ಬ್ರೇಕಿಂಗ್ ನ್ಯೂಸ್
22-09-22 10:56 pm HK News Desk ದೇಶ - ವಿದೇಶ
ನವದೆಹಲಿ, ಸೆ.22 : ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್ ನಿಷೇಧಿಸಿ ಕರ್ನಾಟಕ ಹೈಕೋರ್ಟ್ ನೀಡಿರುವ ತೀರ್ಪನ್ನು ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಗಳ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಸತತ ಹತ್ತು ದಿನಗಳ ಕಾಲ ನಡೆಸಿದ್ದು, ತೀರ್ಪನ್ನು ಕಾಯ್ದಿರಿಸಿದೆ. ಹೀಗಾಗಿ ಹಿಜಾಬ್ ಕುರಿತ ತೀರ್ಪಿನ ಬಗ್ಗೆ ಸಹಜ ಕುತೂಹಲ ಉಂಟಾಗಿದೆ.
ಹಿಜಾಬ್ ಪರ ಮತ್ತು ಕರ್ನಾಟಕ ಸರಕಾರದ ಪರ ವಾದಗಳನ್ನು ಆಲಿಸಿದ ಹೇಮಂತ್ ಗುಪ್ತಾ ಮತ್ತು ಸುಧಾಂಶು ಧುಲಿಯಾ ಅವರಿದ್ದ ನ್ಯಾಯಪೀಠವು ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್ ಧರಿಸಬಹುದೇ ಎಂಬ ಬಗ್ಗೆ ತೀರ್ಪು ನೀಡಲಿದೆ.
ಹತ್ತು ದಿನಗಳಲ್ಲಿ ಹಿಜಾಬ್ ಕುರಿತು ತೀವ್ರ ವಾದ ಪ್ರತಿವಾದ ನಡೆದಿದ್ದು ಅರ್ಜಿದಾರರ ಕಡೆಯಿಂದ ಸುಮಾರು 21 ವಕೀಲರು ವಾದ ಮಂಡಿಸಿದ್ದಾರೆ. ಕರ್ನಾಟಕ ಸರಕಾರದ ಪರವಾಗಿ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಹೆಚ್ಚುವರಿ ಸಾಲಿಟರ್ ಜನರಲ್ ಕೆಎಂ ನಟರಾಜು, ಕರ್ನಾಟಕದ ಅಡ್ವೊಕೇಟ್ ಜನರಲ್ ಪ್ರಭುಲಿಂಗ್ ನಾವದಗಿ ಪ್ರತಿವಾದ ನಡೆಸಿದ್ದಾರೆ.
ಮುಸ್ಲಿಂ ಮಹಿಳೆಯರು ಹಿಜಾಬ್ ಧರಿಸುವುದು ಇಸ್ಲಾಂ ಧರ್ಮದಲ್ಲಿ ಅಗತ್ಯ ಧಾರ್ಮಿಕ ಆಚರಣೆಯ ಭಾಗವಾಗಿಲ್ಲ ಎಂದು ಕರ್ನಾಟಕ ಹೈಕೋರ್ಟ್ ಮಾರ್ಚ್ 15 ರಂದು ತೀರ್ಪು ನೀಡಿತ್ತು. ಅದನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ನಲ್ಲಿ ಮೇಲ್ಮನವಿ ಸಲ್ಲಿಸಲಾಗಿತ್ತು. ಅರ್ಜಿದಾರರಲ್ಲಿ ವಿದ್ಯಾರ್ಥಿನಿಯರು, ಮಹಿಳಾ ಹಕ್ಕು ಹೋರಾಟಗಾರರು, ವಕೀಲರು ಮತ್ತು ಇಸ್ಲಾಮಿಕ್ ಸಂಸ್ಥೆಗಳು ಸೇರಿದ್ದಾರೆ.
The Supreme Court on September 22 reserved its judgment in a batch of petitions challenging the prohibition on Muslim students from wearing hijab in classrooms in Karnataka.A Bench of Justices Hemant Gupta and Sudhanshu Dhulia wrapped up the case for verdict after hearing the arguments presented by lawyers for petitioner-students and the State for 10 days.
11-12-23 05:11 pm
Bangalore Correspondent
ಬೆಳಗಾವಿ ; ಪ್ರೀತಿಸಿ ಮನೆಯಿಂದ ಓಡಿ ಹೋದ ಜೋಡಿ, ಯುವಕ...
11-12-23 01:00 pm
Madikeri suicide resort: ಕೊಡಗು ; ರೆಸಾರ್ಟ್ನಲ್...
09-12-23 05:33 pm
Bangalore, Actress Leelavathis, PM Modi: ನಟಿ...
08-12-23 10:23 pm
Bangalore, Cm Ibrahim, H. D. Kumaraswamy: ಹೆಚ...
08-12-23 09:55 pm
11-12-23 07:34 pm
HK News Desk
NewDelhi, Supreme Court, Article 370: ಆರ್ಟಿಕಲ...
11-12-23 01:42 pm
Kerala, Sabrimala temple: ಶಬರಿಮಲೆ ದೇಗುಲದಲ್ಲಿ...
11-12-23 12:29 pm
ಪಾಸ್ಪೋರ್ಟ್ ವೆರಿಫಿಕೇಶನ್ಗಾಗಿ ಪೊಲೀಸ್ ಠಾಣೆಗೆ...
09-12-23 11:49 am
Chennai, schools, colleges, holiday; ತಮಿಳುನಾಡ...
08-12-23 02:22 pm
11-12-23 08:00 pm
Mangalore Correspondent
ಪಂಚಾಯತ್ ಪುರಸಭೆಯಾದರೂ ನಾಲ್ಕು ವರ್ಷದಿಂದ ಅಧಿಕಾರಿಗಳ...
11-12-23 04:39 pm
Mangalore, Nursing student, suicide: ನರ್ಸಿಂಗ್...
11-12-23 01:51 pm
Puttur, moral Policing: ಉಪ್ಪಿನಂಗಡಿ ; ಮುಸ್ಲಿಂ...
10-12-23 04:17 pm
Mangalore News, Someshwar Beach: ಸೋಮೇಶ್ವರದಲ್ಲ...
10-12-23 12:06 pm
11-12-23 06:58 pm
Mangalore Correspondent
Drug parcel fruad, Mumbai police, Bangalore N...
11-12-23 11:35 am
Mangalore, Boat workers, killed: ತಣ್ಣೀರುಬಾವಿ...
10-12-23 04:26 pm
Mrpl News,Crime: ಎಂಆರ್ ಪಿಎಲ್ ಟ್ಯಾಂಕರ್ ನಿಂದ ಡಾ...
09-12-23 10:33 pm
NIA Raid, Karnataka, ISIS: ಐಸಿಸ್ ಉಗ್ರರೊಂದಿಗೆ...
09-12-23 03:50 pm