ಚಿತ್ರದುರ್ಗ; ಟೋಲ್ ನಲ್ಲಿ ನಿಂತಿದ್ದ  ಟ್ಯಾಂಕರ್ ಗೆ ಕಾರು ಢಿಕ್ಕಿ, ಸ್ಥಳದಲ್ಲೇ ಮೂವರು ಸಾವು 

03-02-22 09:35 pm       HK Desk news   ಕರ್ನಾಟಕ

ಟೋಲ್ ನಲ್ಲಿ ಹಣ ಕಟ್ಟಲು ನಿಂತಿದ್ದ ಟ್ಯಾಂಕರ್ ಲಾರಿಗೆ ಹಿಂಬದಿಯಿಂದ ಕಾರು ಢಿಕ್ಕಿ ಹೊಡೆದು ಮೂವರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಹಿರಿಯೂರು ತಾಲ್ಲೂಕಿನ ಗುಯಿಲಾಳ್ ಟೋಲ್ ನಲ್ಲಿ ಗುರುವಾರ ನಡೆದಿದೆ.

ಚಿತ್ರದುರ್ಗ, ಫೆ 03: ಟೋಲ್ ನಲ್ಲಿ ಹಣ ಕಟ್ಟಲು ನಿಂತಿದ್ದ ಟ್ಯಾಂಕರ್ ಲಾರಿಗೆ ಹಿಂಬದಿಯಿಂದ ಕಾರು ಢಿಕ್ಕಿ ಹೊಡೆದು ಮೂವರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಹಿರಿಯೂರು ತಾಲ್ಲೂಕಿನ ಗುಯಿಲಾಳ್ ಟೋಲ್ ನಲ್ಲಿ ಗುರುವಾರ ನಡೆದಿದೆ.

ಮೃತರನ್ನು ಬೆಳಗಾವಿ ಮೂಲದ ಕಾರು ಚಾಲಕ ರಮೇಶ್ (55), ವಿಶ್ವನಾಥ್ (65) ಹಾಗೂ ಸೀಮಾ(45) ಎಂದು ಗುರುತಿಸಲಾಗಿದೆ‌.

ರಾಷ್ಟ್ರೀಯ ಹೆದ್ದಾರಿ 4ರಲ್ಲಿರುವ ಹಿರಿಯೂರು ತಾಲ್ಲೂಕಿನ ಗುಯಿಲಾಳ್ ಟೋಲ್ ನಲ್ಲಿ ಹಣ ಕಟ್ಟಲೆಂದು ಟ್ಯಾಂಕರ್ ಚಾಲಕ ತನ್ನ  ಲಾರಿಯನ್ನು ನಿಲ್ಲಿಸಿದ್ದು, ಈ ವೇಳೆ ಬೆಳಗಾವಿಯಿಂದ ಬೆಂಗಳೂರಿಗೆ ತೆರಳುತ್ತಿದ್ದ ಕಾರಿನ ಚಾಲಕ  ಅತೀವೇಗ ಹಾಗೂ ಅಜಾಗರೂಕತೆಯಿಂದ ನಡೆಸಿಕೊಂಡು ಬಂದು ಲಾರಿಯ ಹಿಂಬದಿಗೆ ಢಿಕ್ಕಿ ಹೊಡೆಸಿದ್ದಾನೆ. ಪರಿಣಾಮ ಕಾರಿನಲ್ಲಿದ್ದ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. 

ಘಟನಾ ಸ್ಥಳಕ್ಕೆ ಜಿಲ್ಲಾ ರಕ್ಷಣಾಧಿಕಾರಿ ಪರಶುರಾಮ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಬಗ್ಗೆ ಇಲ್ಲಿನ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

In a fatal accident, three from the same family were killed as the car they were traveling hit a standing tanker near the toll plaza at Chitradurga. Three people were killed in a road accident at Guylalu toll plaza on Pune- Bengaluru NH-48 in Chitradurga district on Thursday.