ಕಲಬುರಗಿ ಜಿಲ್ಲೆ ಪ್ರವೇಶಕ್ಕೆ ನಿರ್ಬಂಧ ; ಚೈತ್ರಾಗೆ ಯಾದಗಿರಿ ಪೊಲೀಸರ ತಡೆ 

01-03-22 03:49 pm       HK Desk news   ಕರ್ನಾಟಕ

ಹಿಂದು ಸಂಘಟನೆ ಕಾರ್ಯಕರ್ತೆ ಚೈತ್ರಾ ಕುಂದಾಪುರ ಆಳಂದಕ್ಕೆ ಹೋಗಲು ಯಾದಗಿರಿ ಮೂಲಕ ತೆರಳುತ್ತಿದ್ದ ಸಂದರ್ಭದಲ್ಲಿ ಪೋಲಿಸರು ತಡೆದು ಹಿಂದಕ್ಕೆ ಕಳುಹಿಸಿದ್ದಾರೆ.

ಕಲಬುರಗಿ, ಮಾ.1: ಹಿಂದು ಸಂಘಟನೆ ಕಾರ್ಯಕರ್ತೆ ಚೈತ್ರಾ ಕುಂದಾಪುರ ಆಳಂದಕ್ಕೆ ಹೋಗಲು ಯಾದಗಿರಿ ಮೂಲಕ ತೆರಳುತ್ತಿದ್ದ ಸಂದರ್ಭದಲ್ಲಿ ಪೋಲಿಸರು ತಡೆದು ಹಿಂದಕ್ಕೆ ಕಳುಹಿಸಿದ್ದಾರೆ.

ಹಿಂದು ಸಂಘಟನೆಗಳ ಕಾರ್ಯಕರ್ತರು ರಾಘವ ಚೈತನ್ಯ ಶಿವಲಿಂಗ ಶುದ್ಧಿ ಕಾರ್ಯಕ್ಕಾಗಿ ಆಳಂದ ಪಟ್ಟಣದ ಲಾಡ್ಲಾ ಮಶಾಕ್ ದರ್ಗಾಕ್ಕೆ ತೆರಳುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಆಳಂದ ಚಲೋ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಇದರಲ್ಲಿ ಭಾಗವಹಿಸಲು ಚೈತ್ರಾ ಕುಂದಾಪುರ ಆಗಮಿಸುತ್ತಿದ್ದರು.‌

ಸೌಹಾರ್ದತೆಗೆ ಧಕ್ಕೆಯಾಗುವ ನೆಪದಲ್ಲಿ ‌ಶ್ರೀರಾಮ ಸೇನೆಯ ಸ್ಥಾಪಕಾಧ್ಯಕ್ಷ ಪ್ರಮೋದ್​ ಮುತಾಲಿಕ್ ಹಾಗೂ ಚೈತ್ರಾ ಕುಂದಾಪುರ ಇಬ್ಬರಿಗೂ ಕಲಬುರಗಿ ಜಿಲ್ಲೆಗೆ ಪ್ರವೇಶವನ್ನು ನಿಷೇಧಿಸಿ ಪೊಲೀಸರು ಆದೇಶ ಮಾಡಿದ್ದಾರೆ. ‌

ಯಾದಗಿರಿಯಿಂದ ಅಳಂದ ಹೋಗುತ್ತಿರುವ ವಿಷಯ ತಿಳಿದು ವಾಡಿಯ ಹೊರ ವಲಯದ ಬಲರಾಮ ವೃತ್ತದಲ್ಲಿ ಡಿವೈಎಸ್ಪಿ ಉಮೇಶ ಚಿಕ್ಕಮಠ, ಪಿಐ ಸಂತೋಷ ಹಳ್ಳೂರ, ವಾಡಿ ಪಿಎಸ್ಐ ಮಹಾಂತೇಶ ಪಾಟೀಲ ಅವರು ತಡೆದು ಮನವೊಲಿಸಿ, ಯಾದಗಿರಿಗೆ ಹಿಂದಕ್ಕೆ ಕಳುಹಿಸಿದ್ದಾರೆ.

Chitra kundapur stopped at Kalburgi by police.