ಬಿಜೆಪಿ ತೊರೆದು ಮತ್ತೆ ಆರ್ ಜೆಡಿ ಜೊತೆಯಾದ ನಿತೀಶ್ ಕುಮಾರ್ ; ನಾಳೆಯೇ ಪ್ರಮಾಣವಚನ

09-08-22 10:36 pm       HK News Desk   ದೇಶ - ವಿದೇಶ

ಬಿಹಾರದಲ್ಲಿ ಬಿಜೆಪಿ ಜೊತೆಗಿನ ಮೈತ್ರಿ ಕಡಿದುಕೊಂಡ ಬೆನ್ನಲ್ಲೇ ಆರ್ ಜೆಡಿ ಜೊತೆಗೂಡಿ ಸರಕಾರ ರಚಿಸಲು ಜೆಡಿಯು ಮುಂದಾಗಿದೆ. ಬಿಜೆಪಿ ತೊರೆದು ಮುಖ್ಯಮಂತ್ರಿ ಸ್ಥಾನಕ್ಕೆ ರಾಜಿನಾಮೆ ನೀಡಿದ ನಿತೀಶ್ ಕುಮಾರ್ ಅವರಿಗೆ ಆರ್ ಜೆಡಿ ಮತ್ತು ಕಾಂಗ್ರೆಸ್ ಬೆಂಬಲ ನೀಡಿದೆ.

ಪಾಟ್ನಾ, ಆಗಸ್ಟ್ 9: ಬಿಹಾರದಲ್ಲಿ ಬಿಜೆಪಿ ಜೊತೆಗಿನ ಮೈತ್ರಿ ಕಡಿದುಕೊಂಡ ಬೆನ್ನಲ್ಲೇ ಆರ್ ಜೆಡಿ ಜೊತೆಗೂಡಿ ಸರಕಾರ ರಚಿಸಲು ಜೆಡಿಯು ಮುಂದಾಗಿದೆ. ಬಿಜೆಪಿ ತೊರೆದು ಮುಖ್ಯಮಂತ್ರಿ ಸ್ಥಾನಕ್ಕೆ ರಾಜಿನಾಮೆ ನೀಡಿದ ನಿತೀಶ್ ಕುಮಾರ್ ಅವರಿಗೆ ಆರ್ ಜೆಡಿ ಮತ್ತು ಕಾಂಗ್ರೆಸ್ ಬೆಂಬಲ ನೀಡಿದೆ.

ಇದರ ಬೆನ್ನಲ್ಲೇ ಬುಧವಾರ (ಆಗಸ್ಟ್ 10) ಮಧ್ಯಾಹ್ನ 2 ಗಂಟೆ ವೇಳೆಗೆ ಹೊಸತಾಗಿ ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ಆರ್ ಜೆಡಿ ಸಾಮಾಜಿಕ ಜಾಲತಾಣದಲ್ಲಿ ಹೇಳಲಾಗಿದೆ. ಮಾಹಿತಿ ಪ್ರಕಾರ, ನಿತೀಶ್ ಕುಮಾರ್ ಅವರೇ ಮುಖ್ಯಮಂತ್ರಿಯಾಗಲಿದ್ದಾರೆ ಮತ್ತು ಡಿಸಿಎಂ ಆಗಿ ಆರ್ ಜೆಡಿ ಪಕ್ಷದ ತೇಜಸ್ವಿ ಯಾದವ್ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.

2014ರ ವೇಳೆಗೆ ಪ್ರಧಾನಿ ಅಭ್ಯರ್ಥಿಯಾಗಿ ಮೋದಿ ಅವರನ್ನು ಘೋಷಿಸಿದ್ದಕ್ಕಾಗಿ ಬಿಜೆಪಿ ಜೊತೆಗೆ ಮುನಿಸಿಕೊಂಡು ನಿತೀಶ್ ಕುಮಾರ್ ದೂರ ಸರಿದಿದ್ದರು. ಆಮೂಲಕ ಎನ್ ಡಿಎ ಮೈತ್ರಿಯಿಂದಲೂ ಹೊರಕ್ಕೆ ಬಂದಿದ್ದರು. ಆನಂತರ, ಕಾಂಗ್ರೆಸ್ ಜೊತೆ ಸೇರಿ ಮಹಾಮೈತ್ರಿಕೂಟ ರಚಿಸಿದ್ದರು. 2015ರಲ್ಲಿ ಆರ್ ಜೆಡಿ ಜೊತೆ ಸೇರಿ ಸರಕಾರವನ್ನೂ ರಚಿಸಿದ್ದರು. 2017ರಲ್ಲಿ ಆರ್ ಜೆಡಿ ವಿರುದ್ಧ ಭ್ರಷ್ಟಾಚಾರ ಆರೋಪ ಹೊರಿಸಿ ಮತ್ತೆ ಹೊರಬಂದಿದ್ದರು. ಆನಂತರ, ಬಿಜೆಪಿ ಜೊತೆ ಸೇರಿ ಸರಕಾರ ರಚಿಸಿದ್ದರು. ಈಗ ಮತ್ತೆ ಬಿಜೆಪಿ ವಿರುದ್ಧ ಹರಿಹಾಯ್ದಿದ್ದು, ರಾಜ್ಯದಲ್ಲಿ ಜೆಡಿಯು ಪಕ್ಷವನ್ನು ಒಡೆಯಲು ಬಿಜೆಪಿ ಮುಂದಾಗಿದೆ ಎಂದು ಆರೋಪಿಸಿದ್ದಾರೆ. ಅಲ್ಲಿ ಚುನಾವಣೆಗೆ ಕೆಲವೇ ತಿಂಗಳು ಇರುವಾಗ ಇಂತಹ ಬೆಳವಣಿಗೆ ಆಗಿರುವುದು ಬಿಜೆಪಿ ಪಾಲಿಗೆ ಹಿನ್ನಡೆಯಾಗಿದೆ.

In fast-moving political developments in Bihar, Nitish Kumar on Tuesday resigned as Chief Minister of Bihar and submitted a support letter from seven parties and one Independent to Governor Phagu Chauhan and staked claim to form a new government in the state. JD(U) leader Nitish Kumar has split with ally BJP for the second time in eight years and said, “All MPs and MLAs are at a consensus that we should leave the BJP-led NDA coalition.” Before walking out of the alliance, a meeting of JD(U) MPs and MLAs was held at Nitish Kumar’s official residence, while a parallel meeting of the opposition RJD legislators was also convened by party leader Tejashwi Yadav at his mother Rabri Devi’s Circular Road bungalow in Patna.