ಧ್ವನಿವರ್ಧಕ ಬಳಕೆ ; 2002ರ ಆದೇಶ ಪಾಲನೆಗೆ ಪ್ರತ್ಯೇಕ ಸುತ್ತೋಲೆ ಹೊರಡಿಸುತ್ತೇವೆ ಎಂದ ಸಿಎಂ ಬೊಮ್ಮಾಯಿ

09-05-22 10:36 pm       Bangalore Correspondent   ಕರ್ನಾಟಕ

ಮಸೀದಿ ಧ್ವನಿವರ್ಧಕದ ವಿಚಾರ ವಿವಾದ ಎಬ್ಬಿಸುತ್ತಿದ್ದಂತೆ ಸಿಎಂ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯಿಸಿದ್ದು ಶೀಘ್ರದಲ್ಲಿಯೇ ಈ ಬಗ್ಗೆ ಪ್ರತ್ಯೇಕ ಆದೇಶ ಹೊರಡಿಸಲಾಗುವುದು ಎಂದು ತಿಳಿಸಿದ್ದಾರೆ.

ಬೆಂಗಳೂರು, ಮೇ 9 : ಮಸೀದಿ ಧ್ವನಿವರ್ಧಕದ ವಿಚಾರ ವಿವಾದ ಎಬ್ಬಿಸುತ್ತಿದ್ದಂತೆ ಸಿಎಂ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯಿಸಿದ್ದು ಶೀಘ್ರದಲ್ಲಿಯೇ ಈ ಬಗ್ಗೆ ಪ್ರತ್ಯೇಕ ಆದೇಶ ಹೊರಡಿಸಲಾಗುವುದು ಎಂದು ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಬೊಮ್ಮಾಯಿ, ಧ್ವನಿವರ್ಧಕಗಳ ಬಳಕೆ ಬಗ್ಗೆ ಸುಪ್ರೀಂ ಕೋರ್ಟ್ ಆದೇಶವಿದೆ. ಕೋರ್ಟ್ ಆದೇಶದಂತೆ ಕೇಂದ್ರ ಸರ್ಕಾರದ ಸುತ್ತೋಲೆಯೂ ಇದೆ. ಕರ್ನಾಟಕ ಸರ್ಕಾರ 2002ರಲ್ಲಿ ಇದೇ ವಿಚಾರದಲ್ಲಿ ವಿಶೇಷ ಆದೇಶ ಒಂದನ್ನು ಹೊರಡಿಸಿತ್ತು. ಅಂದಿನ ಸರಕಾರ ನೀಡಿದ್ದ 2002ರ ಆದೇಶವನ್ನು ಪಾಲಿಸಬೇಕು ಎಂದು ಇಂದು ನಡೆದ ಅಧಿಕಾರಿಗಳ ಸಭೆಯಲ್ಲಿ ನಿರ್ಧರಿಸಲಾಗಿದೆ ಎಂದರು.

ರಾಜ್ಯ ಸರ್ಕಾರದ ಆದೇಶ 2002ರಲ್ಲಿಯೇ ಸ್ಪಷ್ಟವಾಗಿದ್ದು ಯುಪಿ ಸೇರಿದಂತೆ ಬೇರೆ ರಾಜ್ಯಗಳಲಿಯೂ ಇದೇ ನಿಯಮ ಇದೆ. ಈ ಬಗ್ಗೆ ಪ್ರತ್ಯೇಕ ಆದೇಶವನ್ನು ಸರ್ಕಾರದಿಂದ ಹೊರಡಿಸಲಾಗುವುದು ಎಂದು ಹೇಳಿದರು.

Karnataka Chief Minister Basavaraj Bommai on Monday directed officials to strictly implement the Supreme Court order on the use of loudspeakers. This comes amid calls by Sri Rama Sene activists to play morning prayers and Hanuman Chalisa on loudspeakers at temples, if the government fails to act against loudspeakers in mosques.