ಬ್ರೇಕಿಂಗ್ ನ್ಯೂಸ್

Trump Vs Zelenskyy, Talk fight: ಶ್ವೇತ ಭವನದಲ್ಲಿ ಟ್ರಂಪ್ – ಉಕ್ರೇನ್ ಅಧ್ಯಕ್ಷರ ಟಾಕ್ ವಾರ್ ; ಜನರ ಜೀವದ ಜೊತೆ ಚೆಲ್ಲಾವಾಡುತ್ತಿದ್ದೀರಿ, 3ನೇ ಮಹಾಯುದ್ಧಕ್ಕೆ ಹಾತೊರೆಯುತ್ತಿದ್ದೀರಿ, ನಿಮಗೆ ಶಾಂತಿ ಬೇಕಿಲ್ಲ, ಅಮೆರಿಕ ನೆರವಿಲ್ಲದಿದ್ದರೆ ಎರಡೇ ವಾರಕ್ಕೆ ಯುದ್ಧ ಅಂತ್ಯ..!    |    Bike Robbery, Mangalore Police, Crime, TD Nagraj: ಜಾತ್ರೆ, ಕಂಬಳದಲ್ಲಿ ನಿಲ್ಲಿಸಿ ಹೋಗುತ್ತಿದ್ದ ಬೈಕ್ ಗಳೇ ಟಾರ್ಗೆಟ್ ; ಸ್ಪ್ಲೆಂಡರ್ ಕದ್ದು ಮಾರಾಟ ಮಾಡುತ್ತಿದ್ದ ಜಾಲ ಭೇದಿಸಿದ ಪೊಲೀಸರು, ಮೂಡುಬಿದ್ರೆಯಲ್ಲಿ 20ಕ್ಕೂ ಹೆಚ್ಚು ಕದ್ದ ಬೈಕ್ ಪತ್ತೆ, ನಾಲ್ವರ ಸೆರೆ     |    Farangipete Protest, Diganth, Missing, Mangalore: ಪಿಯುಸಿ ವಿದ್ಯಾರ್ಥಿ ನಾಪತ್ತೆ ಪ್ರಕರಣ ; ಫರಂಗಿಪೇಟೆಯಲ್ಲಿ ಸ್ವಯಂಪ್ರೇರಿತ ಬಂದ್, ಇನ್ನೆರಡು ದಿನದಲ್ಲಿ ಬಾಲಕ ಪತ್ತೆಯಾಗದಿದ್ದರೆ ತೀವ್ರ ಪ್ರತಿಭಟನೆ ಎಚ್ಚರಿಕೆ, ಪತ್ತೆಗೆ ಸರ್ವ ಪ್ರಯತ್ನ ಎಂದ ಎಸ್ಪಿ     |   

ಹಿಜಾಬ್ ಹಾಕಿಸಲು, ತೆಗೆಸಲು ಬರುವವರನ್ನು ಒದ್ದು ಒಳಗೆ ಹಾಕಿ ; ಸಚಿವ ಪ್ರಹ್ಲಾದ ಜೋಶಿ 

18-02-22 02:28 pm       HK Desk news   ಕರ್ನಾಟಕ

ಹಿಜಾಬ್ ಹಾಕಿಸಲು ಹಾಗೂ ತೆಗೆಸಲು ಕಾಲೇಜು ಬಳಿ ಯಾರು ಬರುತ್ತಾರೆಯೋ, ಅವರನ್ನು ಒದ್ದು ಒಳಗೆ ಹಾಕಿ ಎಂದು ರಾಜ್ಯ ಸರ್ಕಾರಕ್ಕೆ ಕೇಂದ್ರ‌ ಸಚಿವ ಪ್ರಲ್ಹಾದ ಜೋಶಿ ಸಲಹೆ ಮಾಡಿದ್ದಾರೆ.‌

ಹುಬ್ಬಳ್ಳಿ, ಫೆ.18 : ಹಿಜಾಬ್ ಹಾಕಿಸಲು ಹಾಗೂ ತೆಗೆಸಲು ಕಾಲೇಜು ಬಳಿ ಯಾರು ಬರುತ್ತಾರೆಯೋ, ಅವರನ್ನು ಒದ್ದು ಒಳಗೆ ಹಾಕಿ ಎಂದು ರಾಜ್ಯ ಸರ್ಕಾರಕ್ಕೆ ಕೇಂದ್ರ‌ ಸಚಿವ ಪ್ರಲ್ಹಾದ ಜೋಶಿ ಸಲಹೆ ಮಾಡಿದ್ದಾರೆ.‌

ಎಲ್ಲವನ್ನೂ ಸಹಿಸಿಕೊಂಡು ಸುಮ್ಮನೆ ಕೂರಲು ಆಗುವುದಿಲ್ಲ‌. ವಿದ್ಯಾರ್ಥಿಗಳನ್ನು ಕಾಲೇಜಿಗೆ ಸೇರಿಸಿಕೊಳ್ಳಿ. ವಿನಾಕಾರಣ‌ ವಿದ್ಯಾರ್ಥಿಗಳನ್ನು ಉತ್ತೇಜಿಸುವವರ ವಿರುದ್ಧ ಕ್ರಮ ಕೈಗೊಳ್ಳಬೇಕು.‌ ನ್ಯಾಯಾಲಯ ನೀಡಿರುವ ಮಧ್ಯಂತರ ಆದೇಶವನ್ನು ಎಲ್ಲರೂ ಪಾಲಿಸಬೇಕು ಎಂದು ಜೋಶಿ ಹೇಳಿದ್ದಾರೆ. 

ಹೈಕೋರ್ಟ್ ಆದೇಶವನ್ನು ಧಿಕ್ಕರಿಸಿ ನಡೆದುಕೊಳ್ಳುವುದು ಸರಿಯಲ್ಲ. ‌ಇದನ್ನು ಹೀಗೆಯೇ ಬಿಟ್ಟರೆ  ಅಂತಿಮ ಆದೇಶವನ್ನೂ ಪಾಲಿಸುವುದಿಲ್ಲ ಎಂದು ಪ್ರಲ್ಹಾದ ಜೋಶಿ ಹೇಳಿದ್ದಾರೆ. ‌

Union Minister of Parliamentary Affairs Pralhad Joshi on Friday told the Karnataka government not to hesitate to arrest outsiders who come to schools and colleges to make girl students wear hijab in classrooms.