ಬ್ರೇಕಿಂಗ್ ನ್ಯೂಸ್
04-05-22 02:23 pm Bangalore Correspondent ಕರ್ನಾಟಕ
ಬೆಂಗಳೂರು, ಮೇ 4 : ಪಿಎಸ್ಐ ಅಕ್ರಮ ನೇಮಕಾತಿ ಹಗರಣದಲ್ಲಿ ಹೆಸರು ಕೇಳಿಬಂದಿರುವ ಸಚಿವ ಅಶ್ವತ್ಥ ನಾರಾಯಣ ವಿರುದ್ಧ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಮತ್ತೆ ವಾಗ್ದಾಳಿ ನಡೆಸಿದ್ದಾರೆ. ಅನುಮಾನವೇ ಇಲ್ಲ.. ಕರ್ನಾಟಕ ರಾಜಕಾರಣದಲ್ಲಿರುವ ಮೋಸ್ಟ್ ಕರೆಪ್ಟ್ ಮಿನಿಸ್ಟರ್ ಆತ. ಅದರಲ್ಲಿ ಅನುಮಾನ ಪಡುವ ಅಗತ್ಯವೇ ಇಲ್ಲ ಎಂದು ಡಿಕೆಶಿ ಹೇಳಿದ್ದಾರೆ.
ಸುಮ್ಮನೆ ಬಂದು ನಾನು ನೋಡೋಕೆ ಬ್ರಾಹ್ಮಣ ತರ ಇದ್ದೀನಿ, ಬಹಳ ಶುದ್ಧ ರಾಜಕಾರಣಿ ಅಂತ ಹೇಳಿಕೊಳ್ಳೋದು, ಪೋಸು ಕೊಡೋದು. ಇದೆಲ್ಲಾ ಯಾಕೆ ಬೇಕು. ಇಷ್ಟು ದಿನ ಇವರೇನು ಅಂತ ಎಲ್ಲಾ ಹೊರಗೆ ಬರ್ತಿದೆ. ಇವರ ನಡವಳಿಕೆ, ಮಾತನಾಡುವ ಶೈಲಿ ನೋಡಿದರೆ ಸಂಸ್ಕೃತಿ ಇರುವ ಯಾರು ಕೂಡ ಆ ಕೆಲಸ ಮಾಡುವುದಿಲ್ಲ ಎಂದಿದ್ದಾರೆ.

ಅದೇನೋ ಎಲ್ಲವನ್ನೂ ಬಿಚ್ತೀನಿ ಅಂತ ಹೇಳಿದ್ದಾರಲ್ಲ, ಎಲ್ಲವನ್ನು ಬಿಚ್ಚಿಡಲಿ. ಯಾರು ಬೇಡ ಎಂದವರು. ತಡ ಮಾಡೋದು ಯಾಕೆ, ಬಿಚ್ಚುವುದನ್ನು ಬಿಚ್ಚಿಡಲಿ ಎಂದು ಅಶ್ವತ್ಥ ನಾರಾಯಣ ಹೆಸರೇಳದೆ ಡಿಕೆಶಿ ಟಾಂಗ್ ನೀಡಿದ್ದಾರೆ. ಇವರೆಲ್ಲ ನಮ್ಮ ಜಿಲ್ಲೆಯನ್ನು ಶುದ್ಧೀಕರಣ ಮಾಡೋಕೆ ಬಂದವರು. ಹಿಂದೆ ದೇವೇಗೌಡರು, ಆನಂತರ ಕುಮಾರಸ್ವಾಮಿ, ಆಮೇಲೆ ನಾವು ಬಂದು ಏನೂ ಮಾಡೋಕ್ಕಾಗಿಲ್ಲ. ಈಗ ಇವರು ಬಂದಿದ್ದಾರಲ್ಲಾ, ಕ್ಲೀನ್ ಮಾಡಲಿ ಬಿಡಿ. ರಾಮನಗರದ ಜನ ಗಂಡಸ್ತನ ಇಲ್ಲದವರು ಎಂದಿದ್ರು. ಇದಕ್ಕೆ ಅನಿತಕ್ಕ, ಬಿಜೆಪಿ ಮಿನಿಸ್ಟರ್ ಗಳು ಸಾಕ್ಷಿ. ನಾವೆಲ್ಲ ಯಾರೂ ಗಂಡಸರಲ್ಲ, ಟೆಸ್ಟ್ ಮಾಡ್ಕೋಬೇಕು. ಸೀರೆ ಕೊಟ್ಟರೆ ಉಟ್ಕೋತೀವಿ ಎಂದು ವ್ಯಂಗ್ಯ ಧಾಟಿಯಲ್ಲಿ ಸಚಿವ ಅಶ್ವತ್ಥ ನಾರಾಯಣ ವಿರುದ್ಧ ಕಿಡಿಕಾರಿದರು.

![]()
ಸಾಕಷ್ಡು ಜನ ಮೊದಲ ರ್ಯಾಂಕ್ ಪಡೆದಿದ್ದಾರೆ. ನಮ್ಮ ಜಿಲ್ಲೆಯವರೇ ನಾಲ್ಕೈದು ಜನ ಇದ್ದಾರೆ. ಈಗ ಅವರು ಒಳಗೆ ಹೋಗಿದ್ದಾರೆ. ನಮಗೆ ಬೇಕಾದವರೇ ಅವರೆಲ್ಲ. ಸಹಾಯ ಮಾಡಿದವರಲ್ಲಿ ಮಂತ್ರಿಗಳಿರಬಹುದು ಅಥವಾ ಬೇರೆ ಯಾರಾದ್ರೂ ಆಗಿರಲು ಬಹುದು. ಅಂಗಡಿ ಓಪನ್ ಮಾಡಿದ್ರೆ ವ್ಯಾಪಾರಕ್ಕೆ ಬರ್ತಾರೆ. ಅಂಗಡಿಯೇ ಓಪನ್ ಇಲ್ಲದೆ ಇದ್ದರೆ ಖರೀದಿಗೆ ಬರ್ತಾ ಇದ್ರಾ..? ಈ ರೀತಿ ಮಾಡಬಹುದು ಅಂತ ಪ್ರಭಾವಿಗಳು ತಿಳಿಸಿರುವ ಕಾರಣ ಮನೆ ಮಠ, ಆಸ್ತಿ ಪಾಸ್ತಿ ಮಾರಿ ಕೆಲವರು ತಗ್ಲಾಕೊಂಡಿದ್ದಾರೆ. ಈಗ ಲಂಚ ಕೊಟ್ಟಚನು ನಾನು ಕೊಟ್ಟೆ ಅಂತ ಯಾರು ಹೇಳಲ್ಲ. ತೆಗೆದುಕೊಂಡವನು ಹೇಳಲ್ಲ ಎಂದು ಪಿಎಸ್ಐ ಹಗರಣದ ಬಗ್ಗೆ ಡಿಕೆಸಿ ಶಿವಕುಮಾರ್ ಖಾರವಾದ ಪ್ರತಿಕ್ರಿಯೆ ನೀಡಿದ್ದಾರೆ.
KPCC president DK Shivakumar on Monday made a serious allegation against higher education minister CN Asawath Narayan that his relative was involved in the police sub-inspector recruitment scam and accepted money from three candidates from Magadi taluk to ensure their selection.
25-07-26 03:06 pm
HK News Staffer
ಧಾರವಾಡ ; ಮಗ ರೈಲು ಹಳಿಗೆ ಬಿದ್ದು ಆತ್ಮಹತ್ಯೆ, ಸಾವಿ...
23-07-26 08:05 pm
Soujanya case: ಸೌಜನ್ಯ ಪ್ರಕರಣದಲ್ಲಿ ಸಿಬಿಐಗೆ ತರಾ...
22-07-26 06:00 pm
ಸಚಿವ ಸಂಪುಟಕ್ಕೆ ಖರ್ಗೆ, ಡಿಕೆ, ಸಿದ್ದರಾಮಯ್ಯ ಪ್ರತ್...
19-07-26 08:34 pm
ಡಿಕೆಶಿ ಸಂಪುಟ ವಿಸ್ತರಣೆಗೆ ಮತ್ತೆ ಬ್ರೇಕ್ ; 55ರ ಒಳ...
17-07-26 02:55 pm
26-07-26 01:32 pm
HK News Staffer
ವಿದ್ಯಾರ್ಥಿಗಳ ಪ್ರತಿಭಟನೆ ಕಿಚ್ಚು ; ರಾಷ್ಟ್ರೀಯ ಪರೀ...
25-07-26 07:34 pm
ಅಂತೂ ವಿದ್ಯಾರ್ಥಿಗಳ ಪ್ರತಿಭಟನೆಗೆ ಮಣಿದ ಕೇಂದ್ರ ಸರ್...
25-07-26 03:07 pm
NEET ಪ್ರತಿಭಟನೆ ಹಿಂಸಾಚಾರ ; 117 ಶಂಕಿತರ ಫೋಟೋ ಬಿಡ...
24-07-26 03:25 pm
ಪ್ರಶ್ನೆಪತ್ರಿಕೆ ಸೋರಿಕೆ ; ಕೇಂದ್ರ ಸರ್ಕಾರದ ಭರವಸೆಗ...
24-07-26 11:18 am
26-07-26 09:57 pm
HK News Desk
ಕದ್ರಿ ಯುದ್ಧ ಸ್ಮಾರಕದ ಬಳಿ ಟಿ-55 ಯುದ್ಧ ಟ್ಯಾಂಕರ್...
26-07-26 09:14 pm
ಎಸ್ಐಆರ್ ನಿಂದ ಯಾರೂ ಮತದಾನದ ಹಕ್ಕು ಕಳೆದುಕೊಳ್ಳುವುದ...
25-07-26 07:32 pm
ಎಸ್ಐಆರ್ ನಿಂದ ಯಾರೂ ಮತದಾನದ ಹಕ್ಕು ಕಳೆದುಕೊಳ್ಳುವುದ...
25-07-26 07:32 pm
ಹವಾಮಾನ ಇಲಾಖೆಯ ಅವೈಜ್ಞಾನಿಕ ವರದಿ, ತರಾತುರಿಯ ರಜೆ ಘ...
25-07-26 02:42 pm
26-07-26 04:30 pm
HK News Staffer
ಶಾಲಾ ಬಸ್ಸಿಗೆ ಮರ ಬಿದ್ದು ಮಗು ಸಾವು ಪ್ರಕರಣ ; ಬಸ್ಸ...
25-07-26 07:36 pm
Vikky Bappal, Mangalore Crime: ಕುಖ್ಯಾತ ರೌಡಿ ವ...
25-07-26 03:50 pm
ಡೇಟಿಂಗ್ ಆ್ಯಪ್ನಲ್ಲಿ ಪರಿಚಯವಾಗಿದ್ದ ಯುವತಿಯಿಂದ ಬ್ಲ...
24-07-26 08:57 pm
ಪಿಡಿಓ ಹುದ್ದೆ ಕೊಡಿಸುವುದಾಗಿ ಹೇಳಿ 26 ಲಕ್ಷ ಪೀಕಿಸಿ...
24-07-26 08:31 pm