ಬ್ರೇಕಿಂಗ್ ನ್ಯೂಸ್
21-02-22 03:25 pm HK News Desk ಕರ್ನಾಟಕ
ಬೆಂಗಳೂರು, ಫೆ.21: ಪಿಎಫ್ಐ, ಎಸ್ಡಿಪಿಐ ಕಾರ್ಯಕರ್ತರ ಗೂಂಡಾ ವರ್ತನೆಗೆ ಇನ್ನೆಷ್ಟು ಕಾರ್ಯಕರ್ತರು ಬಲಿಯಾಗಬೇಕ್ರೀ.. ಕಳೆದ ಬಾರಿ ನೀವು ವಿರೋಧ ಪಕ್ಷದಲ್ಲಿದ್ದಾಗ ಬ್ಯಾನ್ ಮಾಡುವಂತೆ ಆಗ್ರಹ ಮಾಡುತ್ತಿದ್ದೀರಲ್ಲಾ.. ಈಗ ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿಯದ್ದೇ ಸರಕಾರ ಇದೆ.. ಈಗ ನಿಷೇಧ ಮಾಡಲು ನಿಮಗೇನ್ರೀ ರೋಗ ಎಂದು ಶ್ರೀರಾಮಸೇನೆ ವರಿಷ್ಠ ಪ್ರಮೋದ್ ಮುತಾಲಿಕ್ ಬಿಜೆಪಿ ಸರಕಾರದ ವಿರುದ್ಧ ಕಿಡಿಕಾರಿದ್ದಾರೆ.
ಹರ್ಷ ಒಬ್ಬ ಅಪ್ಪಟ ಹಿಂದು ಕಾರ್ಯಕರ್ತ. ಕಳೆದ ಐದು ವರ್ಷಗಳಿಂದ ಆತ ಗೋರಕ್ಷಣೆ, ಹಿಂದು ಪರ ಕೆಲಸ ಮಾಡಿಕೊಂಡು ಬಂದಿದ್ದ. ಒಬ್ಬ ಬಡ ಟೈಲರನ ಒಬ್ಬ ಮಗ. ಆತನನ್ನು ಗುರಿಯಾಗಿಸ್ಕೊಂಡು ಹತ್ಯೆ ಮಾಡಿದ್ದಾರೆ. ಹರ್ಷನನ್ನು ಕೊಲೆ ಮಾಡುವುದಕ್ಕೆ ಹಲವು ಬಾರಿ ಪ್ರಯತ್ನ ನಡೆದಿತ್ತು. ದುಷ್ಕರ್ಮಿಗಳು ನಿನ್ನೆ ರಾತ್ರಿ ಹೊಂಚು ಹಾಕಿ ಕೊಲೆ ಮಾಡಿದ್ದಾರೆ. ಈ ಕೊಲೆಗೆ ಬೇರಾವುದೇ ವೈಯಕ್ತಿಕ ಕಾರಣಗಳಿಲ್ಲ. ಹಿಜಾಬ್ ಗಲಾಟೆಯ ಹಿಂದಿನ ಶಕ್ತಿಗಳೇ ಈ ಕೊಲೆಯನ್ನು ಮಾಡಿದ್ದಾರೆ.
ಇಂಥ ಕೊಲೆ ಸರಣಿ ಮುಂದೆ ನಡೀಬಾರ್ದು. ಇದಕ್ಕಾಗಿ ಪಿಎಫ್ಐ, ಎಸ್ಡಿಪಿಐ ಬ್ಯಾನ್ ಮಾಡಿ. ಬಿಜೆಪಿಗೆ ತಾಕತ್ತಿದ್ದರೆ ಇದನ್ನು ಮಾಡಿ ಎಂದು ಸವಾಲು ಹಾಕುತ್ತೇನೆ. ಪಾಪದ ಕಾರ್ಯಕರ್ತರನ್ನು ಬಲಿ ಕೊಡಬೇಡಿ. ಕೂಡಲೇ ಪ್ರಕರಣದ ಹಿಂದಿನ ಆರೋಪಿಗಳನ್ನು ಬಂಧಿಸಿ. ಅವರನ್ನು ಜಾಮೀನಿನಲ್ಲಿ ಹೊರಬರದಂತೆ ಜೈಲಿನಲ್ಲಿ ಕೂಡಿ ಹಾಕಿ. ಅಥವಾ ಅವರನ್ನು ಎನ್ಕೌಂಟರ್ ಮಾಡಿ, ಮುಂದೆ ಈ ರೀತಯ ಅಸಹನೀಯ ಸ್ಥಿತಿ ಮರುಕಳಿಸಬಾರದು ಎಂದು ಮುತಾಲಿಕ್ ಆಗ್ರಹ ಮಾಡಿದ್ದಾರೆ.
ಬಿಜೆಪಿಯವ್ರೇ ಸೇರಿ 25 ಲಕ್ಷ ಪರಿಹಾರ ಕೊಡಿ :
ಅಲ್ಲದೆ, ಹರ್ಷನ ಬಡ ಕುಟುಂಬಕ್ಕೆ ರಾಜ್ಯ ಸರಕಾರ 25 ಲಕ್ಷ ರೂ. ಪರಿಹಾರ ನೀಡಬೇಕು. ಸರಕಾರದಿಂದ ಆಗದಿದ್ದರೆ ನಿಮ್ಮ ಜೇಬಿನಿಂದ ತೆಗೆದು ಕೊಡಿ. ಮಾಜಿ ಮುಖ್ಯಮಂತ್ರಿಯ ಊರಿನಲ್ಲಿ ಈ ಕೊಲೆಯಾಗಿದೆ. ಅಲ್ಲಿಯೇ ಗೃಹ ಸಚಿವರು ಇದ್ದಾರೆ. ಸಂಸದ ಇದ್ದಾರೆ. ಇನ್ನೊಬ್ಬ ಈಶ್ವರಪ್ಪ ಅನ್ನುವ ಸಚಿವನೂ ಇದ್ದಾರೆ. ಇವರೆಲ್ಲ ಸೇರಿ ಪರಿಹಾರ ಕೊಡಲಿ. ಇಂಥ ಜಾಗದಲ್ಲಿ ಒಬ್ಬ ಬಡಪಾಯಿ ಕಾರ್ಯಕರ್ತನ ಕೊಲೆಯಾಗುತ್ತದೆ ಎಂದರೆ ಇವರೇನು ಮಾಡುತ್ತಿದ್ದಾರೆ ಎಂದು ಮುತಾಲಿಕ್ ಪ್ರಶ್ನೆ ಮಾಡಿದ್ದಾರೆ. ಮಾಧ್ಯಮ ಒಂದಕ್ಕೆ ನೀಡಿರುವ ಸಂದರ್ಶನದಲ್ಲಿ ಮುತಾಲಿಕ್, ಈ ಮಾತುಗಳನ್ನು ಹೇಳಿದ್ದಾರೆ.
Pramod Muthalik Reacts over Shivamogga Murder, Slams BJP says why cant PFI and SDPI be banned
13-08-25 07:03 pm
Bangalore Correspondent
ವಜಾ ಹಿಂದೆ ದೊಡ್ಡ ಷಡ್ಯಂತ್ರ ಆಗಿದೆ, ರಾಹುಲ್ ಗಾಂಧಿ...
12-08-25 10:39 pm
Rajendra Swamiji of Kodimath, Dharmasthala: ಧ...
12-08-25 07:43 pm
ಕೆಎನ್ ರಾಜಣ್ಣ ರಾಜಿನಾಮೆ ಅಲ್ಲ, ಸಚಿವ ಸ್ಥಾನದಿಂದ ಕಿ...
11-08-25 11:01 pm
ರಾಜ್ಯಪಾಲರ ವಿರುದ್ಧ ಅವಹೇಳನ ಹೇಳಿಕೆ ; ಐವಾನ್ ಡಿಸೋಜ...
11-08-25 10:26 pm
13-08-25 11:56 am
HK News Desk
ಪುಣ್ಯಕ್ಷೇತ್ರ ಯಾತ್ರೆ ಹೊರಟವರ ಮೇಲೆರಗಿದ ಜವರಾಯ ; ರ...
13-08-25 10:41 am
'ದೇಶ ಸುರಕ್ಷಿತ ಕೈಯಲ್ಲಿದೆ' ; ನರೇಂದ್ರ ಮೋದಿ ಸರ್ಕ...
12-08-25 02:49 pm
ಕಾಶ್ಮೀರಿ ಪಂಡಿತರ ಗುರಿಯಾಗಿಸಿ ಮಾರಣಹೋಮ ; 35 ವರ್ಷಗ...
12-08-25 11:42 am
ಕರ್ನಾಟಕ ಸರ್ಕಾರದಿಂದ ಹಿರಿಯ ನಾಗರಿಕರಿಗೆ ಸಾರ್ವತ್ರಿ...
12-08-25 11:35 am
13-08-25 10:22 pm
Mangalore Correspondent
Dharmasthala News Today, Point No 13: ಕಡೆಗೂ ಪ...
13-08-25 10:01 pm
The Ocean Pearl Brings “Flavors of India” to...
13-08-25 08:23 pm
ಹಠಾತ್ ಕುಸಿದು ಬಿದ್ದು ಕಾಲೇಜು ಬಸ್ ನಿರ್ವಾಹಕ ಸಾವು...
13-08-25 01:49 pm
ಶವ ಹೂತ ಪ್ರಕರಣ ; ಕೊನೆಗೂ ಎಂಟ್ರಿಯಾದ ರಾಷ್ಟ್ರೀಯ ಮಾ...
13-08-25 10:37 am
13-08-25 05:40 pm
Udupi Correspondent
Fraud, Laxmi Hebbalkar: ಸಚಿವೆ ಲಕ್ಷ್ಮೀ ಹೆಬ್ಬಾಳ...
13-08-25 04:14 pm
ಅನೈತಿಕ ಸಂಬಂಧ ಶಂಕೆ ; ಅತ್ತೆ ಮೇಲಿನ ದ್ವೇಷದಿಂದ ಕೊಲ...
12-08-25 12:36 pm
Mangalore Digital Arrest, Fraud: ಚೀನಾಕ್ಕೆ ಡ್ರ...
11-08-25 12:37 pm
ಸ್ನೇಹಿತನಿಗೆ ಬೆತ್ತಲೆ ವೀಡಿಯೋ ಶೇರ್ ಮಾಡಿದ್ಲು ಯುವತ...
08-08-25 10:07 pm