ಬ್ರೇಕಿಂಗ್ ನ್ಯೂಸ್
08-09-22 09:16 pm HK News Desk ದೇಶ - ವಿದೇಶ
ಮುಂಬೈ, ಸೆ.8: ಟಾಟಾ ಸನ್ಸ್ ಕಂಪನಿಯ ಮಾಜಿ ಅಧ್ಯಕ್ಷ ಸೈರಸ್ ಮಿಸ್ತ್ರಿ ಸಾವಿಗೆ ಕಾರಣವಾದ ಅಪಘಾತದಲ್ಲಿ ಲಕ್ಸುರಿ ಕಾರು ತಯಾರಕ ಕಂಪನಿ ಮರ್ಸಿಡಿಸ್, ತನಿಖಾ ವರದಿಯನ್ನು ನೀಡಿದೆ. ಅಪಘಾತ ಆಗೋದಕ್ಕೂ ಮುನ್ನ ಕಾರು 100 ಕಿಮೀ ವೇಗದಲ್ಲಿ ಚಲಿಸುತ್ತಿತ್ತು. ಕೇವಲ 5 ಸೆಕೆಂಡ್ ಮುನ್ನ ಬ್ರೇಕ್ ಅದುಮಲಾಗಿತ್ತು. ಅದರಿಂದಾಗಿ ನಿಯಂತ್ರಣ ತಪ್ಪಿ ಅಪಘಾತ ಆಗಿತ್ತು ಎಂದು ವರದಿಯಲ್ಲಿ ಹೇಳಿದೆ.
ಲಕ್ಸುರಿ ಕಾರು ಮರ್ಸಿಡಿಸ್ ಬೆಂಜ್ ನಲ್ಲಿ ಪ್ರಯಾಣಿಸುತ್ತಿದ್ದಾಗ ದೇಶದ ಹೆಸರಾಂತ ಉದ್ಯಮಿಯೊಬ್ಬರು ಸಾವನ್ನಪ್ಪಿದ್ದು ಭಾರೀ ಚರ್ಚೆಗೂ ಕಾರಣವಾಗಿತ್ತು. ಅಂಥ ಲಕ್ಸುರಿ ಕಾರಿನಲ್ಲಿಯೂ ಅಪಘಾತದ ವೇಳೆ ಸಾವು ತಡೆಯಬಲ್ಲ ಸಾಧನೆ ಇಲ್ಲವೇ ಎಂದು ಪ್ರಶ್ನೆ ಕೇಳಿಬಂದಿತ್ತು. ಹೀಗಾಗಿ ಕಾರು ತಯಾರಕ ಕಂಪನಿ, ಅಪಘಾತದ ಬಗ್ಗೆ ತಾಂತ್ರಿಕ ತನಿಖೆ ನಡೆಸಿ ವರದಿಯನ್ನು ಪಾಲ್ಘಾರ್ ಪೊಲೀಸರಿಗೆ ನೀಡಿದೆ.

ಸೈರಸ್ ಮಿಸ್ತ್ರಿ ಪ್ರಯಾಣಿಸುತ್ತಿದ್ದ ಕಾರನ್ನು ಮುಂಬೈನ ವೈದ್ಯೆ ಅನಾಹಿತಾ ಪಾಂಡೋಲೆ ಚಲಾಯಿಸುತ್ತಿದ್ದರು. ಸೈರಸ್ ಮಿಸ್ತ್ರಿ ಮತ್ತು ಜಹಾಂಗೀರ್ ಪಾಂಡೋಲೆ ಅಪಘಾತದಲ್ಲಿ ಮೃತಪಟ್ಟಿದ್ದರು. ಇವರಿಬ್ಬರು ಕೂಡ ಒಂದೇ ಬದಿಯಲ್ಲಿ ಹಿಂದು ಮುಂದಿನ ಸೀಟಿನಲ್ಲಿ ಕುಳಿತಿದ್ದರು. 100 ಕಿಮೀ ವೇಗದಲ್ಲಿ ಕಾರು ಚಲಾಯಿಸುತ್ತಿದ್ದಾಗಲೇ ನಿಯಂತ್ರಣ ತಪ್ಪಿದ್ದು ಡ್ರೈವರ್ ಬ್ರೇಕ್ ಅದುಮಿದ್ದಾರೆ. ಕಾರಿನ ವೇಗ 89 ಕಿಮೀ ಅಂತರಕ್ಕೆ ಬರುವಷ್ಟರಲ್ಲಿ ರಸ್ತೆ ಮಧ್ಯದ ಡಿವೈಡರ್ ಮೇಲೆ ಡಿಕ್ಕಿಯಾಗಿ ಪಲ್ಟಿ ಹೊಡೆದಿತ್ತು. ಪಲ್ಟಿಯಾದ ರಭಸಕ್ಕೆ ಅದೇ ಬದಿಯಲ್ಲಿ ಕುಳಿತಿದ್ದ ಇಬ್ಬರು ಕೂಡ ಎದೆ ಮತ್ತು ತಲೆಗೆ ಪೆಟ್ಟು ಬಿದ್ದು ಸಾವು ಕಂಡಿದ್ದಾರೆ. ಕಾರಿನ ಇನ್ನೊಂದು ಬದಿಯಲ್ಲಿ ಕುಳಿತಿದ್ದ ಡ್ರೈವರ್ ಅನಹಿತಾ ಪಾಂಡೋಲೆ ಮತ್ತು ಅವರ ಹಿಂದಿನ ಸೀಟಿನಲ್ಲಿ ಕುಳಿತಿದ್ದ ಡೇರಿಯಸ್ ಪಾಂಡೋಲೆ ಗಾಯಗೊಂಡಿದ್ದು ಸಾವಿನಿಂದ ಪಾರಾಗಿದ್ದಾರೆ.

ಅಪಘಾತದಲ್ಲಿ ಡ್ರೈವರ್ ಬ್ರೇಕ್ ಅದುಮಿದ್ದೇ ಘಟನೆಗೆ ಕಾರಣವೇ ಎಂದು ಪೊಲೀಸರು ಮರ್ಸಿಡಿಸ್ ಬೆಂಜ್ ಕಂಪನಿ ಬಳಿ ಕೇಳಿದ್ದರು. ಪ್ರಾಥಮಿಕ ವರದಿಯನ್ನು ಕಂಪನಿ ಪ್ರತಿನಿಧಿಗಳು ನೀಡಿದ್ದಾರೆ. ಹಾಂಗ್ ಕಾಂಗ್ ನಿಂದ ತಜ್ಞರು ಬಂದು ವಿಸ್ತೃತ ವರದಿ ನೀಡಲಿದ್ದಾರೆ ಎಂದು ಕಂಪನಿ ತಿಳಿಸಿದೆ. ಅಲ್ಲದೆ, ಆರ್ ಟಿಓ ಮಾಹಿತಿ ಪ್ರಕಾರ, ಕಾರಿನಲ್ಲಿ ನಾಲ್ಕು ಏರ್ ಬ್ಯಾಗ್ ಅಳವಡಿಸಲಾಗಿತ್ತು. ಸಕಾಲದಲ್ಲಿ ಏರ್ ಬ್ಯಾಗ್ ಓಪನ್ ಆಗದೇ ಇದ್ದುದೇ ಅಪಘಾತಕ್ಕೆ ಕಾರಣವಾಗಿತ್ತು.
ಸೀಟ್ ಬೆಲ್ಟ್ ಹಾಕದ್ದರಿಂದ ಮಿಸ್ತ್ರಿ ಸಾವು
)
ಸ್ಥಳೀಯರ ಮಾಹಿತಿ ಪ್ರಕಾರ, ಸೈರಸ್ ಮಿಸ್ತ್ರಿ ಸೀಟ್ ಬೆಲ್ಟ್ ಹಾಕ್ಕೊಂಡಿರಲಿಲ್ಲ. 2017ರ ಎಸ್ ಯುವಿ ಮಾಡೆಲ್ ಕಾರು ಅದಾಗಿದ್ದು, ಅದರಲ್ಲಿ ಏಳು ಏರ್ ಬ್ಯಾಗ್ ಇರುತ್ತದೆ. ಆದರೆ, ಡ್ರೈವರ್ ಪಕ್ಕದಲ್ಲಿ ಕುಳಿತುಕೊಳ್ಳುವ ಸೀಟಿನ ಮುಂಭಾಗದಲ್ಲಿ ಏರ್ ಬ್ಯಾಗ್ ಇರಲಿಲ್ಲ. ಬದಿಯಿಂದ ಮಾತ್ರ ಏರ್ ಬ್ಯಾಗ್ ಇತ್ತು ಎನ್ನಲಾಗುತ್ತಿದೆ. ಅತಿ ವೇಗದಿಂದ ಕಾರು ಡಿವೈಡರ್ ಡಿಕ್ಕಿಯಾಗಿದ್ದರಿಂದ ಎದುರಿನ ಸೀಟಿನಲ್ಲಿ ಕುಳಿತಿದ್ದ ಸೈರಸ್ ಮಿಸ್ತ್ರಿ ಸೀಟ್ ಬೆಲ್ಟ್ ಹಾಕ್ಕೊಂಡಿಲ್ಲದ ಕಾರಣ ಮುಂಭಾಗಕ್ಕೆ ಎಸೆಯಲ್ಪಟ್ಟು ಎದೆ ಮತ್ತು ತಲೆಯ ಭಾಗಕ್ಕೆ ತೀವ್ರ ಪೆಟ್ಟು ಬಿದ್ದಿರಬೇಕೆಂದು ಶಂಕೆ ಪಡಲಾಗಿದೆ.
ಕೆಲವರ ಪ್ರಕಾರ, ಈಗಿನ ಹೈ ಎಂಡ್ ಕಾರುಗಳಲ್ಲಿ ಪ್ರಯಾಣಿಕರು ಸೀಟ್ ಬೆಲ್ಟ್ ಹಾಕ್ಕೊಂಡಿರದೇ ಇದ್ದರೆ ಏರ್ ಬ್ಯಾಗ್ ಓಪನ್ ಆಗಲ್ಲ. ಸೈರಸ್ ಮಿಸ್ತ್ರಿ ಇದ್ದ ಮರ್ಸಿಡಿಸ್ ಬೆಂಜ್ ಕಾರು ಲಕ್ಸುರಿಯೇ ಆಗಿದ್ದರೂ, ಸೀಟ್ ಬೆಲ್ಟ್ ಹಾಕಿಲ್ಲದ ಕಾರಣ ಸಕಾಲದಲ್ಲಿ ಏರ್ ಬ್ಯಾಗ್ ಓಪನ್ ಆಗಿರಲಿಲ್ಲ ಎನ್ನಲಾಗುತ್ತಿದೆ. ಮೃತಪಟ್ಟ ಮಿಸ್ತ್ರಿ ಮತ್ತು ಅವರ ಗೆಳೆಯ ಪಾಂಡೋಲೆ ಇಬ್ಬರು ಕೂಡ ಸೀಟ್ ಬೆಲ್ಟ್ ಹಾಕಿರಲಿಲ್ಲ ಎನ್ನೋದು ಸ್ಥಳೀಯರ ಮಾಹಿತಿಯಾಗಿತ್ತು.
Luxury carmaker Mercede on Thursday submitted their probe report to the Palghar Police on the road accident that killed the former Tata Sons chairman Cyrus Mistry. The company said the vehicle was going at 100 kilometres per hour (kmph) five seconds before the accident.The Regional Transport Office (RTO) also submitted their primary report to the police.Cyrus Mistry was inside a Mercedes-Benz car with three other people when the driver, Anahita Pandole, lost control of the vehicle and rammed it into a road divider.
19-12-25 10:03 pm
HK News Desk
ಪ್ರೀತ್ಸೆ ಪ್ರೀತ್ಸೆ ಎಂದು ಪೊಲೀಸ್ ಅಧಿಕಾರಿ ಹಿಂದೆ ಬ...
19-12-25 01:41 pm
ಡಿಸಿಎಂ ಡಿಕೆಶಿ ಆಪ್ತ ಕಾರ್ಯದರ್ಶಿ ಕಾರು ಅಪಘಾತ ; ಬೈ...
18-12-25 11:05 pm
Byrathi Suresh, Mangalore, Karavali: 'ಕರಾವಳಿಗ...
18-12-25 08:40 pm
ಪರಮೇಶ್ವರ್ ಸಿಎಂ ಆಗಲೆಂದು ಒಕ್ಕಲಿಗ, ಲಿಂಗಾಯತ, ದಲಿತ...
18-12-25 04:31 pm
20-12-25 01:51 pm
HK News Desk
ಮರಳುಗಾಡಿನ ನಗರಿ ದುಬೈ, ಅಬುಧಾಬಿಯಲ್ಲಿ ಭಾರೀ ಗಾಳಿ-...
19-12-25 02:40 pm
ಜೆಡ್ಡಾದಿಂದ ಕೋಝಿಕ್ಕೋಡ್ ತೆರಳುತ್ತಿದ್ದ ಏರ್ ಇಂಡಿಯ...
18-12-25 04:34 pm
ಸಮವಸ್ತ್ರ ಕಳಪೆಯೆಂದು ಸಹಪಾಠಿಗಳ ಅಣಕ ; ನೊಂದ ನಾಲ್ಕನ...
17-12-25 10:27 pm
ಆಸ್ಟ್ರೇಲಿಯಾ ಬೋಂಡಿ ಬೀಚ್ ದಾಳಿ ; ಹೈದ್ರಾಬಾದ್ ಮೂಲದ...
17-12-25 01:38 pm
20-12-25 01:09 pm
Mangalore Correspondent
ಇಂಟರ್ನ್ಯಾಶನಲ್ ಬುಕ್ ಆಫ್ ರೆಕಾರ್ಡ್ಸ್ ಸೇರಿದ ಮಂಗಳೂ...
19-12-25 09:46 pm
ಮಹಾನಗರ ಪಾಲಿಕೆ ಪೌರ ಕಾರ್ಮಿಕರ ಖಾಯಮಾತಿಗೆ ಆಗ್ರಹ ;...
19-12-25 08:22 pm
APK File, RTO challan Scam, Mangalore: ಟ್ರಾಫಿ...
19-12-25 04:43 pm
11 ವರ್ಷ ಹಿಂದಿನ ಅಪಘಾತ ಕೇಸಿನಲ್ಲಿ ಆರೋಪಿಗೆ ಸಜೆ, 2...
18-12-25 10:51 pm
18-12-25 04:53 pm
Mangaluru Correspondent
ಫ್ಲಾಟ್, ಜಾಗವನ್ನು ಮಾರಾಟ ಮಾಡಿ ಸೈಬರ್ ವಂಚಕರಿಗೆ 2...
17-12-25 11:14 am
ಕದ್ರಿಯಲ್ಲಿ ಬೈಕ್ ಕದ್ದು ಭಟ್ಕಳದಲ್ಲಿ ಮಹಿಳೆಯ ಸರ ಕಸ...
16-12-25 10:35 pm
Mangalore Crime, Robbery, Mukka: 'ಬಂಗಾರ್ ಒಲ್ಪ...
15-12-25 10:26 pm
Udupi Murder, Brahmavar, Update: ಕುಡಿದ ಮತ್ತಿನ...
15-12-25 05:37 pm