ಅಪಘಾತಕ್ಕೆ ತುತ್ತಾಗಿದ್ದ ಮರಿ ಚಿರತೆಯನ್ನು ನಡುರಸ್ತೆಯಲ್ಲಿ ಎಳೆದಾಡಿದ ಕಾಡು ಹಂದಿಗಳು ; ವಿಡಿಯೋ ವೈರಲ್ ! 

06-05-22 04:44 pm       HK Desk News   ಕರ್ನಾಟಕ

ಅಪಘಾತದಲ್ಲಿ ಗಾಯಗೊಂಡು ಬಿದ್ದಿದ್ದ ಚಿರತೆ ಮರಿಯೊಂದನ್ನು ನಡುರಸ್ತೆಯಲ್ಲಿ ಕಾಡುಹಂದಿಗಳು ಎಳೆದಾಡುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಭಾರಿ ಸದ್ದು ಮಾಡುತ್ತಿದೆ. 

ಮೈಸೂರು, ಮೇ 6 : ಅಪಘಾತದಲ್ಲಿ ಗಾಯಗೊಂಡು ಬಿದ್ದಿದ್ದ ಚಿರತೆ ಮರಿಯೊಂದನ್ನು ನಡುರಸ್ತೆಯಲ್ಲಿ ಕಾಡುಹಂದಿಗಳು ಎಳೆದಾಡುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಭಾರಿ ಸದ್ದು ಮಾಡುತ್ತಿದೆ. 

ತಮಿಳುನಾಡಿನ ಪಳನಿ - ಕೊಡೈಕೆನಾಲ್ ಅಥವಾ ಆಸನೂರು - ಕೊಳ್ಳೇಗಾಲದ ರಸ್ತೆಯಲ್ಲಿ ಘಟನೆ ಚಿತ್ರೀಕರಣ ಆಗಿದೆ ಎಂದು ಹೇಳಲಾಗುತ್ತಿದೆ. ನಿಖರವಾಗಿ ಎಲ್ಲಿ ಘಟನೆ ನಡೆದಿದೆ ಎಂಬುದರ ಬಗ್ಗೆ ಮಾಹಿತಿ ತಿಳಿದುಬಂದಿಲ್ಲ.

ರಸ್ತೆ ಅಪಘಾತದಲ್ಲಿ ಪೆಟ್ಟು ಬಿದ್ದು ಅರೆ ಪ್ರಜ್ಞೆಯ ಸ್ಥಿತಿಯಲ್ಲಿದ್ದ ಚಿರತೆ ಮರಿಯನ್ನು ಮೂರು ಕಾಡು ಹಂದಿಗಳು ನಡುರಸ್ತೆಯಲ್ಲಿ ಎಳೆದಾಡಿ ತಿನ್ನಲು ಯತ್ನಿಸುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ. ಒಂದು ಇನ್ನೊಂದನ್ನು ಬೇಟೆಯಾಡಿ ಬದುಕುವ ವನ್ಯಜೀವಿಗಳ ಸಹಜ ಬದುಕನ್ನು ಜಾಲತಾಣದಲ್ಲಿ ನೋಡಿ ಜನರು ಅವಾಕ್ಕಾಗಿದ್ದಾರೆ.

ಆಸನೂರು - ಕೊಳ್ಳೇಗಾಲ ರಸ್ತೆಯಲ್ಲಿ ನಡೆದಿದೆ ಎಂದು ರಾಜ್ಯದ ಅರಣ್ಯ ಇಲಾಖೆ, ಅರಣ್ಯಾಧಿಕಾರಿಗಳನ್ನು ಟ್ಯಾಗ್ ಮಾಡಿ ಜಾಲತಾಣದಲ್ಲಿ ಕೆಲವರು ಈ ವಿಡಿಯೋ ಟ್ವೀಟ್​ ಮಾಡಿದ್ದಾರೆ.

Disturbing Visuals

Claimed to be from Palani to Kodaikanal road. Probable reason might be RTA. pic.twitter.com/z79BNm4lsZ

— WildLense® Eco Foundation 🇮🇳 (@WildLense_India) May 5, 2022

 

The Western Ghats range runs down through the South West Side  of India’s treasure of wildlife. It has an impressive number of species, mammals, plants, and wildlife sanctuaries. Last night a local journalist reported about the death of 1-year-old female leopard through a car on 60 km road from Palani to Kodaikanal.