ಅಪಾರ್ಟ್​ಮೆಂಟ್​ ಮೇಲಿಂದ ಹಾರಿದ ಯುವಕ ; 15 ವರ್ಷದ ಡಾಕ್ಟರ್ ದಂಪತಿಗಳ ಮಗನ ದೇಹ ಛಿದ್ರ ಛಿದ್ರ ! 

08-02-22 06:27 pm       HK Desk news   ಕರ್ನಾಟಕ

ವೈದ್ಯ ದಂಪತಿಯ ಪುತ್ರನೊಬ್ಬ ಅಪಾರ್ಟ್​ಮೆಂಟ್​ ಮೇಲಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಹೆಬ್ಬಗೋಡಿ ಬಳಿಯ ಕಮ್ಮಸಂದ್ರದಲ್ಲಿ ಮಂಗಳವಾರ ಸಂಭವಿಸಿದೆ.

ಬೆಂಗಳೂರು, ಫೆ 08: ವೈದ್ಯ ದಂಪತಿಯ ಪುತ್ರನೊಬ್ಬ ಅಪಾರ್ಟ್​ಮೆಂಟ್​ ಮೇಲಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಹೆಬ್ಬಗೋಡಿ ಬಳಿಯ ಕಮ್ಮಸಂದ್ರದಲ್ಲಿ ಮಂಗಳವಾರ ಸಂಭವಿಸಿದೆ.

ಡಾ.ಶರಣು ಪಟೇಲ್​ ಮತ್ತು ಡಾ.ಮಮತಾ ದಂಪತಿ ಪುತ್ರ ಆದಿತ್ಯ ಪಟೇಲ್(15) ಮೃತ ದುರ್ದೈವಿ. ಈತ ಬೊಮ್ಮನಹಳ್ಳಿ ಬೇಗೂರಿನ ಟ್ರಿಮೀಸ್ ಶಾಲೆಯಲ್ಲಿ ಎಸ್​ಎಸ್​ಎಲ್​ಸಿ ಓದುತ್ತಿದ್ದ.

ಹೊಸೂರು ರಸ್ತೆಯ ಬೊಮ್ಮಸಂದ್ರದ ಹೆಲ್ತ್ ಸಿಟಿಯ ಸ್ಪರ್ಶ್ ಆಸ್ಪತ್ರೆಯಲ್ಲಿ ಡಾ.ಶರಣು ಪಟೇಲ್​ ಮತ್ತು ಡಾ.ಮಮತಾ ಇಬ್ಬರೂ ಕೆಲಸ ಮಾಡುತ್ತಿದ್ದಾರೆ. ಕಮ್ಮಸಂದ್ರ ಬಳಿಯ 'ಡ್ಯಾಡಿ' ಅಪಾರ್ಟ್​ಮೆಂಟ್​ನಲ್ಲಿ ಮಗನ ಜತೆ ದಂಪತಿ ವಾಸವಿದ್ದರು.

ಮಂಗಳವಾರ ಮಧ್ಯಾಹ್ನ ಬಾಲಕ ಆದಿತ್ಯ, ಅಪಾರ್ಟ್​ಮೆಂಟ್​ನ ಐದು ಅಂತಸ್ತಿನ ಮೇಲಿಂದ ಕೆಳಗೆ ಹಾರಿದ್ದು, ತಲೆ ಛಿದ್ರಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಪಾಲಕರ ಆಕ್ರಂದನ ಮುಗಿಲು ಮುಟ್ಟಿದೆ. ಅಯ್ಯೋ ಕಂದ ಸಾಯುವಂತಹದ್ದು ಏನಾಯ್ತಪ್ಪಾ… ಎಂದು ಪಾಲಕರು ರೋದಿಸುತ್ತಿದ್ದ ದೃಶ್ಯ ಮನಕಲಕುವಂತಿತ್ತು.

ಆದಿತ್ಯ ಮೊಬೈಲ್​ ಅನ್ನು ಹೆಚ್ಚಾಗಿ ಬಳಲುತ್ತಿದ್ದನಂತೆ. ಇತ್ತೀಚೆಗೆ ಪಾಲಕರು ಮಗನಿಂದ ಮೊಬೈಲ್ ಅನ್ನು ವಾಪಸ್​ ಪಡೆದಿದ್ದರಂತೆ. ಬಳಿಕ ಮಂಕಾಗಿದ್ದ ಆದಿತ್ಯ ಸಾವಿನ ಮನೆಯ ಕದ ತಟ್ಟಿದ್ದಾನೆ ಎನ್ನಲಾಗಿದೆ. ಹೆಬ್ಬಗೋಡಿ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿಸಿದ್ದಾರೆ.

A student was killed when he jumped down from the 5th building of garden apartment in dadis area of kammasandra near hebbegodi here.