ಭಗವದ್ಗೀತೆ ಓದಿದರೆ ಹೊಟ್ಟೆ ತುಂಬುತ್ತದಾ.. ದೇಶದಲ್ಲಿ ಟನ್ ಗಟ್ಟಲೆ ಸಮಸ್ಯೆ ಇದೆ, ಇವ್ರಿಗೆ ಜನರ ಸತ್ತರೂ ಕಾಳಜಿ ಇಲ್ಲ..! 

19-03-22 04:00 pm       HK Desk news   ಕರ್ನಾಟಕ

ಸರ್ಕಾರದ ಮುಂದೆ ಟನ್ ಗಟ್ಟಲೇ ಸಮಸ್ಯೆಗಳು ಇದ್ದಾವೆ, ಅವುಗಳನ್ನ ಮೊದಲು ಸರಿಪಡಿಸಲಿ.‌ ಭಗವದ್ಗೀತೆ ಪಾಠ ಮಾಡಿದರೆ ಅದರಿಂದ ಹೊಟ್ಟೆ ತುಂಬುತ್ತದಾ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಪ್ರಶ್ನೆ ಮಾಡಿದ್ದಾರೆ.‌

ರಾಮನಗರ, ಮಾ.19: ಸರ್ಕಾರದ ಮುಂದೆ ಟನ್ ಗಟ್ಟಲೇ ಸಮಸ್ಯೆಗಳು ಇದ್ದಾವೆ, ಅವುಗಳನ್ನ ಮೊದಲು ಸರಿಪಡಿಸಲಿ.‌ ಭಗವದ್ಗೀತೆ ಪಾಠ ಮಾಡಿದರೆ ಅದರಿಂದ ಹೊಟ್ಟೆ ತುಂಬುತ್ತದಾ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಪ್ರಶ್ನೆ ಮಾಡಿದ್ದಾರೆ.‌

ನಾನು ಬೆಳಗ್ಗೆ ಹ್ಯಾಡ್ಸ್ ಅಂಡ್ ಕಲ್ಚರ್ ಎಂಬ ಬುಕ್ ಓದ್ತಿದ್ದೆ.  ಕಾರಿನಲ್ಲಿ ಈಗಲೂ ಇದೆ. ಅದರಲ್ಲಿ ಮೊದಲನೆಯ ಪ್ರಶ್ನೆ ಇದೇ ಇರೋದು. ನಾನ್ಯಾರು, ಎಲ್ಲಿಂದ ಬಂದೆ ಅಂದರೆ ಅದಕ್ಕೆ ಉತ್ತರವಿಲ್ಲ. ಇರೋವರೆಗೂ ನಮ್ಮ ಹಣೆಬರಹ ಅಷ್ಟೇ, ಹೋದ್ಮೆಲೆ ಏನು ಗೊತ್ತಿಲ್ಲ. ಯಾರಿಗೂ ಯಾವುದೂ ಶಾಶ್ವತ ಅಲ್ಲ. ಈ ಭೂಮಿ ಹೇಗೆ ಉದ್ಭವ ಆಯ್ತು ಎಂದು ನಮಗೆ, ನಿಮಗೆ ಗೊತ್ತಾ.. ಎಂದು ಪ್ರಶ್ನೆ ಮಾಡಿದರು.‌

ಬಿಜೆಪಿಯ ರಾಜ್ಯ - ಕೇಂದ್ರ ಸರ್ಕಾರಕ್ಕೆ ಜನರ ಸಮಸ್ಯೆ ಬಗ್ಗೆ ಅರಿವಿಲ್ಲ. ಅದನ್ನ ಬಗೆಹರಿಸುವುದು ಅವರಿಗೆ ಬೇಕಿಲ್ಲ. ದೇಶದಲ್ಲಿ ಭಾವನಾತ್ಮಕವಾಗಿ ವಿಚಾರಗಳು ನಡೆಯುತ್ತಿವೆ.‌ ಜನ ಸತ್ತರೇನು, ಹಸಿವಾದರೇನು, ಮಕ್ಕಳಿಗೆ ವಿದ್ಯಾಭ್ಯಾಸ ಇಲ್ಲದಿದ್ದರೇನು, ಅದ್ಯಾವುದು ಚಿಂತೆ ಇಲ್ಲ. ಅಧಿಕಾರಕ್ಕಾಗಿ ಅಮಾಯಕರನ್ನ ಭಾವನಾತ್ಮಕವಾಗಿ ದಾರಿ ತಪ್ಪಿಸುತ್ತಿದ್ದಾರೆ.‌ ಅಂತಹ ವಿಚಾರಗಳು ದೊಡ್ಡದಾಗಿ ಪ್ರಚಾರ ಆಗ್ತಿದೆ.‌ ಇದಕ್ಕೂ ಒಂದು ಅಂತಿಮ ವಿರಾಮ ಇರುತ್ತದೆ, ಯಾರಿಗೂ ಶಾಶ್ವತ ಅಲ್ಲ.‌ ರಾಜ ಮಹಾರಾಜರ ಕಾಲದಿಂದಲೂ ನೋಡಿದ್ದೇವೆ‌. ಅವುಗಳು ಉಳಿದವಾ, ಎಲ್ಲವೂ ನಶಿಸಿಹೋಗಿವೆ.‌ ಇದಕ್ಕೂ ಒಂದು ಅಂತ್ಯವಿದೆ, ಕಾಯಬೇಕಿದೆ ಎಂದು ಚನ್ನಪಟ್ಟಣದ ಕದರಮಂಗಲದಲ್ಲಿ ಹೆಚ್.ಡಿ.ಕುಮಾರಸ್ವಾಮಿ ಹೇಳಿಕೆ ನೀಡಿದ್ದಾರೆ.

If students read bhagwat great will their tummy be full questions kumaraswamy.