು ಕಾಂಗ್ರೆಸ್ ನಾಯಕರಿಗೆ ಮನವಿ ಮಾಡಿದ್ದಾರೆ.

Jnanendra criticised Congress for carrying out a march at the peak of the third wave and said Mekedatu march was to gain political mileage for the Congress. "Our apprehensions about the padayatra programme unfortunately are coming true. Because of this specific reason [Covid], we had appealed to Congress leaders to defer their programme. It seems that Congress are only bothered about taking political advantage and not about public health," Jnanendra said.