ಮದುವೆ ಮುಗಿಸಿ ಹಿಂತಿರುಗುತ್ತಿದ್ದ ಬೊಲೆರೋ ಅಪಘಾತ ; ಆರು ಜನ ಸ್ಥಳದಲ್ಲೇ ಸಾವು ! ಹುಣಸೂರು ಬಳಿ ಭೀಕರ ಘಟನೆ 

20-04-22 09:25 pm       HK Desk news   ಕರ್ನಾಟಕ

ಮದುವೆ ಮುಗಿಸಿ ಹಿಂದೆ ತೆರಳುತ್ತಿದ್ದಾಗ ಬೊಲೆರೋ ವಾಹನ ಮರಕ್ಕೆ ಡಿಕ್ಕಿಯಾಗಿ ಆರು ಮಂದಿ ಸಾವನ್ನಪ್ಪಿದ ಘಟನೆ ಮೈಸೂರು - ಕೊಡಗು ಹೆದ್ದಾರಿ ಹುಣಸೂರು ಬಳಿ ನಡೆದಿದೆ. 

ಮಡಿಕೇರಿ, ಎ.20: ಮದುವೆ ಮುಗಿಸಿ ಹಿಂದೆ ತೆರಳುತ್ತಿದ್ದಾಗ ಬೊಲೆರೋ ವಾಹನ ಮರಕ್ಕೆ ಡಿಕ್ಕಿಯಾಗಿ ಆರು ಮಂದಿ ಸಾವನ್ನಪ್ಪಿದ ಘಟನೆ ಮೈಸೂರು - ಕೊಡಗು ಹೆದ್ದಾರಿ ಹುಣಸೂರು ಬಳಿ ನಡೆದಿದೆ. 

ಮೃತರು ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲ್ಲೂಕಿನ ಪಾಲಿಬೆಟ್ಟ ಮೂಲದವರಾಗಿದ್ದು ಸಂಬಂಧಿಕರ ಮದುವೆಗಾಗಿ ಮೈಸೂರಿಗೆ ಬಂದಿದ್ದರು. ಮದುವೆ ಮುಗಿಸಿ ವಾಪಸ್ ತೆರಳುತ್ತಿದ್ದಾಗ ಚಾಲಕನ ನಿಯಂತ್ರಣ ತಪ್ಪಿ ಬೊಲೆರೋ ಮರಕ್ಕೆ ಡಿಕ್ಕಿ ಹೊಡೆದಿದೆ. 

ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿದ್ದು ಇನ್ನಿಬ್ಬರು ಆಸ್ಪತ್ರೆಯಲ್ಲಿ ಸಾವು ಕಂಡಿದ್ದಾರೆ. ರಾಜೇಶ್, ಅನಿಲ್, ಸಂತೋಷ್, ವಿನುತ್, ದಯಾನಂದ್, ಬಾಬು ಮೃತರು.
ಇಬ್ಬರಿಗೆ ಗಂಭೀರ ಗಾಯಗಳಾಗಿದ್ದು ಹುಣಸೂರಿನ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. 


ಡಿಕ್ಕಿಯಾದ ರಭಸಕ್ಕೆ ಬೊಲೆರೋ ವಾಹನ ಸಂಪೂರ್ಣ ನಜ್ಜುಗುಜ್ಜಾಗಿದೆ. ಹುಣಸೂರಿನಿಂದ ಪಾಲಿಬೆಟ್ಟ ಕಡೆಗೆ ತೆರಳುತ್ತಿದ್ದಾಗ ಗ್ರಾಮಾಂತರ ಠಾಣೆ ವ್ಯಾಪ್ತಿಯ ಅರಸು ಕಲ್ಲಹಳ್ಳಿ ಬಳಿ ಅವಘಡ ನಡೆದಿದೆ.

6 people were killed when a Bolero vehicle crashed into a tree near Kalpetta in Taluk on Wednesday .The deceased are Anil, Santosh, Vinut, Rajesh, Dayananda and Babu of Palibetta village of Virajpet Taluk in Kodagu district.The accident occurred when he was returning from Hunsur on his way back from a wedding ceremony, police said.