ವಿಧಾನ ಪರಿಷತ್ ಏಳು ಸ್ಥಾನಗಳಿಗೆ ಜೂನ್ 3ರಂದು ಚುನಾವಣೆ ; ಮತ್ತೆ ಚಾನ್ಸ್ ಪಡೀತಾರಾ ಲಕ್ಷ್ಮಣ ಸವದಿ, ನಾರಾಯಣ ಸ್ವಾಮಿ ? 

10-05-22 04:01 pm       Bangalore Correspondent   ಕರ್ನಾಟಕ

ಅವಧಿ ಮುಗಿದು ಸ್ಥಾನ ತೆರವಾಗುವ ವಿಧಾನ ಪರಿಷತ್ತಿನ ಏಳು ಸ್ಥಾನಗಳಿಗೆ ಜೂನ್ 3ರಂದು ಚುನಾವಣೆ ನಡೆಸುವುದಾಗಿ ಆಯೋಗ ಹೇಳಿದೆ. ಅದರಂತೆ ಮೇ 17ರಂದು ಅಧಿಸೂಚನೆ ಪ್ರಕಟವಾಗಲಿದ್ದು ನಾಮಪತ್ರ ಸಲ್ಲಿಕೆಗೆ ಮೇ 24 ಕೊನೆಯ ದಿನವಾಗಿರಲಿದೆ.

ಬೆಂಗಳೂರು, ಮೇ 10 : ಅವಧಿ ಮುಗಿದು ಸ್ಥಾನ ತೆರವಾಗುವ ವಿಧಾನ ಪರಿಷತ್ತಿನ ಏಳು ಸ್ಥಾನಗಳಿಗೆ ಜೂನ್ 3ರಂದು ಚುನಾವಣೆ ನಡೆಸುವುದಾಗಿ ಆಯೋಗ ಹೇಳಿದೆ. ಅದರಂತೆ ಮೇ 17ರಂದು ಅಧಿಸೂಚನೆ ಪ್ರಕಟವಾಗಲಿದ್ದು ನಾಮಪತ್ರ ಸಲ್ಲಿಕೆಗೆ ಮೇ 24 ಕೊನೆಯ ದಿನವಾಗಿರಲಿದೆ.

ಲಕ್ಷ್ಮಣ ಸಂಗಪ್ಪ ಸವದಿ, ರಾಮಪ್ಪ ತಿಮ್ಮಾಪುರ್​, ಅಲ್ಲಂ ವೀರಭದ್ರಪ್ಪ, ಹೆಚ್​.ಎಂ.ರಮೇಶ್ ಗೌಡ, ವೀಣಾ ಅಚ್ಚಯ್ಯ, ನಾರಾಯಣ ಸ್ವಾಮಿ ಕೆ.ವಿ, ಲಹರ್ ಸಿಂಗ್ ಸಿರೋಯಾ ಜೂನ್ 14ರಂದು ವಿಧಾನಪರಿಷತ್​ನಿಂದ ನಿವೃತ್ತಿಯಾಗಲಿದ್ದಾರೆ.

ಅಧಿಸೂಚನೆ ದಿನಾಂಕ ಮೇ 17, ನಾಮಪತ್ರಗಳ ಸಲ್ಲಿಕೆಗೆ ಮೇ 24 ಕೊನೆಯ ದಿನವಾಗಲಿದೆ. ಮೇ 25 ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ನಾಮಪತ್ರಗಳನ್ನು ಹಿಂಪಡೆಯಲು ಮೇ 27 ಕೊನೆಯ ದಿನವಾಗಿದೆ. ಜೂನ್ 3ರಂದು ಬೆಳಗ್ಗೆ 9 ಗಂಟೆಯಿಂದ ಸಂಜೆ 4ಗಂಟೆಯವರೆಗೆ ಚುನಾವಣೆ ನಡೆಯಲಿದೆ. ಅದೇ ದಿನ ಸಂಜೆ 5 ಗಂಟೆಗೆ ಮತ ಎಣಿಕೆ ನಡೆಯಲಿದೆ. 

ವಿಧಾನ ಪರಿಷತ್ ಚುನಾವಣೆ ಹಿನ್ನೆಲೆಯಲ್ಲಿ ರಾಜಕೀಯ ಪಕ್ಷಗಳು ಹೊಸ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿದ್ದು ಅದಕ್ಕಾಗಿ ಮತ್ತೆ ಚುನಾವಣೆ ಕಾವೇರಲಿದೆ. ತೆರವಾಗುವ ಸ್ಥಾನಗಳಲ್ಲಿ ಮೂರೂ ಪಕ್ಷದ ಸದಸ್ಯರಿದ್ದಾರೆ.

Biennial Election to the Karnataka Legislative Council by the members of Legislative Assembly (MLAs) will be held on June 3, the Election Commission of India said on Tuesday. The election is necessitated as the term of office of 7 members is going to expire on June 14. The election notification will be issued on May 17, the last date for filing nominations is May 24, and the scrutiny of nominations will take place on the very next day.