ಸಾವಿಗೂ ಮುನ್ನ ಮೂರು ದಿನ ಕಾಫಿನಾಡಿನಲ್ಲಿ ತಂಗಿದ್ದ ಸಂತೋಷ್ ; ಹೋಮ್ ಸ್ಟೇನಲ್ಲಿ ಡ್ಯಾನ್ಸ್ ! ಡಿವಿಆರ್ ವಶಕ್ಕೆ ಪಡೆದ ಪೊಲೀಸರು 

16-04-22 04:07 pm       HK Desk news   ಕರ್ನಾಟಕ

ಉಡುಪಿ ಲಾಡ್ಜ್ ನಲ್ಲಿ ಈಶ್ವರಪ್ಪ ಹೆಸರೇಳಿ ಆತ್ಮಹತ್ಯೆ ಮಾಡಿಕೊಂಡಿರುವ ಬೆಳಗಾವಿ ಮೂಲದ ಸಂತೋಷ್ ಪಾಟೀಲ್, ಅದಕ್ಕೂ ಹಿಂದೆ ಕಾಫಿನಾಡು ಚಿಕ್ಕಮಗಳೂರಿನಲ್ಲಿ ಮೂರು ದಿನ ವಾಸ್ತವ್ಯ ಹೂಡಿದ್ದರು.

ಚಿಕ್ಕಮಗಳೂರು, ಎ.16 : ಉಡುಪಿ ಲಾಡ್ಜ್ ನಲ್ಲಿ ಈಶ್ವರಪ್ಪ ಹೆಸರೇಳಿ ಆತ್ಮಹತ್ಯೆ ಮಾಡಿಕೊಂಡಿರುವ ಬೆಳಗಾವಿ ಮೂಲದ ಸಂತೋಷ್ ಪಾಟೀಲ್, ಅದಕ್ಕೂ ಹಿಂದೆ ಕಾಫಿನಾಡು ಚಿಕ್ಕಮಗಳೂರಿನಲ್ಲಿ ಮೂರು ದಿನ ವಾಸ್ತವ್ಯ ಹೂಡಿದ್ದರು. ಕೈಮರ ಸಮೀಪದ ಖಾಸಗಿ ಹೋಂ ಸ್ಟೇನಲ್ಲಿ ವಾಸ್ತವ್ಯ ಮಾಡಿದ್ದು ಈಗ ಚರ್ಚೆಗೆ ಕಾರಣವಾಗಿದೆ.  

ಇಬ್ಬರು ಸ್ನೇಹಿತರ ಜೊತೆ ಆಗಮಿಸಿದ್ದ ಸಂತೋಷ್ ಪಾಟೀಲ್, ಮೂರು ದಿನ ಖುಷಿ ಖುಷಿಯಾಗಿಯೇ ಕಳೆದಿದ್ದರು. ಎಪ್ರಿಲ್ 8, 9 ಮತ್ತು 10ರಂದು  ಮೂರು ದಿನಗಳ ಕಾಲ ಹೋಂ ಸ್ಟೇನಲ್ಲಿ ಕಳೆದಿದ್ದ ಸಂತೋಷ್ ಅಲ್ಲಿಂದ ನಾರ್ಮಲ್ ಆಗಿಯೇ ಹಿಂತಿರುಗಿದ್ದರು. ಅಲ್ಲಿದ್ದಾಗ ಸ್ನೇಹಿತರ ಜೊತೆ ಡ್ಯಾನ್ಸ್ ಮಾಡಿಕೊಂಡು ಹ್ಯಾಪಿ ಆಗಿ ಇದ್ದರು. ವಾಪಸ್ ಹೋಗುವಾಗ ಹೋಂ ಸ್ಟೇನಲ್ಲಿದ್ದ ನಾಯಿಗಳಿಗೆ ಬಿಸ್ಕೆಟ್ ಹಾಕಿ ಹೋಗಿದ್ದರು ಎಂದು ಅಲ್ಲಿನ ಸಿಬಂದಿ ಹೇಳುತ್ತಾರೆ.  

ಹೋಂ ಸ್ಟೇನಲ್ಲಿ ಸಂತೋಷವಾಗಿದ್ದುದಲ್ಲದೆ, ಕಾಫಿನಾಡಿನ ಸೌಂದರ್ಯಕ್ಕೂ ಮಾರು ಹೋಗಿದ್ದ ಸಂತೋಷ್ ದಿಢೀರ್ ಆಗಿ ಸಾವಿನ ಬಗ್ಗೆ ಚಿಂತನೆ ನಡೆಸಿದ್ದು ಸಂಶಯಕ್ಕೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ಪ್ರಕರಣದ ತನಿಖೆ ನಡೆಸುತ್ತಿರುವ ಉಡುಪಿ ಪೊಲೀಸರು ಚಿಕ್ಕಮಗಳೂರಿಗೆ ಬಂದಿದ್ದು ಹೋಮ್ ಸ್ಟೇನಲ್ಲಿ ತಪಾಸಣೆ ನಡೆಸುತ್ತಿದ್ದಾರೆ. ಹೋಂ ಸ್ಟೇಯಲ್ಲಿನ ಸಿಸಿಟಿವಿ ಡಿವಿಆರ್ ಅನ್ನೂ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಅಲ್ಲದೆ, ಅಲ್ಲಿನ ಸಿಬ್ಬಂದಿಗಳಿಂದ ಸಂತೋಷ್ ಬಗ್ಗೆ ಮಾಹಿತಿ ಸಂಗ್ರಹಿಸಿದ್ದಾರೆ.

Santosh Patil is a Belgaum based contractor. He had spent 3 days in Kikinamadu (Chikkamagaluru) before committing suicide in Udupi. Santosh Patil spent three days in the lap of nature with friends.Santosh Patil's Suicide Case has caused considerable commotion in Karnataka Politics. Minister Eshwarappa had accused the Commission of leasing work. Controversy has stirred up quite a bit of state politics. Minister Ishwarappa has resigned from his post after Santosh's suicide. Udupi police have now launched an investigation into the suicide case.