ಕೈತಪ್ಪಿದ ಪರಿಷತ್ ವಿಪಕ್ಷ ಸ್ಥಾನ ; ಕಾಂಗ್ರೆಸಿಗೂ, ನನಗೂ ಮುಗಿದ ಅಧ್ಯಾಯ, ಸ್ಥಿತಿ ಇನ್ನಷ್ಟು ಹೀನಾಯ ಆಗಲಿದೆ ಎಂದ ಸಿಎಂ ಇಬ್ರಾಹಿಂ ! 

27-01-22 11:24 pm       HK Desk news   ಕರ್ನಾಟಕ

ಕಳೆದ ಹಲವು ಸಮಯಗಳಿಂದ ಹಿರಿಯ ಕಾಂಗ್ರೆಸ್ ಮುಖಂಡ ಸಿಎಂ ಇಬ್ರಾಹಿಂ ಪಕ್ಷ ತೊರೆಯಲಿದ್ದಾರೆ ಎಂಬ ಮಾತುಗಳು ಕೇಳಿಬಂದಿದ್ದವು. ಈಗ ಈ ಬಗ್ಗೆ ಅಧಿಕೃತ ಮಾತುಗಳನ್ನೇ ಆಡಿದ್ದಾರೆ.‌

ಬೆಂಗಳೂರು, ಜ.27 : ಕಳೆದ ಹಲವು ಸಮಯಗಳಿಂದ ಹಿರಿಯ ಕಾಂಗ್ರೆಸ್ ಮುಖಂಡ ಸಿಎಂ ಇಬ್ರಾಹಿಂ ಪಕ್ಷ ತೊರೆಯಲಿದ್ದಾರೆ ಎಂಬ ಮಾತುಗಳು ಕೇಳಿಬಂದಿದ್ದವು. ಈಗ ಈ ಬಗ್ಗೆ ಅಧಿಕೃತ ಮಾತುಗಳನ್ನೇ ಆಡಿದ್ದಾರೆ.‌ ವಿಧಾನ ಪರಿಷತ್ ವಿಪಕ್ಷ ನಾಯಕ ಸ್ಥಾನ ಬಿ.ಕೆ. ಹರಿಪ್ರಸಾದ್ ಪಾಲಾಗಿದ್ದನ್ನು ನೆಪವಾಗಿಟ್ಟು ಸಿಎಂ ಇಬ್ರಾಹಿಂ ಅಸಮಾಧಾನ ವ್ಯಕ್ತಪಡಿಸಿದ್ದು ಕಾಂಗ್ರೆಸ್ ತೊರೆಯುವ ಸುಳಿವು ನೀಡಿದ್ದಾರೆ. 

ಈ ಬಗ್ಗೆ ಮಾತನಾಡಿರುವ ಸಿಎಂ ಇಬ್ರಾಹಿಂ, ಕಾಂಗ್ರೆಸ್‌ಗೂ ನನಗೂ ಮುಗಿದ ಅಧ್ಯಾಯ. ಸಿದ್ದರಾಮಯ್ಯರಿಂದ ನಾನು ಕಾಂಗ್ರೆಸ್‌ ಪಕ್ಷ ಸೇರ್ಪಡೆಯಾಗಿದ್ದೆ. ಅದಕ್ಕಾಗಿ ದೇವೇಗೌಡ್ರನ್ನು ಬಿಟ್ಟು ಕಾಂಗ್ರೆಸ್ ಬಂದೆ. ಕುರುಬರನ್ನು ಸಿಎಂ ಮಾಡಬೇಕೆಂದು ಪ್ರಯತ್ನ ಪಟ್ಟೆ, ಚುನಾವಣೆ ಸಮಯದಲ್ಲಿ ಚಾಮುಂಡೇಶ್ವರಿಯಲ್ಲಿ ಸೋಲುತ್ತೀಯಾ ಎಂದು ಬಾದಾಮಿಯಲ್ಲಿ ನಿಲ್ಲಿಸಿ ಸಿದ್ದರಾಮಯ್ಯರನ್ನು ಗೆಲ್ಲಿಸಿದ್ದೆ.‌ ಅದಕ್ಕಾಗಿ ಕಾಂಗ್ರೆಸ್‌ ನಾಯಕರು ನನಗೆ ಒಳ್ಳೆಯ ಉಪಕಾರ ಮಾಡಿದ್ದಾರೆ. 

ಕೆಲವೇ ದಿನಗಳಲ್ಲಿ ಕಾಂಗ್ರೆಸ್ ಎಂಎಲ್‌ಸಿ ಸ್ಥಾನಕ್ಕೆ ರಾಜಿನಾಮೆ ನೀಡುತ್ತೇನೆ. ಈ ಬಗ್ಗೆ ಆಪ್ತರೊಂದಿಗೆ ಚರ್ಚಿಸಿ ಮುಂದಿನ ನಿರ್ಧಾರಕ್ಕೆ ಬರುತ್ತೇನೆ. ಕಾಂಗ್ರೆಸ್ ಗೆ ಮುಸ್ಲಿಂ ಸಮುದಾಯವೇ ಮತದಾರರು. ಮುಸ್ಲಿಂ ಸಮುದಾಯದ ಸಹಕಾರ ಇಲ್ಲ ಅಂದ ಮೇಲೆ ಕಾಂಗ್ರೆಸ್ ಸ್ಥಿತಿ ಹೀನಾಯವಾಗಲಿದೆ. ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ 80 ಸ್ಥಾನಗಳಲ್ಲಿ ಗೆಲುವು ಸಾಧಿಸಿತ್ತು. ಈ ಬಾರಿಯ ಚುನಾವಣೆಯಲ್ಲಿ ಅದಕ್ಕಿಂತಲೂ ಕಡಿಮೆ ಸ್ಥಾನಗಳು ಕಾಂಗ್ರೆಸ್ ಗೆ ಬರಲಿವೆ ಎಂದು ಭವಿಷ್ಯ ನುಡಿದರು. ‌

ಕಾಂಗ್ರೆಸ್ ಗೆ ಕೊರೊನಾ ಬಂದಿದೆ, ಡೋಸ್‌ ಕೆಲಸ ಮಾಡುತ್ತಿಲ್ಲ‌. 2023 ರಲ್ಲಿ ಸಮ್ಮಿಶ್ರ ಸರ್ಕಾರವಿರುತ್ತದೆ. ಆಗ ನನ್ನ ಅನಿವಾರ್ಯತೆ ಏನೆಂದು ತಿಳಿಯುತ್ತದೆ. ಸಿದ್ದರಾಮಯ್ಯ, ಡಿಕೆಶಿ ಬಹಳ ದೊಡ್ಡವರು.  ಅದಕ್ಕಾಗಿ ಅವರು ನಮ್ಮಲ್ಲಿ ಮಾತನಾಡುವುದಿಲ್ಲ ಎಂದು ಹೇಳಿದರು.

Miffed at being denied the post of Leader of Congress in Karnataka Legislative Council, veteran party leader C. M. Ibrahim on Thursday announced that he would be resigning from the party and giving up his membership of the Council.