ಬೆಳಗಾವಿ ; ಮಸೀದಿ ಮೇಲೆ ಕೇಸರಿ ಧ್ವಜ ಹಾರಿಸಿದ ಕಿಡಿಗೇಡಿಗಳು ! ಧ್ವಜ ಇಳಿಸಿದ ಹಿಂದು - ಮುಸ್ಲಿಂ ಹಿರಿಯರು ! 

11-05-22 04:58 pm       HK Desk News   ಕರ್ನಾಟಕ

ಮಸೀದಿ ಆಜಾನ್ ವಿರುದ್ಧ ಅಭಿಯಾನ ಎದ್ದಿರುವಾಗಲೇ ಬೆಳಗಾವಿಯ ಮಸೀದಿ ಒಂದರಲ್ಲಿ ಕಿಡಿಗೇಡಿಗಳು ಕೇಸರಿ ಧ್ವಜ ಹಾರಿಸಿದ ಘಟನೆ ನಡೆದಿದೆ. 

ಬೆಳಗಾವಿ, ಮೇ 11 : ಮಸೀದಿ ಆಜಾನ್ ವಿರುದ್ಧ ಅಭಿಯಾನ ಎದ್ದಿರುವಾಗಲೇ ಬೆಳಗಾವಿಯ ಮಸೀದಿ ಒಂದರಲ್ಲಿ ಕಿಡಿಗೇಡಿಗಳು ಕೇಸರಿ ಧ್ವಜ ಹಾರಿಸಿದ ಘಟನೆ ನಡೆದಿದೆ. 

ಗೋಕಾಕ ತಾಲೂಕಿ ಅರಭಾವಿ ಸಮೀಪದ ಸತ್ತಿಗೇರಿ ಮಡ್ಡಿಯಲ್ಲಿ ಘಟನೆ ನಡೆದಿದೆ.‌ ಇಂದು ಮುಂಜಾನೆ ಸ್ಥಳೀಯರು ನಮಾಜ್ ಗೆ ಬಂದ ವೇಳೆ ಪ್ರಕರಣ ಬೆಳಕಿಗೆ ಬಂದಿದೆ. ಆಬಳಿಕ ಸ್ಥಳದಲ್ಲಿ ಜನರು ಜಮಾಯಿಸಿದ್ದು ಹಿಂದು ಮತ್ತು ಮುಸ್ಲಿಂ ಹಿರಿಯರು ಸೇರಿ ಕೇಸರಿ ಧ್ವಜ ತೆಗೆಸಿದ್ದಾರೆ. 

ಇದೇ ವೇಳೆ, ಕೇಸರಿ ಧ್ವಜ ಹಾರಿಸಿದ ಕಿಡಿಗೇಡಿಗಳ ಬಂಧನಕ್ಕೆ ಸ್ಥಳೀಯರು ಒತ್ತಾಯಿಸಿದ್ದಾರೆ.‌ ಈ ಬಗ್ಗೆ ಘಟಪ್ರಭಾ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Tense situation prevailed after some miscreants hoisted a saffron flag on a mosque in a village in Karnataka's Belagavi district on Wednesday.According to police, the miscreants climbed to the mosque tower and hoisted the flag in the wee hours. The incident came to light in the morning, causing tension in the region.