ಬ್ರೇಕಿಂಗ್ ನ್ಯೂಸ್
27-03-22 08:22 pm HK Desk news ಕರ್ನಾಟಕ
ಬಾಗಲಕೋಟ, ಮಾ.27 : ಸಿದ್ದರಾಮಯ್ಯರಿಗೆ ಹಿಂದು ಧರ್ಮದ ಬಗ್ಗೆ ನಂಬಿಕೆ ಇಲ್ಲ, ನೇರ ಹಿಂದು ವಿರೋಧಿ. ಯಾಕಂದ್ರೆ ಮುಂದೆ ಮುಸಲ್ಮಾನರ ಕ್ಷೇತ್ರದಿಂದ ಗೆಲ್ಲಬೇಕು. ಈ ಬಾರಿ ಬಾದಾಮಿಗೆ ಬರಲ್ಲ. ಚಾಮುಂಡೇಶ್ವರಿ ಕ್ಷೇತ್ರವೂ ಸೋತಿದ್ದು ಅಲ್ಲಿ ಹೋಗಲ್ಲ. ಸುಮ್ನೆ ಅವರು ಕರೀತಾರೆ, ಇವ್ರು ಕರೀತಾರೆ ಎಂದು ಹೇಳಿ ನಾಟಕ ಮಾಡ್ತಾರೆ. ಇವ್ರಿಗೆ ಸ್ವಂತ ಕ್ಷೇತ್ರವೇ ಇಲ್ಲ.. ಅದಕ್ಕಾಗಿ ಉಳಿದಿದ್ದು ಒಂದು ಜಮೀರ್ ಅಹ್ಮದ್ ಕ್ಷೇತ್ರ ಚಾಮರಾಜನಗರ. ಅಲ್ಲಿ ಮುಸಲ್ಮಾನರು ಜಾಸ್ತಿ ಇದ್ದಾರೆ, ಅಲ್ಲಿ ನಿಂತ್ಕೊಂಡು ಗೆಲ್ಲಬೇಕು ಅಂತ ಒಂದೇ ಕಾರಣಕ್ಕೆ ಹಿಂದು ಸಮಾಜ ಟೀಕೆ ಮಾಡ್ತಾ ಹೊರಟಿದ್ದಾರೆ, ಇದನ್ನ ಅವರೇ ಅನುಭವಿಸ್ತಾರೆ ಎಂದು ಸಚಿವ ಕೆ.ಎಸ್.ಈಶ್ವರಪ್ಪ ವ್ಯಂಗ್ಯವಾಡಿದ್ದಾರೆ.
ಹಿಜಬ್ ಬಗ್ಗೆ ಕೋರ್ಟ್ ತೀರ್ಪು ಬಂದರೂ ಮುಸಲ್ಮಾನ್ ವಿದ್ಯಾರ್ಥಿಗಳು, ನಾವು ಶಿಕ್ಷಣವನ್ನೇ ಬಿಡ್ತೀವಿ ಆದ್ರೆ ಧರ್ಮ ಬಿಡಲ್ಲ ಅಂದ್ರು. ಅವರಿಗೆ ಬುದ್ದಿಮಾತಾದ್ರು ಸಿದ್ದರಾಮಯ್ಯ ಹೇಳಬೇಕಿತ್ತಲ್ಲ. ನೀವು ಹಾಗೆ ಮಾಡಬೇಡಿ, ಶಿಕ್ಷಣ ಮುಖ್ಯ ಅಂತಾ ಹೇಳಬೇಕಿತ್ತಲ್ವಾ, ಒಂದೇ ಒಂದು ಮಾತು ಹೇಳಿಲ್ಲ.. ಯಾಕೆ ಮುಸ್ಲಿಂ ಓಟು ಕಳಕೊಳ್ಳೋದು ಅಂತ ಹಾಗೆ ಹೇಳಿಲ್ಲ. ಈ ರೀತಿ ಮಾಡಿ ದೇಶದಲ್ಲಿ ಕಾಂಗ್ರೆಸ್ ನಿರ್ನಾಮ ಆಗ್ತಾ ಹೋಗಿದೆ. ಕರ್ನಾಟಕದಲ್ಲಿ ಮಾತ್ರ ಕಾಂಗ್ರೆಸ್ ಜೀವ ಕುಟು...ಕುಟು ಅಂತಿದೆ. ಯಾವಾಗ ಇದು ಸಾಯುತ್ತೋ ಗೊತ್ತಿಲ್ಲ. ಸಿದ್ದರಾಮಯ್ಯ ನಂತವರು ಒಬ್ಬರು ಸಾಕು ಪಕ್ಷ ನಿರ್ನಾಮ ಆಗೋದಕ್ಕೆ.
ಇವರು ಮೊದಲು ಕೋರ್ಟ್ ಗೆ ಗೌರವ ಕೊಡೋದನ್ನ ಕಲಿತುಕೊಳ್ಳಲಿ. ಸಾಧು ಸಂತರ ಬಗ್ಗೆ ನೀವು ಮಾಡಿರೋ ಹೇಳಿಕೆ, ಅಕ್ಷ್ಯಮ್ಯ ಅಪರಾಧ. ಜರಾಸಂಧನಿಗೆ ನೂರು ತಪ್ಪು ಮಾಡಿದಾಗ ಶಿಕ್ಷೆ ಆಯ್ತು ಅಂತಾರಲ್ಲ ಹಾಗೆ, ಇವರದ್ದೂ ನೂರು ತಪ್ಪಾಯ್ತು. ಶಿಕ್ಷೆ ನೀಡಲು ಜನ ಕಾದಿದ್ದಾರೆ.
ಇವರು ರಾಜಕೀಯ ನಿವೃತ್ತಿ ತಗೊಳ್ಳೋದೇ ಉತ್ತಮ. ಇಲ್ಲವೇ ಅವರನ್ನ ಕಾಂಗ್ರೆಸ್ ಪಕ್ಷದಿಂದ ಕಿತ್ತು ಬಿಸಾಕ್ಬೇಕು. ಕೆಪಿಸಿಸಿ ಅಧ್ಯಕ್ಷ ಡಿಕೆಶಿಗೆ ಅಷ್ಟು ಶಕ್ತಿ ಇದ್ರೆ ಇದನ್ನು ಮಾಡಲಿ. ಇಲ್ಲಾಂದ್ರೆ, ಕನಿಷ್ಟ ನಿಮ್ಮ ಸೋನಿಯಾ ಅಥವಾ ರಾಹುಲ್ ಗಾಂಧಿಗಾದ್ರು ಹೇಳಿ ವಜಾ ಮಾಡಿಸಿ. ಇಡೀ ರಾಜ್ಯದಲ್ಲಿ ಸಿದ್ದರಾಮಯ್ಯ ಜೊತೆ ಒಬ್ಬ ಕಾಂಗ್ರೆಸ್ ನಾಯಕ ಇಲ್ಲಾಂದ್ರೆ ನೀವೇಕೆ ರಾಜಕಾರಣ ಮಾಡ್ತಿದ್ದೀರಿ ಎಂದು ಸಿದ್ದುಗೆ ಈಶ್ವರಪ್ಪ ಪ್ರಶ್ನೆ ಮಾಡಿದ್ದಾರೆ.
ಶಾಲಾ ಸಮವಸ್ತ್ರ ವಿಚಾರವಾಗಿ ಸ್ವಾಮೀಜಿಗಳ ಉಡುಗೆಗೆ ಕೈ ಹಾಕಿ ಸಿದ್ದರಾಮಯ್ಯ ಕೈ ಸುಟ್ಟುಕೊಂಡ್ರಾ ಎಂಬ ಪ್ರಶ್ನೆಗೆ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಶಾಪ, ಪಾಪ ಇದನ್ನೆಲ್ಲ ನಂಬಲ್ಲ ಸಿದ್ದರಾಮಯ್ಯ. ಗೋಮಾಂಸ ತಿಂದೇ ದೇವಸ್ಥಾನಕ್ಕೆ ಹೋಗ್ತೀನಿ ನಾನು, ನೀವೇನು ಕೇಳೋರು ಎಂದವರು ಅವ್ರು. ಈ ಮಾತನ್ನ ಹೇಳಿದವರು ದೇವರು, ಪಾಪ, ಸ್ವಾಮೀಜಿಗಳನ್ನ ನಂಬುತ್ತಾರೆಯೇ.. ಪ್ರಜಾಪ್ರಭುತ್ವ ನಂಬ್ತೇನೆ, ಸಂವಿಧಾನ ನಂಬ್ತೇನೆ ಅಂತಾ ಹೇಳಿದ ವ್ಯಕ್ತಿ, ಇಂದು ಕೋರ್ಟ್ ಹಾಗೂ ಸಂವಿಧಾನಕ್ಕೂ ನೀವು ಮೋಸ ಮಾಡಿದ್ರಿ ಅಲ್ವಾ ಎಂದು ಕುಟುಕಿದ್ದಾರೆ.
A day after senior Congress leader S Siddaramiah made remarks on the attire of Hindu pontiffs, BJP leaders launched a broadside against him.
07-08-25 05:50 pm
Bangalore Correspondent
Dharmasthala burial case, Gag Order: ಮಾಧ್ಯಮ ನ...
06-08-25 10:51 pm
ಅಶೋಕನ ಕಾಲದ ಮೌರ್ಯರ ರಾಜಧಾನಿ ರಾಯಚೂರಿನ ಮಸ್ಕಿ ಆಗಿತ...
05-08-25 01:45 pm
19 Peacocks Dead, Tumkuru: ಹುಲಿಗಳ ಹತ್ಯೆಯಾಯ್ತು...
05-08-25 12:44 pm
Bangalore Suicide, School Boy: ನಾನು ಈಗ ಸ್ವರ್ಗ...
04-08-25 01:00 pm
06-08-25 12:15 pm
HK News Desk
1954 ರಿಂದ ಪಾಕಿಸ್ತಾನಕ್ಕೆ 2 ಬಿಲಿಯನ್ ಡಾಲರ್ ಮೌಲ್ಯ...
05-08-25 10:58 pm
ಹಠಾತ್ ಮೇಘಸ್ಫೋಟಕ್ಕೆ ನಲುಗಿದ ಉತ್ತರಾಖಂಡ ; ಉತ್ತರಕಾ...
05-08-25 09:33 pm
ದೇಶದ ಅತಿ ದೀರ್ಘಾವಧಿಯ ಗೃಹ ಸಚಿವರಾಗಿ ಅಮಿತ್ ಷಾ ದಾ...
05-08-25 06:59 pm
ಜಮ್ಮು ಕಾಶ್ಮೀರದ ಮಾಜಿ ರಾಜ್ಯಪಾಲ ಸತ್ಯಪಾಲ ಮಲಿಕ್ ನ...
05-08-25 03:23 pm
07-08-25 07:55 pm
Mangalore Correspondent
Dharmasthala, Attack on YouTubers: ಯೂಟ್ಯೂಬರ್...
07-08-25 03:26 pm
Dharmasthala Temple, NIA, Bomb: ಕುಕ್ಕರ್ ಬಾಂಬ್...
07-08-25 11:19 am
ಧರ್ಮಸ್ಥಳದಲ್ಲಿ ಪರ-ವಿರೋಧ ಗಲಾಟೆ ; ಯೂಟ್ಯೂಬ್, ಮಾಧ್...
06-08-25 11:11 pm
Dharmasthala News, Banglegudde: ಬಂಗ್ಲೆಗುಡ್ಡೆ...
06-08-25 07:37 pm
06-08-25 08:02 pm
Mangalore Correspondent
Bangalore Kidnap, Nischith Murder: ಬೆಂಗಳೂರು ನ...
06-08-25 05:43 pm
Cybercrime, New Fraud, Mobile Hacking: ಅಪರಿಚಿ...
06-08-25 11:23 am
Udupi Gold, Theft: ಕದ್ದ ಚಿನ್ನವನ್ನು ಕರಗಿಸಿ ಗಟ್...
06-08-25 11:04 am
Bangalore Cyber Fraud: 1.5 ಕೋಟಿ ರೂ. ಸೈಬರ್ ವಂಚ...
05-08-25 10:39 pm