ಬ್ರೇಕಿಂಗ್ ನ್ಯೂಸ್
08-02-22 07:56 pm HK Desk news ಕರ್ನಾಟಕ
ಬೆಂಗಳೂರು, ಫೆ.8 : ಹಿಜಾಬ್ ಮತ್ತು ಶಿಕ್ಷಣದ ಬಗ್ಗೆ ಆಯ್ಕೆ ಬಂದಲ್ಲಿ ಶಿಕ್ಷಣ ಆಯ್ದುಕೊಳ್ಳಿ. ಹಿಜಾಬ್ ಮನೆಯೊಳಗೆ ಇಟ್ಟುಕೊಳ್ಳಿ. ಶಿಕ್ಷಣಕ್ಕೆ ಧರ್ಮ ಬೇಡ ಎಂದು ಹೇಳಿಕೆ ನೀಡಿದ್ದ ಯುವ ಕಾಂಗ್ರೆಸ್ ರಾಷ್ಟ್ರೀಯ ವಕ್ತಾರೆ ಸುರೈಯಾ ಅಂಜುಮ್ ಗೆ ನೂರಕ್ಕೂ ಹೆಚ್ಚು ಬೆದರಿಕೆ ಕರೆ ಬಂದಿರುವ ಬಗ್ಗೆ ಆಕೆಯೇ ಹೇಳಿಕೊಂಡಿದ್ದಾರೆ.
ಮಾಧ್ಯಮವೊಂದರ ಡಿಬೇಟ್ ನಲ್ಲಿ ಪಾಲ್ಗೊಂಡ ಸುರೈಯಾ ಅಂಜುಮ್, ತನಗೆ ಇಂಟರ್ನೆಟ್ ಕರೆಗಳ ಮೂಲಕ ನಿರಂತರ ಬೆದರಿಕೆ ಕರೆ ಬಂದಿದೆ. ಫೇಸ್ಬುಕ್ ನಲ್ಲಿ ಲೈವ್ ಬಂದು ವಿಡಿಯೋ ಮಾಡಿದ 24 ಗಂಟೆಯಲ್ಲಿ ನೂರಕ್ಕೂ ಹೆಚ್ಚು ಮಂದಿ ಕರೆ ಮಾಡಿ ಜೀವ ಬೆದರಿಕೆ ಒಡ್ಡಿದ್ದಾರೆ. ಈ ಬಗ್ಗೆ ಪೊಲೀಸ್ ದೂರು ನೀಡಲಿದ್ದೇನೆ ಎಂದು ಹೇಳಿದ್ದಾರೆ.
ಹಿಜಾಬ್ ವಿಚಾರ ಕೋರ್ಟಿನಲ್ಲಿ ಇರುವುದರಿಂದ ವಿದ್ಯಾರ್ಥಿಗಳು ತಮ್ಮ ಶಿಕ್ಷಣವನ್ನು ಮೊಟಕುಗೊಳಿಸಿ ಹೋರಾಟ ಮಾಡುವುದು ಬೇಡ. ಹಿಜಾಬ್ ಮತ್ತು ಶಿಕ್ಷಣ ನಿಮ್ಮ ಆಯ್ಕೆಯಾದಲ್ಲಿ ಶಿಕ್ಷಣವೇ ಆದ್ಯತೆಯಾಗಲಿ. ಧರ್ಮದ ಆಚರಣೆ ಏನಿದೆ ಅದೆಲ್ಲವೂ ಮನೆಯಲ್ಲೇ ಇರಲಿ. ಧರ್ಮಕ್ಕಿಂತ ದೇಶ ಮೊದಲು. ಭಾರತೀಯಳು ಎನ್ನುವುದು ನನಗೆ ಮೊದಲು. ಇದು ನನ್ನ ಆಯ್ಕೆ. ನನ್ನ ಸೋದರಿಯರಿಗೂ ಇದನ್ನೇ ಹೇಳುತ್ತೇನೆ.
ಪಿಎಫ್ಐ ಮತ್ತು ಎಸ್ಡಿಪಿಐ ಅವರ ರಾಜಕೀಯ ಅಸ್ತಿತ್ವ ಸಾಧಿಸುವಲ್ಲಿ ದಾಳ ಆಗಬೇಡಿ. ಆರೆಸ್ಸೆಸ್- ಬಿಜೆಪಿ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ನೀವು ಬಲಿಪಶು ಆಗಬೇಡಿ ಎಂದು ಹೇಳುತ್ತೇನೆ ಎಂಬುದಾಗಿ ಸುರೈಯಾ ಅಂಜುಮ್ ಹೇಳಿದ್ದಾರೆ. ಸುರೈಯಾ ಅಂಜುಮ್, ತನ್ನ ಫೇಸ್ಬುಕ್ ಪೇಜ್ ನಲ್ಲಿ ಹಿಜಾಬ್ ವಿಚಾರದಲ್ಲಿ ಲೈವ್ ಬಂದು ವಿಡಿಯೋ ಮಾಡಿದ್ದರು.
Congress Suraiya Anjum gets hundreds of threat calls after her Facebook video goes viral stating to remove Hijab. Recently speaking in her Facebook live video she had stated that Muslim girls should remove third hijab and go to their classes.
07-02-25 11:00 pm
Bangalore Correspondent
ಮುಡಾ ಹಗರಣ ; ಸಿಎಂ ಸಿದ್ದರಾಮಯ್ಯಗೆ ಹೈಕೋರ್ಟ್ ರಿಲೀಫ...
07-02-25 08:09 pm
Microfinance Karnataka, Governor, Siddaramai...
07-02-25 04:22 pm
National aerobic Championship Karnataka: ಜಮ್ಮ...
06-02-25 07:55 pm
Yadagiri Accident, Five Killed: ಯಾದಗಿರಿ; ಸಾರಿ...
05-02-25 06:39 pm
07-02-25 05:27 pm
HK News Desk
Zamfara school fire accident: SHOCKING; ತರಗತ...
07-02-25 05:23 pm
Telangana, student suicide: ಪ್ರಾಂಶುಪಾಲರು ಬೈದರ...
06-02-25 05:37 pm
ಅಮೆರಿಕದಲ್ಲಿ ಅಕ್ರಮ ವಲಸಿಗರ ಗಡೀಪಾರು ; ಪ್ರಧಾನಿ ಮೋ...
06-02-25 02:21 pm
Kerala Suicide, Ragging: ಕೇರಳದಲ್ಲಿ 15ರ ಬಾಲಕ ಮ...
04-02-25 10:49 pm
07-02-25 10:13 pm
Mangalore Correspondent
Brijesh Chowta, DK MP, Piyush Goyal: ದ.ಕ.ದಲ್ಲ...
07-02-25 08:24 pm
Belthangady, House, Evil spirit: ಬೆಳ್ತಂಗಡಿ ;...
07-02-25 03:12 pm
Mangalore airport: ಮಂಗಳೂರು ಏರ್ಪೋರ್ಟ್ ರನ್ ವೇ ವ...
06-02-25 10:16 pm
Prasad Attavar, Saloon Attack, Mangalore: ಮಸಾ...
05-02-25 10:51 pm
07-02-25 11:55 am
Mangalore Correspondent
Mangalore crime, blackmail Temple priest: ಅರ್...
06-02-25 09:32 pm
Kalaburagi, Reels,weapons, Crime: ಕಲಬುರಗಿ ; ಶ...
06-02-25 04:35 pm
Raichur Rape, Crime: ರಾಯಚೂರಿನಲ್ಲಿ ಎರಡನೇ ಕ್ಲಾಸ...
06-02-25 12:00 pm
Bangalore crime, Illicit affair: ಶೀಲ ಶಂಕಿಸಿ ನ...
05-02-25 04:29 pm