ಬ್ರೇಕಿಂಗ್ ನ್ಯೂಸ್
12-08-22 10:31 pm HK News Desk ದೇಶ - ವಿದೇಶ
ನವದೆಹಲಿ, ಆಗಸ್ಟ್ 12 : ದೆಹಲಿಯ ಜನನಿಬಿಡ ರಸ್ತೆಯಲ್ಲಿ ಸಾರ್ವಜನಿಕರ ಕಣ್ಣೆದುರೇ ಹೋಟೆಲ್ ಮ್ಯಾನೇಜ್ಮೆಂಟ್ ವಿದ್ಯಾರ್ಥಿಯೊಬ್ಬನನ್ನು ಕೊಚ್ಚಿ ಕೊಂದ ಘಟನೆ ನಡೆದಿದ್ದು ಸಿಸಿಟಿವಿಯಲ್ಲಿ ಹತ್ಯೆಯ ದೃಶ್ಯ ದಾಖಲಾಗಿದೆ. ದಕ್ಷಿಣ ದೆಹಲಿಯ ಮಾಳವೀಯ ನಗರದ ಮಾರುಕಟ್ಟೆಯಲ್ಲಿ ಘಟನೆ ನಡೆದಿದೆ.
25 ವರ್ಷದ ಮಯಾಂಕ್ ಪವಾರ್ ಎಂಬಾತ ಕೊಲೆಯಾದ ವ್ಯಕ್ತಿ. ಈತ ಸ್ನೇಹಿತನ ಜತೆ ಮಾರುಕಟ್ಟೆಯಲ್ಲಿ ಇದ್ದ ವೇಳೆ, ಚಾಕು ಹಿಡಿದ ನಾಲ್ಕೈದು ಮಂದಿ ದುಷ್ಕರ್ಮಿಗಳು ಓಡಿ ಬಂದಿದ್ದು ಬೈದಾಡುತ್ತಲೇ ಚೂರಿಯಿಂದ ಇರಿದಿದ್ದಾರೆ.
ಆಗಸ್ಟ್ 11ರಂದು ಸಂಜೆ 7ರ ಸುಮಾರಿಗೆ ಮಾಳವೀಯ ನಗರದ ಬೇಗುಂಪುರದ ಕಿಲಾದಲ್ಲಿ ಇಬ್ಬರೂ ಕುಳಿತಿದ್ದೆವು. ಇದ್ದಕ್ಕಿದ್ದಂತೆ ಬಂದ 4-5 ಅಪರಿಚಿತ ವ್ಯಕ್ತಿಗಳು ಮಯಾಂಕ್ ಜತೆ ವಾಗ್ವಾದ ಆರಂಭಿಸಿದ್ದರು ಎಂದು ಆತನ ಸ್ನೇಹಿತ ವಿಕಾಸ್ ಪನ್ವಾರ್ ಪೊಲೀಸರಿಗೆ ತಿಳಿಸಿದ್ದಾನೆ. ಇಬ್ಬರೂ ಅಲ್ಲಿಂದ ಎದ್ದು ಓಡಲು ಪ್ರಯತ್ನಿಸಿದಾಗ ಆರೋಪಿಗಳು ಕಲ್ಲುಗಳನ್ನು ಎಸೆದಿದ್ದಾರೆ. ಆದರೆ ಮಯಾಂಕ್ನನ್ನು ಬೆನ್ನಟ್ಟಿ ಹಿಡಿದ ಆರೋಪಿಗಳು, ಹಲವು ಬಾರಿ ಇರಿದು ಕೊಂದಿದ್ದಾರೆ. ಮಾರುಕಟ್ಟೆಯಲ್ಲೇ ಘಟನೆ ನಡೆದಿದ್ದು ಪಾದಚಾರಿಗಳಾಗಲೀ ಮತ್ತು ಇತರೇ ವಾಹನ ಸವಾರರಾಗಲೀ ದಾಳಿಯನ್ನು ತಡೆಯಲು ಪ್ರಯತ್ನ ಮಾಡಲಿಲ್ಲ. ಮಯಾಂಕ್ಗೆ ಅನೇಕ ಬಾರಿ ಇರಿದ ಬಳಿಕ ದುಷ್ಕರ್ಮಿಗಳು ಅಲ್ಲಿಂದ ಪರಾರಿಯಾಗಿದ್ದಾರೆ. ಕೆಲವರ ಸಹಾಯ ಪಡೆದು ಮಯಾಂಕ್ ನನ್ನು ಸ್ನೇಹಿತ ವಿಕಾಸ್, ಏಮ್ಸ್ಗೆ ಸಾಗಿಸಿದ್ದಾನೆ. ಅಲ್ಲಿ ಚಿಕಿತ್ಸೆ ವೇಳೆ ಮಯಾಂಕ್ ಮೃತೊಟ್ಟಿದ್ದಾನೆ. ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದು, ಸಿಸಿಟಿವಿ ದೃಶ್ಯಗಳಲ್ಲಿ ಕಾಣಿಸಿಕೊಂಡ ಆರೋಪಿಗಳ ಗುರುತು ಪತ್ತೆ ಮಾಡಿದ್ದಾರೆ.
A 25-year-old man was stabbed to death in South Delhi’s Malviya Nagar on Thursday evening. CCTV footage shows the victim, Mayank Panwar, being attacked by a group of assailants while passersby look on.According to police, they received a call about the incident which took place near gate no 3 at the Begumpur DDA Market. They found that the victim was taken to AIIMS Trauma Centre, where he succumbed to injuries.
07-05-25 04:07 pm
Bangalore Correspondent
ಭಾರತ - ಪಾಕ್ ಮಧ್ಯೆ ಉದ್ವಿಗ್ನ ಸ್ಥಿತಿ ; ಮೇ 7 ರಂದು...
06-05-25 11:23 pm
Mysuru, Prison, Arrest, Siddaramaiah: ಬೆಳಗಾವಿ...
06-05-25 09:38 pm
ಓಬಳಾಪುರಂ ಅಕ್ರಮ ಮೈನಿಂಗ್ ಪ್ರಕರಣ ; ಮಾಜಿ ಸಚಿವ ಗಾಲ...
06-05-25 08:18 pm
Hubballi Accident, Sagara, Five Killed: ಹುಬ್ಬ...
06-05-25 01:35 pm
07-05-25 10:45 pm
HK News Desk
Operation Sindoor: ಸೇನಾ ದಾಳಿಗೆ ‘ಆಪರೇಶನ್ ಸಿಂಧೂ...
07-05-25 10:28 pm
Gunfire at Border; ಗಡಿಯಲ್ಲಿ ಗುಂಡಿನ ಮೊರೆತ ; ಕಾ...
07-05-25 06:14 pm
Kasaragod Toll, Kumbla: ತಲಪಾಡಿ – ಚೆರ್ಕಳ ಆರು ಪ...
07-05-25 12:20 pm
India strikes terror camps in Pak; ಪಾಕಿಸ್ತಾನದ...
07-05-25 09:54 am
07-05-25 10:30 pm
Mangalore Correspondent
Operation Sindhoor, MP Brijesh Chowta, Manga...
07-05-25 03:36 pm
Hindu Maha Sabha, Mangalore, Rajesh Pavitran:...
07-05-25 02:36 pm
Mangalore, Satish Kumapla, U T Khader: ಚಿಕ್ಕಮ...
06-05-25 06:36 pm
Suhas Shetty Murder, Bommai, Dinesh Gundurao:...
06-05-25 06:17 pm
03-05-25 02:16 pm
Mangalore Correspondent
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm
Mangalore Mudipu Murder, Mob, Police, Crime:...
29-04-25 09:59 pm