ಮಂಡ್ಯದಲ್ಲಿ ದಳಪತಿಗಳ ಮತ್ತೊಂದು ವಿಕೆಟ್ ಔಟ್ ? ಕಾಂಗ್ರೆಸ್ ಕದ ತಟ್ಟಿದ ಪರಿಷತ್ ಸದಸ್ಯ ಮರಿತಿಬ್ಬೇಗೌಡ ; ಬಿರುಕು ಬಿಟ್ಟ ಒಕ್ಕಲಿಗರ ಕೋಟೆ ! 

11-05-22 01:39 pm       Bangalore Correspondent   ಕರ್ನಾಟಕ

ಮಂಡ್ಯದಲ್ಲಿ ಜೆಡಿಎಸ್‌ ಕಡೆಯಿಂದ ಮತ್ತೊಂದು ವಿಕೆಟ್ ಪತನಗೊಳ್ಳುವುದು ಖಚಿತವಾಗಿದೆ. ಪಕ್ಷದ ನಾಯಕತ್ವದ ಬಗ್ಗೆ ಬಹಿರಂಗ ಅಸಮಾಧಾನ ಹೊರಹಾಕಿರುವ ವಿಧಾನ ಪರಿಷತ್‌ ಸದಸ್ಯ ಮರಿತಿಬ್ಬೇಗೌಡ ಪಕ್ಷ ತೊರೆಯುವ ಸುಳಿವು ನೀಡಿದ್ದಾರೆ. ಇದೇ ವೇಳೆ, ಮರಿತಿಬ್ಬೇಗೌಡ ಜೆಡಿಎಸ್ ಬಿಟ್ಟು ಕಾಂಗ್ರೆಸ್‌ ಸೇರಲಿದ್ದಾರೆ ಎನ್ನುವ ಮಾಹಿತಿಗಳಿವೆ. 

ಬೆಂಗಳೂರು, ಮೇ 11 : ಮಂಡ್ಯದಲ್ಲಿ ಜೆಡಿಎಸ್‌ ಕಡೆಯಿಂದ ಮತ್ತೊಂದು ವಿಕೆಟ್ ಪತನಗೊಳ್ಳುವುದು ಖಚಿತವಾಗಿದೆ. ಪಕ್ಷದ ನಾಯಕತ್ವದ ಬಗ್ಗೆ ಬಹಿರಂಗ ಅಸಮಾಧಾನ ಹೊರಹಾಕಿರುವ ವಿಧಾನ ಪರಿಷತ್‌ ಸದಸ್ಯ ಮರಿತಿಬ್ಬೇಗೌಡ ಪಕ್ಷ ತೊರೆಯುವ ಸುಳಿವು ನೀಡಿದ್ದಾರೆ. ಇದೇ ವೇಳೆ, ಮರಿತಿಬ್ಬೇಗೌಡ ಜೆಡಿಎಸ್ ಬಿಟ್ಟು ಕಾಂಗ್ರೆಸ್‌ ಸೇರಲಿದ್ದಾರೆ ಎನ್ನುವ ಮಾಹಿತಿಗಳಿವೆ. 

‘ಜೆಡಿಎಸ್‌ ವರಿಷ್ಠರಾದ ಎಚ್‌.ಡಿ.ದೇವೇಗೌಡ ಹಾಗೂ ಎಚ್‌.ಡಿ.ಕುಮಾರಸ್ವಾಮಿ ಅವರ ಧೋರಣೆಯಿಂದಾಗಿ ಕಳೆದ ನಾಲ್ಕು ವರ್ಷಗಳಿಂದ ನಿತ್ಯವೂ ಕಿರುಕುಳ, ಹಿಂಸೆ ಅನುಭವಿಸುತ್ತಿದ್ದೇನೆ’ ಎಂದು ಮರಿತಿಬ್ಬೇಗೌಡ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ದಳ​ಪ​ತಿ​ಗ​ಳ ವಿರುದ್ಧ ತಿರು​ಗಿ​ಬಿ​ದ್ದಿ​ರುವ ಅವರು, ದಕ್ಷಿಣ ಪದ​ವೀ​ಧರ ಕ್ಷೇತ್ರದ ಚುನಾವ​ಣೆ​ಯಲ್ಲಿ ಜೆಡಿ​ಎಸ್‌ ಅಭ್ಯರ್ಥಿಗೆ ಮತ ಹಾಕ​ದಂತೆ ಬೆಂಬ​ಲಿ​ಗರ ಸಭೆ​ಯಲ್ಲಿ ಮನವಿ ಮಾಡಿದ್ದಾ​ರೆ.

BJP & Congress Want To "finish Off" JD(S), Alleges HD Kumaraswamy

ಮರಿತಿಬ್ಬೇಗೌಡ ಅವರು ಈಗಾಗಲೇ ಕಾಂಗ್ರೆಸ್‌ನಲ್ಲಿ ಒಂದು ಹೆಜ್ಜೆ ಇಟ್ಟಿರುವುದು ಸ್ಪಷ್ಟವಾಗಿದೆ. ಅವರ ಪರಿಷತ್‌ ಸದಸ್ಯತ್ವ ಅವಧಿ 2024ರ ಜೂನ್‌ಗೆ ಮುಗಿಯಲಿದೆ. ಅಲ್ಲಿಯವರೆಗೆ ಕಾಯದೆ ಸದ್ಯದಲ್ಲೇ ರಾಜೀನಾಮೆ ನೀಡಿ ಅಧಿಕೃತವಾಗಿ ಕಾಂಗ್ರೆಸ್‌ ಸೇರ್ಪಡೆಯಾಗಲಿದ್ದಾರೆ. ಈ ಕುರಿತು ಕಾಂಗ್ರೆಸ್‌ ನಾಯಕರೊಂದಿಗೆ ಚರ್ಚೆಯನ್ನೂ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ. 

ಈಗಾಗಲೇ ಮಂಡ್ಯದಲ್ಲಿ ಮಾಜಿ ಸಚಿವ ಎಸ್.ಡಿ ಜಯರಾಂ ಪುತ್ರ ಸೇರಿದಂತೆ ಹಲವರು ಬಿಜೆಪಿ ಸೇರ್ಪಡೆಯಾಗಿದ್ದು ಸದ್ಯದಲ್ಲೇ ಘಟಾನುಘಟಿಗಳು ಜೆಡಿಎಸ್ ತೊರೆದು ಕಮಲ ಮುಡಿಯುವ ಸುಳಿವು ನೀಡಿದ್ದಾರೆ. ಇದೇ ವೇಳೆ, ಪರಿಷತ್ ಹಿರಿಯ ಸದಸ್ಯ ತೆನೆ ಪಕ್ಷ ಬಿಟ್ಟು ಕಾಂಗ್ರೆಸ್ ಸೇರುವ ಮಾತುಗಳು ಕೇಳಿಬಂದಿದ್ದು ಒಕ್ಕಲಿಗರ ಮತ್ತು ಜೆಡಿಎಸ್ ಪಾಲಿನ ಭದ್ರಕೋಟೆಯಲ್ಲಿ ಭಾರೀ ಬಿರುಕು ಎದ್ದಿದೆ.

Expressing disappointment over the party affairs, JD(S) member of the Legislative Council Marithibbe Gowda said on Monday that he was disappointed by the attitude of JD(S) leaders H D Deve Gowda and H D Kumaraswamy over the last four years. Expressing disappointment over the party affairs, JD(S) member of the Legislative Council Marithibbe Gowda said on Monday that he was disappointed by the attitude of JD(S) leaders H D Deve Gowda and H D Kumaraswamy over the last four years.