ರಸ್ತೆ ಅಪಘಾತ ; ತಮ್ಮ ವಾಹನ ಬಿಟ್ಟುಕೊಟ್ಟು ಕಾರ್ಯಕಾರಿಣಿಗೆ ಬೈಕಿನಲ್ಲಿ ತೆರಳಿದ ಕೇಂದ್ರ ಸಚಿವೆ ಶೋಭಕ್ಕ ! 

16-04-22 10:24 pm       HK Desk news   ಕರ್ನಾಟಕ

ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೊಸಪೇಟೆಯಲ್ಲಿ ನಡೆಯುತ್ತಿರುವ ಬಿಜೆಪಿ ಕಾರ್ಯಕಾರಿಣಿ ಸಭೆಗೆ ತೆರಳುತ್ತಿದ್ದಾಗ ಕಾರು ಅಪಘಾತ ಆಗಿದ್ದನ್ನು ಕಂಡು ತಮ್ಮ ಸರಕಾರಿ ವಾಹನವನ್ನು ಗಾಯಾಳುಗಳಿಗೆ ಬಿಟ್ಟುಕೊಟ್ಟು ತಾನು ಬೈಕ್‌ನಲ್ಲಿ ತೆರಳಿ ಸುದ್ದಿಯಾಗಿದ್ದಾರೆ. 

ಹೊಸಪೇಟೆ, ಎ.16 : ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೊಸಪೇಟೆಯಲ್ಲಿ ನಡೆಯುತ್ತಿರುವ ಬಿಜೆಪಿ ಕಾರ್ಯಕಾರಿಣಿ ಸಭೆಗೆ ತೆರಳುತ್ತಿದ್ದಾಗ ಕಾರು ಅಪಘಾತ ಆಗಿದ್ದನ್ನು ಕಂಡು ತಮ್ಮ ಸರಕಾರಿ ವಾಹನವನ್ನು ಗಾಯಾಳುಗಳಿಗೆ ಬಿಟ್ಟುಕೊಟ್ಟು ತಾನು ಬೈಕ್‌ನಲ್ಲಿ ತೆರಳಿ ಸುದ್ದಿಯಾಗಿದ್ದಾರೆ. 

ವಿಜಯನಗರ ಜಿಲ್ಲೆಯ ಹೊಸಪೇಟೆಯಲ್ಲಿ ನಡೆಯುತ್ತಿರುವ ಬಿಜೆಪಿ ರಾಜ್ಯ ಕಾರ್ಯ ಕಾರಿಣಿಯಲ್ಲಿ ಭಾಗವಹಿಸಲು ಕಾರಿನಲ್ಲಿ ತೆರಳುತ್ತಿದ್ದರು. ಈ ವೇಳೆ,
ಹೊಸಪೇಟೆ ಹೊರವಲಯದಲ್ಲಿ ಎರಡು ಕಾರುಗಳ ಮಧ್ಯೆ ಅಪಘಾತ ಸಂಭವಿಸಿತ್ತು. ಗಾಯಗೊಂಡಿದ್ದ ಸವಾರರ ಆರೋಗ್ಯ ವಿಚಾರಿಸಿದ ಕೇಂದ್ರ ಸಚಿವೆ, ತಮ್ಮ ವಾಹನದಲ್ಲಿ ಅವರನ್ನು ಆಸ್ಪತ್ರೆಗೆ ದಾಖಲಿಸುವ ವ್ಯವಸ್ಥೆ ಮಾಡಿದರು.

accident between two cars; Union Minister Shobha Karandlaje helps them  irshadJobs | irshad Jobs

ರಾಜ್ಯ ಕಾರ್ಯಕಾರಣಿ ಸಭೆ ನಡೆಯುವ ಜಾಗಕ್ಕೆ ಅಲ್ಲಿಂದ ಐದು ಕಿಮೀ ದೂರ ಇದ್ದುದರಿಂದ ಶೋಭಾ ಕರ‌ಂದ್ಲಾಜೆ ಕಾರ್ಯಕರ್ತರೊಬ್ಬರ ಬೈಕಿನಲ್ಲಿ ಕುಳಿತು ಪ್ರಯಾಣಿಸಿದ್ದಾರೆ. ಸ್ಥಳದಲ್ಲಿದ್ದ ಬೈಕ್ ಸವಾರನ ಜೊತೆಗೆ ಹಿಂಬದಿಯಲ್ಲಿ ಕುಳಿತು ಬಿಜೆಪಿ ಕಾರ್ಯಕಾರಿಣಿ ಸಭೆ ತಲುಪಿದ್ದು ಸಚಿವರ ಮಾನವೀಯ ಕಾರ್ಯಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.

The Central Minister Shobha Karandlaje is going to have a car accident when the BJP efficiator walked to the BJP efficiency meeting in the Hidepace and gave his government vehicle into the bike.