ಎಂತೆಂಥವರನ್ನೋ ಮನೆಯಲ್ಲಿ ಕೂಡಿಸಿದವರಿಗೆ ವಿಜಯೇಂದ್ರ ಯಾವ ಗಿಡದ ತೊಪ್ಪಲು ಬಿಡಿ ; ಮತ್ತೆ ಕಿಡಿಕಾರಿದ ಯತ್ನಾಳ್ 

11-04-22 01:46 pm       HK Desk news   ಕರ್ನಾಟಕ

​​​​​​​ಸಚಿವ ಸಂಪುಟ ಬದಲಾವಣೆ ಮಾಡ್ತಾರೋ, ಪುನರ್ ರಚನೆ ಮಾಡ್ತಾರೋ ಯಾವುದರ ಬಗ್ಗೆನೂ ಸ್ಪಷ್ಟವಾದ ಸಂದೇಶ ಕೇಂದ್ರದಿಂದ ಬಂದಿಲ್ಲ. ಈಗ ನಾವು ಏನೇ ಮಾತನಾಡಿದ್ರೂ ಅದು ಊಹಾಪೋಹ ಆಗುತ್ತದೆ.

ವಿಜಯಪುರ, ಎ.11: ಸಚಿವ ಸಂಪುಟ ಬದಲಾವಣೆ ಮಾಡ್ತಾರೋ, ಪುನರ್ ರಚನೆ ಮಾಡ್ತಾರೋ ಯಾವುದರ ಬಗ್ಗೆನೂ ಸ್ಪಷ್ಟವಾದ ಸಂದೇಶ ಕೇಂದ್ರದಿಂದ ಬಂದಿಲ್ಲ. ಈಗ ನಾವು ಏನೇ ಮಾತನಾಡಿದ್ರೂ ಅದು ಊಹಾಪೋಹ ಆಗುತ್ತದೆ. ಪಕ್ಷದ ಕಾರ್ಯಕಾರಿಣಿ ಬಳಿಕ ಒಟ್ಟಾರೆ ಒಳ್ಳೆ ಬೆಳವಣಿಗೆ ಆಗುತ್ತದೆ ಎಂದು ಬಿಜೆಪಿ ರೆಬೆಲ್ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ ಹೇಳಿದ್ದಾರೆ. ‌

ವೈಯಕ್ತಿಕ ಹಾಗೂ ಕಾರ್ಯಕಾರಿಣಿ ಕೆಲಸದ ನಿಮಿತ್ತ ನಾನು ದೆಹಲಿಗೆ ಹೋಗಿದ್ದೆ. ಮಂತ್ರಿಯಾಗಲು ಲಾಬಿ‌ ಮಾಡೋದಕ್ಕೆ ನಾನು ದೆಹಲಿಗೆ ಹೋಗಿಲ್ಲ. ಈ‌ ಮೊದಲೂ ಅರವಿಂದ ಬೆಲ್ಲದ ಜೊತೆ ನಾನು ದೆಹಲಿಗೆ ಹೋಗಿದ್ದೆ, ಮಂತ್ರಿಗೋಸ್ಕರ ಹೋಗಿರಲಿಲ್ಲ ಎಂದಿದ್ದಾರೆ ಯತ್ನಾಳ್. ನೀವು ಸಚಿವನಾಗಲು ವಿಜಯೇಂದ್ರ ಅಡ್ಡಗಾಲು ಹಾಕುತ್ತಿದ್ದಾರೆ ಎಂಬ ಆರೋಪದ ಬಗ್ಗೆ ಕೇಳಿದ್ದಕ್ಕೆ ಎಂತೆಂಥವರನ್ನೋ ಮನೆಯಲ್ಲಿ‌ ಕೂಡಿಸಿದೆ ಹೈಕಮಾಂಡ್, ಇನ್ನು ವಿಜಯೇಂದ್ರ ಯಾವ ಗಿಡದ ತೊಪ್ಪಲು. ನನ್ನಿಂದ ಬಿಜೆಪಿ ಎನ್ನುವವರನ್ನೇ ಮನೆಯಲ್ಲಿ ಕೂಡಿಸಿದ್ದಾರೆ, ವಿಜಯೇಂದ್ರ ಮೊನ್ನೆ ಮೊನ್ನೆ ಹುಟ್ಟಿದ ಹುಡುಗ.‌ ಬಿಜೆಪಿಯಲ್ಲಿ ಇನ್ಮುಂದೆ ವಂಶ ಪಾರಂಪರೆಗೆ ಅವಕಾಶವಿಲ್ಲ. ಪರಿವಾರ ವಾದ್ ಬಿಜೆಪಿಯಲ್ಲಿ ನಡೆಯಲ್ಲ ಎಂದು ಎಂದು ಪ್ರಧಾನ ಮಂತ್ರಿಗಳು ನಾಲ್ಕೈದು ಬಾರಿ ಹೇಳಿದ್ದಾರೆ. ಮಕ್ಕಳಿಗೆ, ಮೊಮ್ಮಕ್ಕಳಿಗೆ ಟಿಕೆಟ್ ಕೊಡುವ ಕಾಲ ಬಿಜೆಪಿಯಲ್ಲಿ ಹೋಯ್ತು.

Arvind Bellad misses ministerial berth following Shettar's opposition |  Deccan Herald

ಮೊನ್ನೆ ಉತ್ತರ ಪ್ರದೇಶದಲ್ಲಿ ಈ ಪ್ರಯೋಗ ಆಗಿದೆ. ಅಪ್ಪನ ಜಾಗ ನನಗೆ ಬೇಕು, ಅಪ್ಪನ ಜಾಗ ನನಗೆ ಕೊಡಿ ಎನ್ನುವುದು ಇನ್ಮುಂದೆ ಯಾವುದು ಉಳಿಯಲ್ಲ ಎಂಬ ವಿಶ್ವಾಸ ನನಗಿದೆ. ಆ ಭ್ರಮೆಯಲ್ಲಿ ಇರುವುದಕ್ಕಿಂದ ಈಗೇನಾದ್ರೂ ಉದ್ಯೋಗ ಮಾಡಿಕೊಂಡಿದ್ರೆ ಅದರಲ್ಲೇ ಮುಂದುವರೆಯುವುದು ಒಳ್ಳೆಯದು ಎಂದು ಯಡಿಯೂರಪ್ಪ ಮತ್ತು ಅವರ ಪುತ್ರನಿಗೆ ಟಾಂಗ್ ನೀಡಿದ್ದಾರೆ.

Karnataka Yatnal talks about cabinet expansion and surgery.