ಬ್ರೇಕಿಂಗ್ ನ್ಯೂಸ್
11-09-22 01:25 pm HK News Desk ದೇಶ - ವಿದೇಶ
ಬಿಹಾರ, ಸೆ 11: ತಮ್ಮ ಸಹೋದ್ಯೋಗಿಗಳ ಕೆಲಸ ತೃಪ್ತಿದಾಯಕವಾಗಿಲ್ಲ ಎಂದು ಕೋಪಗೊಂಡ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು (ಎಸ್ಪಿ) ತಮ್ಮ ಐವರು ಕಿರಿಯ ಪೊಲೀಸ್ ಅಧಿಕಾರಿಗಳನ್ನು ಲಾಕಪ್ನಲ್ಲಿಟ್ಟ ಘಟನೆ ಬಿಹಾರದ ನೆವಡಾ ಪೊಲೀಸ್ ಠಾಣೆಯಲ್ಲಿ ನಡೆದಿದೆ. ಈ ಘಟನೆಯನ್ನು ಆರೋಪ ಹೊತ್ತ ಅಧಿಕಾರಿ ಅಲ್ಲಗಳೆದಿದ್ದಾರೆ. ಆದ್ರೆ ಇಬ್ಬರು ಸಬ್ ಇನ್ಸ್ಪೆಕ್ಟರ್ಸ್ ಹಾಗು ಮೂವರು ಎಎಸ್ಐಗಳೂ ಸೇರಿದಂತೆ ಐವರು ಲಾಕಪ್ನಲ್ಲಿ ಬಂಧಿಯಾಗಿರುವ ಸಿಸಿಟಿವಿ ವಿಡಿಯೋ ವೈರಲ್ ಆಗಿದೆ.
ಘಟನೆಯನ್ನು ಖಂಡಿಸಿರುವ ಬಿಹಾರ ಪೊಲೀಸ್ ಅಸೋಸಿಯೋಷನ್ (ಇದು ಪೊಲೀಸ್ ಸಿಬ್ಬಂದಿಯ ಯೂನಿಯನ್ ಆಗಿದ್ದು ಜಿಲ್ಲಾ ಶಾಖೆಗಳನ್ನೂ ಹೊಂದಿದೆ) ಆರೋಪ ಹೊತ್ತಿರುವ ಪೊಲೀಸ್ ಅಧಿಕಾರಿ ಗೌರವ್ ಮಂಗ್ಲಾ ವಿರುದ್ಧ ತನಿಖೆಗೆ ಆಗ್ರಹಿಸಿದೆ. ಈ ಪ್ರಕರಣ ಸೆಪ್ಟೆಂಬರ್ 8ರಂದು ನಡೆದಿದೆ ಎಂದು ತಿಳಿದುಬಂದಿದೆ.
ಭದ್ರತಾ ಸಿಸಿಟಿವಿ ಕ್ಯಾಮರಾದಲ್ಲಿ, ಸಬ್ ಇನ್ಸ್ಪೆಕ್ಟರ್ಗಳಾದ ಶತ್ರುಘ್ನ ಪಾಸ್ವಾನ್, ರಾಮ್ರೇಖಾ ಸಿಂಗ್, ಎಎಸ್ಐಗಳಾದ ಸಂತೋಷ್ ಪಾಸ್ವಾನ್, ಸಂಜಯ್ ಸಿಂಗ್ ಮತ್ತು ರಾಮೇಶ್ವರ್ ಒರಾನ್ ನೆವಾಡಾ ಪೊಲೀಸ್ ಠಾಣೆಯ ಲಾಕಪ್ನಲ್ಲಿ ಇರುವುದು ಕಂಡುಬರುತ್ತದೆ. ಇವರನ್ನು ಎಸ್ಪಿ, ಮಧ್ಯರಾತ್ರಿ ಸುಮಾರು 2 ಗಂಟೆಗೂ ಹೆಚ್ಚು ಕಾಲ ಲಾಕಪ್ನಲ್ಲಿ ಇಟ್ಟಿದ್ದರು ಎಂದು ಹೇಳಲಾಗುತ್ತಿದೆ.
ಐವರು ಪೊಲೀಸರನ್ನೇ ಲಾಕಪ್ನಲ್ಲಿಟ್ಟ ಎಸ್ಪಿ
ತಮ್ಮ ಮೇಲೆ ಬಂದಿರುವ ಗಂಭೀರ ಆರೋಪಕ್ಕೆ ಪ್ರತಿಕ್ರಿಯಿಸಿ, ಅಂಥ ಯಾವುದೇ ಘಟನೆ ನಡೆದಿಲ್ಲ ಎಂದಿದ್ದಾರೆ.
ಆದರೆ ವಿಶ್ವಸನೀಯ ಮೂಲಗಳು ನೀಡಿರುವ ಮಾಹಿತಿಯಂತೆ, ಸೆಪ್ಟೆಂಬರ್ 8ರ ರಾತ್ರಿ ಸುಮಾರು 9 ಗಂಟೆಗೆ ಎಸ್ಪಿ ಮಂಗ್ಲಾ ವಿವಿಧ ಪ್ರಕರಣಗಳ ತನಿಖೆಯ ಬೆಳವಣಿಗೆಯನ್ನು ಪರಿಶೀಲಿಸಲು ನೆವಾಡಾ ಪೊಲೀಸ್ ಠಾಣೆಗೆ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ಕೆಲವು ಅಧಿಕಾರಿಗಳು ಕೆಲಸದಲ್ಲಿ ಬೇಜವಾಬ್ದಾರಿತನ ತೋರಿರುವುದು ಅವರ ಗಮನಕ್ಕೆ ಬಂದಿದೆ. ತಕ್ಷಣ ಸಿಟ್ಟಾದ ಅಧಿಕಾರಿ ಪ್ರಕರಣದಲ್ಲಿ ನಿರ್ಲಕ್ಷ್ಯ ವಹಿಸಿದ ಪೊಲೀಸರನ್ನು ಲಾಕಪ್ನಲ್ಲಿಡುವಂತೆ ಆದೇಶಿಸಿದ್ದಾರೆ. ಆದ್ರೆ ಪ್ರಕರಣದಲ್ಲಿ ಕೆಳ ಹಂತದ ಅಧಿಕಾರಿಗಳು ಎಸಗಿದ ಬೇಜವಾಬ್ದಾರಿತನ ಏನು ಎನ್ನುವುದು ಸದ್ಯಕ್ಕೆ ತಿಳಿದುಬಂದಿಲ್ಲ.
A superintendent of police in Bihar’s Nawada district allegedly put five of his subordinates inside a lockup for two hours, after he found their work dissatisfactory. The matter came to light after a video went viral on social media, in which five Bihar cops can be seen standing inside a lockup and talking.
17-05-24 10:47 pm
HK News Desk
Ramnagara Drowning, Three killed: ರಾಮನಗರ ; ಹೊ...
17-05-24 04:55 pm
Hubballi Anjali Murder, Vishwa Arrest: ಹುಬ್ಬಳ...
17-05-24 12:30 pm
South Teachers Constituency, Srikantegowda:...
16-05-24 10:37 pm
Hassan News, Drowning: ಹಾಸನ ; ಕೆರೆಯಲ್ಲಿ ಈಜಲು...
16-05-24 07:17 pm
17-05-24 09:56 pm
HK News Desk
PM Modi, Ayodhya Ram Temple, Yogi Adityanath:...
17-05-24 05:59 pm
Cannes 2024, Aishwarya Rai Bachchan: ಕೇನ್ಸ್ ಚ...
17-05-24 02:44 pm
Girl dies inside cae, marrige Rajasthan: ಮದುವ...
16-05-24 04:30 pm
PM Modi, Hindu-Muslim: ನಾನೆಂದಿಗೂ ಹಿಂದು- ಮುಸ್ಲ...
15-05-24 02:05 pm
17-05-24 09:17 pm
Mangalore Correspondent
MLA Ashok Rai Puttur: ಶಾಸಕನಾಗಿ ಒಂದು ವರ್ಷ ; ಜನ...
17-05-24 04:32 pm
Mangalore Airport, Missing: ಕದ್ರಿಯಿಂದ ಆಟೋದಲ್ಲ...
16-05-24 09:59 pm
Mangalore NIA, Terror, Ammar Abdul Rahiman, I...
16-05-24 05:38 pm
Mangalore accident, Kallapu: ಹೆದ್ದಾರಿ ಕ್ರಾಸ್...
16-05-24 02:48 pm
17-05-24 09:52 pm
HK News Desk
Kalaburagi police bus, crime: ಕುಡಿದ ನಶೆಯಲ್ಲಿ...
17-05-24 07:23 pm
7-8 ಬಾರಿ ಎದೆ, ಹೊಟ್ಟೆಗೆ ತಿವಿದಿದ್ದಾನೆ, ನೆಲಕ್ಕೆ...
17-05-24 05:38 pm
Bangalore crime, Police: ಇವ್ನು ಬೆಸ್ಕಾಂ ಸಹಾಯಕ...
17-05-24 05:17 pm
Bangalore crime, Fraud, Parameshwara ministe...
17-05-24 02:09 pm