ತಾವರೆಕೊಪ್ಪ ಸಿಂಹಧಾಮದಲ್ಲಿ ಎರಡು ಸಿಂಹಗಳ ಕಾದಾಟ, ಸಿಂಹಿಣಿ ದಾರುಣ ಸಾವು ! 

01-02-22 05:57 pm       HK Desk news   ಕರ್ನಾಟಕ

ತಾವರೆಕೊಪ್ಪದ ಹುಲಿ ಮತ್ತು ಸಿಂಹಧಾಮದಲ್ಲಿ ಎರಡು ಸಿಂಹಗಳ ನಡುವೆ ಕಾದಾಟ ನಡೆದು ಹೆಣ್ಣು ಸಿಂಹ ಸಾವನ್ನಪ್ಪಿದೆ. ಇದರಿಂದ ಸಿಂಹಧಾಮದಲ್ಲಿ ಸಿಂಹಗಳ ಸಂಖ್ಯೆ 5ಕ್ಕೆ ಕುಸಿದಿದೆ.

ಶಿವಮೊಗ್ಗ, ಫೆ.1 : ತಾವರೆಕೊಪ್ಪದ ಹುಲಿ ಮತ್ತು ಸಿಂಹಧಾಮದಲ್ಲಿ ಎರಡು ಸಿಂಹಗಳ ನಡುವೆ ಕಾದಾಟ ನಡೆದು ಹೆಣ್ಣು ಸಿಂಹ ಸಾವನ್ನಪ್ಪಿದೆ. ಇದರಿಂದ ಸಿಂಹಧಾಮದಲ್ಲಿ ಸಿಂಹಗಳ ಸಂಖ್ಯೆ 5ಕ್ಕೆ ಕುಸಿದಿದೆ.

ಕಾದಾಟದಲ್ಲಿ ತೀವ್ರ ಗಾಯಗೊಂಡಿದ್ದ ಮಾನ್ಯಾ (11) ಎಂಬ ಸಿಂಹಿಣಿ ಸಾವನ್ನಪ್ಪಿದ್ದು ಅಂತಿಮ ಸಂಸ್ಕಾರ ನೆರವೇರಿಸಲಾಯಿತು. ಒಂದು ವಾರದ ಹಿಂದೆ ಸಿಂಹಧಾಮದ ಯಶವಂತ ಎಂಬ ಸಿಂಹದ ಜೊತೆಗೆ ಮಾನ್ಯಾ ಕಾದಾಟ ನಡೆಸಿತ್ತು. ‘ಕಾದಾಟದ ಬಳಿಕ ಎರಡು ಸಿಂಹಗಳನ್ನು ಪ್ರತ್ಯೇಕವಾಗಿ ಇರಿಸಲಾಗಿತ್ತು. ಆದರೆ ತೀವ್ರ ಗಾಯಗೊಂಡಿದ್ದ ಮಾನ್ಯಾ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದೆ’ ಎಂದು ಹುಲಿ ಮತ್ತು ಸಿಂಹಧಾಮದ ಕಾರ್ಯನಿರ್ವಾಹಕ ನಿರ್ದೇಶಕ ಮುಕುಂದಚಂದ್ರ ತಿಳಿಸಿದ್ದಾರೆ. 

ಸಿಂಹಿಣಿ ಮಾನ್ಯಾಳನ್ನು ಮೈಸೂರಿನಿಂದ 2011ರಲ್ಲಿ ಶಿವಮೊಗ್ಗದ ತ್ಯಾವರೆಕೊಪ್ಪ ಸಿಂಹಧಾಮಕ್ಕೆ ತರಲಾಗಿತ್ತು. ಮೈಸೂರು ಮೃಗಾಲಯದಿಂದ ಆರ್ಯ, ಮಾಲಿನಿ ಮತ್ತು ಮಾನ್ಯಾ ಸಿಂಹಗಳು ಇಲ್ಲಿಗೆ ಬಂದಿದ್ದವು. ಆನಂತರ ತ್ಯಾವರೆಕೊಪ್ಪದಲ್ಲಿ ಮೂರು ಗಂಡು, ಮೂರು ಹೆಣ್ಣು ಸಿಂಹಗಳು ಇದ್ದವು. ಅದರಲ್ಲೀಗ ಮಾನ್ಯಾ ಎಂಬ ಸಿಂಹ ಸಾವನ್ನಪ್ಪಿರುವುದರಿಂದ ಮೃಗಾಲಯದಲ್ಲಿ ಸಿಂಹಗಳ ಸಂಖ್ಯೆ ಐದಕ್ಕೆ ಕುಸಿದಿದೆ.

Shivamoga Thyavarekoppa safari Lioness dies after fight. The dead is identified as Manya (11).